‘ಪ್ರಜಾವಾಣಿ’ ವರದಿ ನೋಡಿದ ಅನೇಕರು ಇಂಥ ಸಣ್ಣ ತಪ್ಪುಗಳೇ ಜನರನ್ನು ದಾರಿ ತಪ್ಪಿಸುತ್ತವೆ. ಮೂರು ತಿಂಗಳಾದರೂ ಜಿಲ್ಲೆಯ ಪ್ರಮುಖ ಹುದ್ದೆಯ ಅಧಿಕಾರಿಯ ಹೆಸರನ್ನು ಬದಲಾಯಿಸದೇ ಇರುವುದು ಸರಿಯಲ್ಲ. ಇನ್ನು ಮುಂದೆಯಾದರೂ ಕಾಲಕಾಲಕ್ಕೆ ಅಧಿಕಾರಿಗಳು ಬದಲಾವಣೆ ಆದಾಗ ತಕ್ಷಣವೇ ಸರಿಪಡಿಸುವ ಕೆಲಸ ಆಗಬೇಕು. ವರದಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.