<p><strong>ರಾಮನಗರ: </strong>ಅರ್ಥಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ಅವರ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ಕನಕಪುರ ತಾಲ್ಲೂಕಿನ ಗಡಿ ಗ್ರಾಮವಾದ ಬಿಜ್ಜಹಳ್ಳಿಯಲ್ಲಿ ನಡೆಯುತ್ತಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಹ್ದ್ದುದೆ ಸಹಿತ ಸ್ಥಳಾಂತರಿಸಿ ಸರ್ಕಾರ ಆದೇಶ ಹೊರಡಿಸಿದೆ ! ಇದರಿಂದ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಗ್ರಾಮದ ಜನತೆ ಕಂಗಾಲಾಗಿದ್ದಾರೆ.<br /> <br /> ಅದೂ ಈ ಕಾಲೇಜನ್ನು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೆಗ್ಗರಣಿಗೆ ಸ್ಥಳಾಂತರಿಸಿ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ (ಪದವಿ ಪೂರ್ವ) ಎಸ್.ಎಚ್.ಕುರಿಯವರ್ ಅವರು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ !<br /> <br /> ಗ್ರಾಮೀಣ ಹಾಗೂ ಗಡಿ ಭಾಗದ ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ವ್ಯಾಸಂಗ ಮೊಟಕುಗೊಳಿಸದೆ, ಹೆಚ್ಚಿನ ಶಿಕ್ಷಣ ಪಡೆಯಲಿ ಎಂಬ ಸದುದ್ದೇಶದಿಂದ ಮೂರು ವರ್ಷದ ಹಿಂದೆ ಸರ್ಕಾರ ಕನಕಪುರದ ಕೋಡಿಹಳ್ಳಿ ಹೋಬಳಿಯ ಬಿಜ್ಜಹಳ್ಳಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಿಸಿತ್ತು.<br /> <br /> ಆದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣವೊಡ್ಡಿ ಶಿಕ್ಷಣ ಸಚಿವರು ಈ ಕಾಲೇಜನ್ನು ತನ್ನ ತವರೂರಿಗೆ ಕೊಂಡೊಯ್ದಿದ್ದಾರೆ ಎಂಬ ಆರೋಪ ಗ್ರಾಮದ ಜನತೆಯದ್ದಾಗಿದೆ.<br /> <br /> ಹೊಸ ಸರ್ಕಾರಿ ಪಿ.ಯು ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡದ ಶಿಕ್ಷಣ ಇಲಾಖೆಯು ಚುನಾಯಿತ ಪ್ರತಿನಿಧಿಗಳು ಬೇಡಿಕೆಯೊಡ್ಡುವ ಕಡೆ ಕಾಲೇಜುಗಳನ್ನು ಒದಗಿಸಿಕೊಡಲು ಈ ರೀತಿಯ ತಂತ್ರ ಅನುಸರಿಸುತ್ತಿದೆ. <br /> <br /> ಕನಿಷ್ಠ 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಇರುವ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಅಗತ್ಯವಿರುವ ಸ್ಥಳಗಳಿಗೆ ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಕನಕಪುರದ ಬಿಜ್ಜಹಳ್ಳಿ ಕಾಲೇಜು ಬಲಿಪಶುವಾಗಿದೆ.<br /> <br /> <strong>ಗಡಿ ಗ್ರಾಮದ ಸಂಕಟ</strong>: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಗಡಿ ಗ್ರಾಮಗಳಲ್ಲಿ ಬಿಜ್ಜಹಳ್ಳಿ ಕೂಡ ಒಂದು. ಕನಕಪುರದಿಂದ 28 ಕಿ.ಮೀ ದೂರ ಇರುವ ಬಿಜ್ಜಹಳ್ಳಿಯಿಂದ ಮೂರು- ನಾಲ್ಕು ಕಿ.ಮೀ ಸಮೀಪದಲ್ಲಿಯೇ ತಮಿಳುನಾಡು ಭೂಪ್ರದೇಶ ಇದೆ.<br /> <br /> ಮೂರು ವರ್ಷದಿಂದ ಗ್ರಾಮದ ಸಮುದಾಯ ಭವನದಲ್ಲಿ ಪಿ.ಯು ಕಾಲೇಜು ನಡೆದುಕೊಂಡು ಹೋಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರೇ ಹೆಚ್ಚಿರುವ ಈ ಪ್ರದೇಶದಲ್ಲಿ ಈ ಸಮುದಾಯದ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಾಲೇಜು ವರವಾಗಿದೆ.<br /> <br /> ಹಾಗಾಗಿ ಗಡಿ ಪ್ರದೇಶದ ಹಲವು ವಿದ್ಯಾರ್ಥಿಗಳು ಇಲ್ಲಿಯೇ ಪಿ.ಯು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವರ್ಷ ಕಾಲೇಜಿಗೆ ಉತ್ತಮ ಫಲಿತಾಂಶವೂ ಬಂದಿದೆ. ಈ ವರ್ಷ 18 ವಿದ್ಯಾರ್ಥಿಗಳು (ಪ್ರಥಮ 9, ದ್ವಿತೀಯ 9) ವ್ಯಾಸಂಗ ನಡೆಸುತ್ತಿದ್ದಾರೆ. <br /> <br /> ಈಗ ಕಾಲೇಜನ್ನು ಮುಚ್ಚಿದರೆ ಈ ವಿದ್ಯಾರ್ಥಿಗಳ ವ್ಯಾಸಂಗ ಅರ್ಧಕ್ಕೆ ಮೊಟಕಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಧರೇಶ್ `ಪ್ರಜಾವಾಣಿ~ ಬಳಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.<br /> <br /> ಇನ್ನೂ ಎರಡು ವರ್ಷ ಸಮಯ ನೀಡಿದರೆ ಕಾಲೇಜಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ದಾಖಲಿಸಲು ಶಕ್ತಿ ಮೀರಿ ಗ್ರಾಮ ಜನತೆಯೆಲ್ಲ ಪ್ರಯತ್ನಿಸುತ್ತೇವೆ. ಗಡಿಭಾಗದಲ್ಲಿನ ಶೋಷಿತ ಸಮುದಾಯದ ಜನತೆಯ ಮಕ್ಕಳ ವ್ಯಾಸಂಗಕ್ಕಾಗಿ ದೊರೆತಿರುವ ಕಾಲೇಜನ್ನು ಕಸಿದುಕೊಳ್ಳದಿರಲು ಅವರು ಶಿಕ್ಷಣ ಸಚಿವರನ್ನು ಕೋರುತ್ತಾರೆ.<br /> <br /> <strong>ಅವೈಜ್ಞಾನಿಕ ನಿರ್ಧಾರ:</strong> ಈಗಾಗಲೇ ಪ್ರಥಮ ಮತ್ತು ದ್ವಿತೀಯ ಪಿ.ಯು ಪ್ರವೇಶ ಪಡೆದು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಂತೂ ಕಾಲೇಜು ಮುಚ್ಚುವ ಸರ್ಕಾರದ ನಿರ್ಧಾರ ಬರಸಿಡಿಲಿನಂತೆ ಬಂದೆರಗಿದೆ. <br /> <br /> ಕಾರಣ ಕನಕಪುರ ತಾಲ್ಲೂಕಿನಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ (ಎಚ್ಇಪಿಎಸ್) ಸಂಯೋಜನೆಯ ಕೋರ್ಸ್ಗಳನ್ನು ಹೊಂದಿರುವ ಕೆಲವೇ ಕೆಲವು ಕಾಲೇಜುಗಳಲ್ಲಿ ಬಿಜ್ಜಹಳ್ಳಿ ಗ್ರಾಮದ ಕಾಲೇಜು ಕೂಡ ಒಂದು.<br /> <br /> ಬಿಜ್ಜಹಳ್ಳಿಯಿಂದ 10 ಕಿ.ಮೀ ದೂರದಲ್ಲಿರುವ ಕೊಡಿಹಳ್ಳಿ ಕಾಲೇಜು ಹಾಗೂ 28 ಕಿ.ಮೀ ದೂರ ಇರುವ ಕನಕಪುರ ತಾಲ್ಲೂಕಿನ ಸರ್ಕಾರಿ ಪಿ.ಯು ಕಾಲೇಜುಗಳಲ್ಲೆಲ್ಲೂ ಈ ಸಂಯೋಜನೆಯ ಕೋರ್ಸ್ಗಳಿಲ್ಲ. ಈ ಭಾಗದ ಬಹುತೇಕ ಕಾಲೇಜುಗಳಲ್ಲಿ ಇರುವುದು ಎಚ್ಇಜಿಎಸ್, ಎಚ್ಇಪಿಕೆ, ಎಚ್ಇಎಸ್ಕೆ ಸಂಯೋಜನೆಯ ಕೋರ್ಸ್ಗಳು.<br /> <br /> `ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಕ್ತಾಯವಾಗಿರುವ ಸಂದರ್ಭದಲ್ಲಿ ಸರ್ಕಾರ ಕಾಲೇಜನ್ನು ದೂರದ ಬೇರಾವುದೋ ಜಿಲ್ಲೆಗೆ ಸ್ಥಳಾಂತರಿಸಿದರೆ ನಾವ್ಲ್ಲೆಲಿ ವ್ಯಾಸಂಗ ಮಾಡುವುದು~ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ. <br /> <br /> `ನಮ್ಮ ಕಾಲೇಜಿನಲ್ಲಿರುವ ಸಂಯೋಜನೆ ಹೊಂದಿದ ಕೋರ್ಸ್ಗಳು ಹತ್ತಿರದ ಯಾವ ಕಾಲೇಜಲ್ಲೂ ಇಲ್ಲದ ಕಾರಣ, ಈ ಕೋರ್ಸ್ಗಳಿಗೆ ನಾವು ಬೆಂಗಳೂರು, ರಾಮನಗರ ಅಥವಾ ಚನ್ನಪಟ್ಟಣಕ್ಕೆ ಹೋಗಬೇಕಾಗುತ್ತದೆ. ಅಲ್ಲಿ ಹೊಸದಾಗಿ ಪ್ರವೇಶ ಪಡೆದು, ನಿತ್ಯ ಸಾರಿಗೆ ವೆಚ್ಚ ಭರಿಸುತ್ತಾ ವ್ಯಾಸಂಗ ಮಾಡುವ ಶಕ್ತಿ ನಮ್ಮೆಲ್ಲಿಲ್ಲ. ಹಾಗಾಗಿ ಈ ಕಾಲೇಜು ನಮ್ಮೂರನ್ನು ಬಿಟ್ಟು ಹೋಯಿತು ಎಂದರೆ, ನಮ್ಮ ಮುಂದಿನ ವ್ಯಾಸಂಗಕ್ಕೆ ಕತ್ತರಿ ಬಿತ್ತು ಎಂದೇ ಅರ್ಥ~ ಎಂದು ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಳ್ಳುತ್ತಾರೆ.<br /> <br /> <strong>ಉಪನ್ಯಾಸಕರ ಅಸಮಾಧಾನ: </strong>ಇನ್ನೂ ಎರಡು ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತದೆ. ಆದರೆ ಸರ್ಕಾರ ಈಗ ಏಕಾಏಕಿ ಕಾಲೇಜು ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಂಡಿದೆ. ಅದೂ ಶೈಕ್ಷಣಿಕ ವರ್ಷ ಅರ್ಧ ಮುಗಿದಿರುವ ಸಂದರ್ಭದಲ್ಲಿ ಈ ಆದೇಶ ಹೊರಬಿದ್ದಿರುವುದು ವಿದ್ಯಾರ್ಥಿಗಳು ಮತ್ತು ನಮ್ಮನ್ನು ಆತಂಕಕ್ಕೆ ತಳ್ಳಿದೆ ಎಂದು ಉಪನ್ಯಾಸಕರು ಬೇಸರ ವ್ಯಕ್ತಪಡಿಸುತ್ತಾರೆ.<br /> <br /> `ಕಾಲೇಜಿನ ಉಪನ್ಯಾಸಕರು ಕನಕಪುರ, ಕೋಡಿಹಳ್ಳಿ ಮತ್ತು ಬಿಜ್ಜಹಳ್ಳಿಯಲ್ಲಿ ಮನೆಯನ್ನು ಬೋಗ್ಯಕ್ಕೆ ಹಾಕಿಸಿಕೊಂಡಿದ್ದೇವೆ. ಈಗ ಮಧ್ಯಂತರ ಅವಧಿಯಲ್ಲಿ ಮನೆ ಮಾಲೀಕರು ನಮ್ಮ ಹಣವನ್ನೂ ವಾಪಸು ಮಾಡುವುದಿಲ್ಲ. <br /> <br /> ನಾವು ಸಿದ್ದಾಪುರದ ಹೆಗ್ಗರಣಿಗೆ ಹೋಗಿ ಮನೆ ಮಾಡಿ, ನಮ್ಮ ಮಕ್ಕಳಿಗೆ ಹೊಸ ಶಾಲಾ- ಕಾಲೇಜುಗಳಲ್ಲಿ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಿಕೊಡುವುದು ಕಷ್ಟವಾಗುತ್ತದೆ~ ಎನ್ನುತ್ತಾರೆ ಉಪನ್ಯಾಸಕರು.ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 5 ಇದ್ದರೂ ಮುಂದುವರೆಯಲು ಅವಕಾಶ ನೀಡುವ ಸರ್ಕಾರ ಗಡಿಭಾಗದ ಪಿ.ಯು ಕಾಲೇಜಿನಲ್ಲಿ 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎಂದು ಮುಚ್ಚಲು ನಿರ್ಧಾರ ತೆಗೆದುಕೊಳ್ಳುವುದು ನ್ಯಾಯ ಸಮ್ಮತವಲ್ಲ. <br /> <br /> ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿನಾಡು ಪ್ರದೇಶಗಳ ಹೋರಾಟ ಸಮಿತಿಯ ಅಧ್ಯಕ್ಷರಿಗೆ ದೂರು ನೀಡಲಾಗುವುದು ಎಂದು ಬಿಜ್ಜಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಧರೇಶ್ ಹೇಳುತ್ತಾರೆ.<br /> <strong>ಶಿಕ್ಷಣ ಸಚಿವರಿಗೆ ಡಿಕೆಶಿ ಪತ್ರ<br /> </strong><br /> `ನನ್ನ ಮತ ಕ್ಷೇತ್ರ ಡಾ. ನಂಜುಂಡಪ್ಪ ವರದಿ ಮೇರೆಗೆ ಅತಿ ಹಿಂದುಳಿದ ಪ್ರದೇಶ ಆಗಿರುವುದರಿಂದ ಗ್ರಾಮೀಣ ಪ್ರದೇಶದ ಶಿಕ್ಷಣದ ದೃಷ್ಟಿಯಿಂದ ಬೇರೆ ಕಡೆಗೆ ಸ್ಥಳಾಂತರ ಮಾಡದೆ ಬಿಜ್ಜಹಳ್ಳಿಯಲ್ಲಿಯೇ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಮುಂದುವರೆಸುವಂತೆ~ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿದ್ದಾರೆ.<br /> <br /> `ಒಂದು ವೇಳೆ ಸದರಿ ಗ್ರಾಮದಲ್ಲಿ ಕಾಲೇಜು ಮುಂದುವರೆಸಲು ಸಾಧ್ಯವಾಗದಿದ್ದರೆ, ಈಗಾಗಲೇ ಅನೇಕ ಬಾರಿ ನಾನು ಕೊರಿರುವಂತೆ ಕನಕಪುರದ ಚಿಕ್ಕಮುದುವಾಡಿ ಗ್ರಾಮಕ್ಕೆ ಬದಲಾಯಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡುವಂತೆ~ ಅವರು ಕೋರಿದ್ದಾರೆ.<br /> <br /> <strong>ಮುಖ್ಯಾಂಶಗಳು<br /> </strong>ಕನಕಪುರದ ಗಡಿಗ್ರಾಮ ಬಿಜ್ಜಹಳ್ಳಿಯ ಸರ್ಕಾರಿ ಪಿ.ಯು ಕಾಲೇಜು ಎತ್ತಂಗಡಿ !<br /> <br /> ಶಿಕ್ಷಣ ಸಚಿವ ಕಾಗೇರಿ ಅವರ ಜಿಲ್ಲೆಗೆ ಹುದ್ದೆ ಸಹಿತ ಸ್ಥಳಾಂತರಕ್ಕೆ ಆದೇಶ <br /> <br /> ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಗ್ರಾಮಸ್ಥರಲ್ಲಿ ತಳಮಳ<br /> <br /> ಸರ್ಕಾರದ ಅವೈಜ್ಞಾನಿಕ ನಿರ್ಧಾರಕ್ಕೆ ವಿದ್ಯಾರ್ಥಿಗಳ ಶಾಪ<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ: </strong>ಅರ್ಥಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ಅವರ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ಕನಕಪುರ ತಾಲ್ಲೂಕಿನ ಗಡಿ ಗ್ರಾಮವಾದ ಬಿಜ್ಜಹಳ್ಳಿಯಲ್ಲಿ ನಡೆಯುತ್ತಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಹ್ದ್ದುದೆ ಸಹಿತ ಸ್ಥಳಾಂತರಿಸಿ ಸರ್ಕಾರ ಆದೇಶ ಹೊರಡಿಸಿದೆ ! ಇದರಿಂದ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಗ್ರಾಮದ ಜನತೆ ಕಂಗಾಲಾಗಿದ್ದಾರೆ.<br /> <br /> ಅದೂ ಈ ಕಾಲೇಜನ್ನು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೆಗ್ಗರಣಿಗೆ ಸ್ಥಳಾಂತರಿಸಿ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ (ಪದವಿ ಪೂರ್ವ) ಎಸ್.ಎಚ್.ಕುರಿಯವರ್ ಅವರು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ !<br /> <br /> ಗ್ರಾಮೀಣ ಹಾಗೂ ಗಡಿ ಭಾಗದ ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ವ್ಯಾಸಂಗ ಮೊಟಕುಗೊಳಿಸದೆ, ಹೆಚ್ಚಿನ ಶಿಕ್ಷಣ ಪಡೆಯಲಿ ಎಂಬ ಸದುದ್ದೇಶದಿಂದ ಮೂರು ವರ್ಷದ ಹಿಂದೆ ಸರ್ಕಾರ ಕನಕಪುರದ ಕೋಡಿಹಳ್ಳಿ ಹೋಬಳಿಯ ಬಿಜ್ಜಹಳ್ಳಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಿಸಿತ್ತು.<br /> <br /> ಆದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣವೊಡ್ಡಿ ಶಿಕ್ಷಣ ಸಚಿವರು ಈ ಕಾಲೇಜನ್ನು ತನ್ನ ತವರೂರಿಗೆ ಕೊಂಡೊಯ್ದಿದ್ದಾರೆ ಎಂಬ ಆರೋಪ ಗ್ರಾಮದ ಜನತೆಯದ್ದಾಗಿದೆ.<br /> <br /> ಹೊಸ ಸರ್ಕಾರಿ ಪಿ.ಯು ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡದ ಶಿಕ್ಷಣ ಇಲಾಖೆಯು ಚುನಾಯಿತ ಪ್ರತಿನಿಧಿಗಳು ಬೇಡಿಕೆಯೊಡ್ಡುವ ಕಡೆ ಕಾಲೇಜುಗಳನ್ನು ಒದಗಿಸಿಕೊಡಲು ಈ ರೀತಿಯ ತಂತ್ರ ಅನುಸರಿಸುತ್ತಿದೆ. <br /> <br /> ಕನಿಷ್ಠ 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಇರುವ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಅಗತ್ಯವಿರುವ ಸ್ಥಳಗಳಿಗೆ ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಕನಕಪುರದ ಬಿಜ್ಜಹಳ್ಳಿ ಕಾಲೇಜು ಬಲಿಪಶುವಾಗಿದೆ.<br /> <br /> <strong>ಗಡಿ ಗ್ರಾಮದ ಸಂಕಟ</strong>: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಗಡಿ ಗ್ರಾಮಗಳಲ್ಲಿ ಬಿಜ್ಜಹಳ್ಳಿ ಕೂಡ ಒಂದು. ಕನಕಪುರದಿಂದ 28 ಕಿ.ಮೀ ದೂರ ಇರುವ ಬಿಜ್ಜಹಳ್ಳಿಯಿಂದ ಮೂರು- ನಾಲ್ಕು ಕಿ.ಮೀ ಸಮೀಪದಲ್ಲಿಯೇ ತಮಿಳುನಾಡು ಭೂಪ್ರದೇಶ ಇದೆ.<br /> <br /> ಮೂರು ವರ್ಷದಿಂದ ಗ್ರಾಮದ ಸಮುದಾಯ ಭವನದಲ್ಲಿ ಪಿ.ಯು ಕಾಲೇಜು ನಡೆದುಕೊಂಡು ಹೋಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರೇ ಹೆಚ್ಚಿರುವ ಈ ಪ್ರದೇಶದಲ್ಲಿ ಈ ಸಮುದಾಯದ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಾಲೇಜು ವರವಾಗಿದೆ.<br /> <br /> ಹಾಗಾಗಿ ಗಡಿ ಪ್ರದೇಶದ ಹಲವು ವಿದ್ಯಾರ್ಥಿಗಳು ಇಲ್ಲಿಯೇ ಪಿ.ಯು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವರ್ಷ ಕಾಲೇಜಿಗೆ ಉತ್ತಮ ಫಲಿತಾಂಶವೂ ಬಂದಿದೆ. ಈ ವರ್ಷ 18 ವಿದ್ಯಾರ್ಥಿಗಳು (ಪ್ರಥಮ 9, ದ್ವಿತೀಯ 9) ವ್ಯಾಸಂಗ ನಡೆಸುತ್ತಿದ್ದಾರೆ. <br /> <br /> ಈಗ ಕಾಲೇಜನ್ನು ಮುಚ್ಚಿದರೆ ಈ ವಿದ್ಯಾರ್ಥಿಗಳ ವ್ಯಾಸಂಗ ಅರ್ಧಕ್ಕೆ ಮೊಟಕಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಧರೇಶ್ `ಪ್ರಜಾವಾಣಿ~ ಬಳಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.<br /> <br /> ಇನ್ನೂ ಎರಡು ವರ್ಷ ಸಮಯ ನೀಡಿದರೆ ಕಾಲೇಜಿಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ದಾಖಲಿಸಲು ಶಕ್ತಿ ಮೀರಿ ಗ್ರಾಮ ಜನತೆಯೆಲ್ಲ ಪ್ರಯತ್ನಿಸುತ್ತೇವೆ. ಗಡಿಭಾಗದಲ್ಲಿನ ಶೋಷಿತ ಸಮುದಾಯದ ಜನತೆಯ ಮಕ್ಕಳ ವ್ಯಾಸಂಗಕ್ಕಾಗಿ ದೊರೆತಿರುವ ಕಾಲೇಜನ್ನು ಕಸಿದುಕೊಳ್ಳದಿರಲು ಅವರು ಶಿಕ್ಷಣ ಸಚಿವರನ್ನು ಕೋರುತ್ತಾರೆ.<br /> <br /> <strong>ಅವೈಜ್ಞಾನಿಕ ನಿರ್ಧಾರ:</strong> ಈಗಾಗಲೇ ಪ್ರಥಮ ಮತ್ತು ದ್ವಿತೀಯ ಪಿ.ಯು ಪ್ರವೇಶ ಪಡೆದು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಂತೂ ಕಾಲೇಜು ಮುಚ್ಚುವ ಸರ್ಕಾರದ ನಿರ್ಧಾರ ಬರಸಿಡಿಲಿನಂತೆ ಬಂದೆರಗಿದೆ. <br /> <br /> ಕಾರಣ ಕನಕಪುರ ತಾಲ್ಲೂಕಿನಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ (ಎಚ್ಇಪಿಎಸ್) ಸಂಯೋಜನೆಯ ಕೋರ್ಸ್ಗಳನ್ನು ಹೊಂದಿರುವ ಕೆಲವೇ ಕೆಲವು ಕಾಲೇಜುಗಳಲ್ಲಿ ಬಿಜ್ಜಹಳ್ಳಿ ಗ್ರಾಮದ ಕಾಲೇಜು ಕೂಡ ಒಂದು.<br /> <br /> ಬಿಜ್ಜಹಳ್ಳಿಯಿಂದ 10 ಕಿ.ಮೀ ದೂರದಲ್ಲಿರುವ ಕೊಡಿಹಳ್ಳಿ ಕಾಲೇಜು ಹಾಗೂ 28 ಕಿ.ಮೀ ದೂರ ಇರುವ ಕನಕಪುರ ತಾಲ್ಲೂಕಿನ ಸರ್ಕಾರಿ ಪಿ.ಯು ಕಾಲೇಜುಗಳಲ್ಲೆಲ್ಲೂ ಈ ಸಂಯೋಜನೆಯ ಕೋರ್ಸ್ಗಳಿಲ್ಲ. ಈ ಭಾಗದ ಬಹುತೇಕ ಕಾಲೇಜುಗಳಲ್ಲಿ ಇರುವುದು ಎಚ್ಇಜಿಎಸ್, ಎಚ್ಇಪಿಕೆ, ಎಚ್ಇಎಸ್ಕೆ ಸಂಯೋಜನೆಯ ಕೋರ್ಸ್ಗಳು.<br /> <br /> `ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಕ್ತಾಯವಾಗಿರುವ ಸಂದರ್ಭದಲ್ಲಿ ಸರ್ಕಾರ ಕಾಲೇಜನ್ನು ದೂರದ ಬೇರಾವುದೋ ಜಿಲ್ಲೆಗೆ ಸ್ಥಳಾಂತರಿಸಿದರೆ ನಾವ್ಲ್ಲೆಲಿ ವ್ಯಾಸಂಗ ಮಾಡುವುದು~ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ. <br /> <br /> `ನಮ್ಮ ಕಾಲೇಜಿನಲ್ಲಿರುವ ಸಂಯೋಜನೆ ಹೊಂದಿದ ಕೋರ್ಸ್ಗಳು ಹತ್ತಿರದ ಯಾವ ಕಾಲೇಜಲ್ಲೂ ಇಲ್ಲದ ಕಾರಣ, ಈ ಕೋರ್ಸ್ಗಳಿಗೆ ನಾವು ಬೆಂಗಳೂರು, ರಾಮನಗರ ಅಥವಾ ಚನ್ನಪಟ್ಟಣಕ್ಕೆ ಹೋಗಬೇಕಾಗುತ್ತದೆ. ಅಲ್ಲಿ ಹೊಸದಾಗಿ ಪ್ರವೇಶ ಪಡೆದು, ನಿತ್ಯ ಸಾರಿಗೆ ವೆಚ್ಚ ಭರಿಸುತ್ತಾ ವ್ಯಾಸಂಗ ಮಾಡುವ ಶಕ್ತಿ ನಮ್ಮೆಲ್ಲಿಲ್ಲ. ಹಾಗಾಗಿ ಈ ಕಾಲೇಜು ನಮ್ಮೂರನ್ನು ಬಿಟ್ಟು ಹೋಯಿತು ಎಂದರೆ, ನಮ್ಮ ಮುಂದಿನ ವ್ಯಾಸಂಗಕ್ಕೆ ಕತ್ತರಿ ಬಿತ್ತು ಎಂದೇ ಅರ್ಥ~ ಎಂದು ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಳ್ಳುತ್ತಾರೆ.<br /> <br /> <strong>ಉಪನ್ಯಾಸಕರ ಅಸಮಾಧಾನ: </strong>ಇನ್ನೂ ಎರಡು ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತದೆ. ಆದರೆ ಸರ್ಕಾರ ಈಗ ಏಕಾಏಕಿ ಕಾಲೇಜು ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಂಡಿದೆ. ಅದೂ ಶೈಕ್ಷಣಿಕ ವರ್ಷ ಅರ್ಧ ಮುಗಿದಿರುವ ಸಂದರ್ಭದಲ್ಲಿ ಈ ಆದೇಶ ಹೊರಬಿದ್ದಿರುವುದು ವಿದ್ಯಾರ್ಥಿಗಳು ಮತ್ತು ನಮ್ಮನ್ನು ಆತಂಕಕ್ಕೆ ತಳ್ಳಿದೆ ಎಂದು ಉಪನ್ಯಾಸಕರು ಬೇಸರ ವ್ಯಕ್ತಪಡಿಸುತ್ತಾರೆ.<br /> <br /> `ಕಾಲೇಜಿನ ಉಪನ್ಯಾಸಕರು ಕನಕಪುರ, ಕೋಡಿಹಳ್ಳಿ ಮತ್ತು ಬಿಜ್ಜಹಳ್ಳಿಯಲ್ಲಿ ಮನೆಯನ್ನು ಬೋಗ್ಯಕ್ಕೆ ಹಾಕಿಸಿಕೊಂಡಿದ್ದೇವೆ. ಈಗ ಮಧ್ಯಂತರ ಅವಧಿಯಲ್ಲಿ ಮನೆ ಮಾಲೀಕರು ನಮ್ಮ ಹಣವನ್ನೂ ವಾಪಸು ಮಾಡುವುದಿಲ್ಲ. <br /> <br /> ನಾವು ಸಿದ್ದಾಪುರದ ಹೆಗ್ಗರಣಿಗೆ ಹೋಗಿ ಮನೆ ಮಾಡಿ, ನಮ್ಮ ಮಕ್ಕಳಿಗೆ ಹೊಸ ಶಾಲಾ- ಕಾಲೇಜುಗಳಲ್ಲಿ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಿಕೊಡುವುದು ಕಷ್ಟವಾಗುತ್ತದೆ~ ಎನ್ನುತ್ತಾರೆ ಉಪನ್ಯಾಸಕರು.ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 5 ಇದ್ದರೂ ಮುಂದುವರೆಯಲು ಅವಕಾಶ ನೀಡುವ ಸರ್ಕಾರ ಗಡಿಭಾಗದ ಪಿ.ಯು ಕಾಲೇಜಿನಲ್ಲಿ 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎಂದು ಮುಚ್ಚಲು ನಿರ್ಧಾರ ತೆಗೆದುಕೊಳ್ಳುವುದು ನ್ಯಾಯ ಸಮ್ಮತವಲ್ಲ. <br /> <br /> ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿನಾಡು ಪ್ರದೇಶಗಳ ಹೋರಾಟ ಸಮಿತಿಯ ಅಧ್ಯಕ್ಷರಿಗೆ ದೂರು ನೀಡಲಾಗುವುದು ಎಂದು ಬಿಜ್ಜಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಧರೇಶ್ ಹೇಳುತ್ತಾರೆ.<br /> <strong>ಶಿಕ್ಷಣ ಸಚಿವರಿಗೆ ಡಿಕೆಶಿ ಪತ್ರ<br /> </strong><br /> `ನನ್ನ ಮತ ಕ್ಷೇತ್ರ ಡಾ. ನಂಜುಂಡಪ್ಪ ವರದಿ ಮೇರೆಗೆ ಅತಿ ಹಿಂದುಳಿದ ಪ್ರದೇಶ ಆಗಿರುವುದರಿಂದ ಗ್ರಾಮೀಣ ಪ್ರದೇಶದ ಶಿಕ್ಷಣದ ದೃಷ್ಟಿಯಿಂದ ಬೇರೆ ಕಡೆಗೆ ಸ್ಥಳಾಂತರ ಮಾಡದೆ ಬಿಜ್ಜಹಳ್ಳಿಯಲ್ಲಿಯೇ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಮುಂದುವರೆಸುವಂತೆ~ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿದ್ದಾರೆ.<br /> <br /> `ಒಂದು ವೇಳೆ ಸದರಿ ಗ್ರಾಮದಲ್ಲಿ ಕಾಲೇಜು ಮುಂದುವರೆಸಲು ಸಾಧ್ಯವಾಗದಿದ್ದರೆ, ಈಗಾಗಲೇ ಅನೇಕ ಬಾರಿ ನಾನು ಕೊರಿರುವಂತೆ ಕನಕಪುರದ ಚಿಕ್ಕಮುದುವಾಡಿ ಗ್ರಾಮಕ್ಕೆ ಬದಲಾಯಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡುವಂತೆ~ ಅವರು ಕೋರಿದ್ದಾರೆ.<br /> <br /> <strong>ಮುಖ್ಯಾಂಶಗಳು<br /> </strong>ಕನಕಪುರದ ಗಡಿಗ್ರಾಮ ಬಿಜ್ಜಹಳ್ಳಿಯ ಸರ್ಕಾರಿ ಪಿ.ಯು ಕಾಲೇಜು ಎತ್ತಂಗಡಿ !<br /> <br /> ಶಿಕ್ಷಣ ಸಚಿವ ಕಾಗೇರಿ ಅವರ ಜಿಲ್ಲೆಗೆ ಹುದ್ದೆ ಸಹಿತ ಸ್ಥಳಾಂತರಕ್ಕೆ ಆದೇಶ <br /> <br /> ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಗ್ರಾಮಸ್ಥರಲ್ಲಿ ತಳಮಳ<br /> <br /> ಸರ್ಕಾರದ ಅವೈಜ್ಞಾನಿಕ ನಿರ್ಧಾರಕ್ಕೆ ವಿದ್ಯಾರ್ಥಿಗಳ ಶಾಪ<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>