ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ದ್ರೋಹ ಬಗೆದಿದೆ. ಮತ ಬ್ಯಾಂಕ್ಗಾಗಿ ಬ್ರಾಹ್ಮಣ ಸಮುದಾಯ ಬಳಸಿಕೊಳ್ಳುತ್ತಿದೆ. ಆದರೆ, ಸ್ಥಾನಮಾನ ನೀಡಲು ಹಿಂದೇಟು ಹಾಕುತ್ತಿದೆ. ಲಿಂಗಾಯತ ಸಮುದಾಯದ ಆಯನೂರು ಅವರನ್ನು ಪದವೀಧರರ ಕ್ಷೇತ್ರದಲ್ಲಿ ಗೆಲ್ಲಿಸಿಕೊಂಡ ಅವರು ಬ್ರಾಹ್ಮಣ ಸಮುದಾಯದ ಗಣೇಶ್ ಕಾರ್ಣಿಕ್ ಅವರು ಗೆಲ್ಲದ ಹಾಗೆ ನೋಡಿಕೊಂಡರು ಎಂದು ದೂರಿದರು.