<p><strong>ಚಿಂಚೋಳಿ:</strong> ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ 70745 ಹೆಕ್ಟೇರ್ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ನಿಗದಿಪಡಿಸಿದೆ ಎಂದು ಸಹಾಯಕ ನಿರ್ದೇಶಕರಾದ ಜಾನಕಿಬಾಯಿ ಬಳವಾಟ್ ತಿಳಿಸಿದ್ದಾರೆ.<br /> <br /> 70745 ಹೆಕ್ಟೇರ್ನಲ್ಲಿ ಸಿಂಹಪಾಲು ಪ್ರದೇಶ ಬೇಳೆಕಾಳು (ದ್ವಿದಳ ಧಾನ್ಯ)ಗಳ ಬೇಸಾಯಕ್ಕೆ 62825 ಹೆಕ್ಟೇರ್ ಪ್ರದೇಶ ನಿಗದಿಯಾಗಿದೆ ಎಂದರು. ಕ್ರಮವಾಗಿ ಧಾನ್ಯದ ಹೆಸರು, ಬಿತ್ತನೆಗೆ ನಿಗದಿಯಾಗಿ ಕ್ಷೇತ್ರ ಹೆಕ್ಟೇರ್ಗಳಲ್ಲಿ ವಿವರಿಸಲಾಗಿದೆ.<br /> <br /> ದ್ವಿದಳ ಧಾನ್ಯಗಳಾದ ತೊಗರಿ -49100, ಉದ್ದು -9000, ಹೆಸರು -4250, ಅಲಸಂದಿ -250, ಮಟಕಿ -100, ಅವರೆ -75, ಹುರುಳಿ -50 ಹೀಗೆ ಒಟ್ಟು 62825 ಹೆಕ್ಟೇರ್ ಗುರಿಯಿದೆ.<br /> <br /> ಏಕದಳ ಧಾನ್ಯಗಳು 2190 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ. ಸಜ್ಜೆ -1000, ಜೋಳ -700, ಮೆಕ್ಕೆಜೋಳ -300, ಬತ್ತ -100, ಇತರೆ -90. ಎಣ್ಣೆಕಾಳು ಬೆಳೆಗಳಿಗೆ 2730 ಹೆಕ್ಟೇರ್ ಗುರಿಯಿದೆ. ಇದರಲ್ಲಿ ಎಳ್ಳು -1000, ಸೂರ್ಯಕಾಂತಿ -1000, ಸೋಯಾ -350, ಗುರೆಳ್ಳು -250, ಸೇಂಗಾ -100 ಗುರಿಯಿದೆ.<br /> <br /> ಬೀಜಗಳಿಗೆ ಕೊರತೆಯಿಲ್ಲ: ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಿರುವ ಬೀಜಗಳ ದಾಸ್ತಾನು ಮಾಡಲಾಗಿದೆ. ಸದ್ಯ ಯಾವುದೇ ಬೀಜಗಳ ಕೊರತೆಯಿಲ್ಲ. ಉದ್ದಿನ ಬದಲಾಗಿ ಪ್ರಸಕ್ತ ವರ್ಷ ರೈತರು ಸೋಯಾ ಬೀಜದತ್ತ ತಮ್ಮ ಚಿತ್ತ ಹರಿಸಿದ್ದು, ಸೋಯಾಗೆ ಹೆಚ್ಚಿನ ಬೇಡಿಕೆ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ:</strong> ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ 70745 ಹೆಕ್ಟೇರ್ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ನಿಗದಿಪಡಿಸಿದೆ ಎಂದು ಸಹಾಯಕ ನಿರ್ದೇಶಕರಾದ ಜಾನಕಿಬಾಯಿ ಬಳವಾಟ್ ತಿಳಿಸಿದ್ದಾರೆ.<br /> <br /> 70745 ಹೆಕ್ಟೇರ್ನಲ್ಲಿ ಸಿಂಹಪಾಲು ಪ್ರದೇಶ ಬೇಳೆಕಾಳು (ದ್ವಿದಳ ಧಾನ್ಯ)ಗಳ ಬೇಸಾಯಕ್ಕೆ 62825 ಹೆಕ್ಟೇರ್ ಪ್ರದೇಶ ನಿಗದಿಯಾಗಿದೆ ಎಂದರು. ಕ್ರಮವಾಗಿ ಧಾನ್ಯದ ಹೆಸರು, ಬಿತ್ತನೆಗೆ ನಿಗದಿಯಾಗಿ ಕ್ಷೇತ್ರ ಹೆಕ್ಟೇರ್ಗಳಲ್ಲಿ ವಿವರಿಸಲಾಗಿದೆ.<br /> <br /> ದ್ವಿದಳ ಧಾನ್ಯಗಳಾದ ತೊಗರಿ -49100, ಉದ್ದು -9000, ಹೆಸರು -4250, ಅಲಸಂದಿ -250, ಮಟಕಿ -100, ಅವರೆ -75, ಹುರುಳಿ -50 ಹೀಗೆ ಒಟ್ಟು 62825 ಹೆಕ್ಟೇರ್ ಗುರಿಯಿದೆ.<br /> <br /> ಏಕದಳ ಧಾನ್ಯಗಳು 2190 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ. ಸಜ್ಜೆ -1000, ಜೋಳ -700, ಮೆಕ್ಕೆಜೋಳ -300, ಬತ್ತ -100, ಇತರೆ -90. ಎಣ್ಣೆಕಾಳು ಬೆಳೆಗಳಿಗೆ 2730 ಹೆಕ್ಟೇರ್ ಗುರಿಯಿದೆ. ಇದರಲ್ಲಿ ಎಳ್ಳು -1000, ಸೂರ್ಯಕಾಂತಿ -1000, ಸೋಯಾ -350, ಗುರೆಳ್ಳು -250, ಸೇಂಗಾ -100 ಗುರಿಯಿದೆ.<br /> <br /> ಬೀಜಗಳಿಗೆ ಕೊರತೆಯಿಲ್ಲ: ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಿರುವ ಬೀಜಗಳ ದಾಸ್ತಾನು ಮಾಡಲಾಗಿದೆ. ಸದ್ಯ ಯಾವುದೇ ಬೀಜಗಳ ಕೊರತೆಯಿಲ್ಲ. ಉದ್ದಿನ ಬದಲಾಗಿ ಪ್ರಸಕ್ತ ವರ್ಷ ರೈತರು ಸೋಯಾ ಬೀಜದತ್ತ ತಮ್ಮ ಚಿತ್ತ ಹರಿಸಿದ್ದು, ಸೋಯಾಗೆ ಹೆಚ್ಚಿನ ಬೇಡಿಕೆ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>