<p><strong>ಚಾಮರಾಜನಗರ:</strong> ರಾಮಾಪುರ ಅರಣ್ಯ ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆ ಕಾರ್ಯಾಚರಣೆ ನಡೆಸಿ 6 ಮಂದಿ ಕುಖ್ಯಾತ ಆನೆ ಹಂತಕರನ್ನು ಬಂಧಿಸುವಲ್ಲಿ ಕೊಳ್ಳೇಗಾಲ ಪ್ರಾದೇಶಿಕ ಅರಣ್ಯ ವಿಭಾಗದ ಸಿಬ್ಬಂದಿ ಯಶಸ್ವಿಯಾಗಿದೆ.<br /> <br /> ಕೊಳ್ಳೇಗಾಲ ತಾಲ್ಲೂಕು ದೊಮ್ಮನಗದ್ದೆಯ ಮುರುಗೇಶ ಅಲಿಯಾಸ್ ತಂಬಿ, ಹೊಸಹಳ್ಳಿಯ ಚನ್ನರಾಜು ಅಲಿಯಾಸ್ ಮಹದೇವ, ಅಜ್ಜೀಪುರದ ಸತೀಶ್, ಅರುಣ್ಕುಮಾರ್, ಕುರುಬರದೊಡ್ಡಿಯ ನಯಾಜ್ ಹಾಗೂ ಕೌದಳ್ಳಿಯ ಅಬ್ದುಲ್ ನಜು ಬಂಧಿತರು. <br /> <br /> ಆನೆ ಹತ್ಯೆ ಜಾಲದ ಪ್ರಮುಖ ಆರೋಪಿ ತಂಬಿ ಅಜ್ಜೀಪುರ ಗ್ರಾಮ ಪಂಚಾಯಿತಿಯ ಸದಸ್ಯನಾಗಿದ್ದು, ಈತನನ್ನೂ ಬಂಧಿಸಲಾಗಿದೆ. <br /> <br /> ಬಂಧಿತರಿಂದ 2 ದಂತ ಹಾಗೂ 2 ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ತಂಡ ಕೊಳ್ಳೇಗಾಲ ಹಾಗೂ ಬಿಆರ್ಟಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿ ಆನೆಗಳ ಹತ್ಯೆಗೆ ಸಂಚು ರೂಪಿಸಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಖಚಿತ ಮಾಹಿತಿ ದೊರೆಕಿತ್ತು. <br /> <br /> ಆರೋಪಿಗಳ ಬಂಧನಕ್ಕಾಗಿ ಒಂದು ತಿಂಗಳ ಹಿಂದೆಯೇ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳೊಂದಿಗೆ ಆನೆ ದಂತ ಖರೀದಿಸುವ ನೆಪದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸಂಪರ್ಕ ಸಾಧಿಸಿ ಅವರನ್ನು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ರಾಮಾಪುರ ಅರಣ್ಯ ವ್ಯಾಪ್ತಿಯಲ್ಲಿ ಭಾನುವಾರ ಮುಂಜಾನೆ ಕಾರ್ಯಾಚರಣೆ ನಡೆಸಿ 6 ಮಂದಿ ಕುಖ್ಯಾತ ಆನೆ ಹಂತಕರನ್ನು ಬಂಧಿಸುವಲ್ಲಿ ಕೊಳ್ಳೇಗಾಲ ಪ್ರಾದೇಶಿಕ ಅರಣ್ಯ ವಿಭಾಗದ ಸಿಬ್ಬಂದಿ ಯಶಸ್ವಿಯಾಗಿದೆ.<br /> <br /> ಕೊಳ್ಳೇಗಾಲ ತಾಲ್ಲೂಕು ದೊಮ್ಮನಗದ್ದೆಯ ಮುರುಗೇಶ ಅಲಿಯಾಸ್ ತಂಬಿ, ಹೊಸಹಳ್ಳಿಯ ಚನ್ನರಾಜು ಅಲಿಯಾಸ್ ಮಹದೇವ, ಅಜ್ಜೀಪುರದ ಸತೀಶ್, ಅರುಣ್ಕುಮಾರ್, ಕುರುಬರದೊಡ್ಡಿಯ ನಯಾಜ್ ಹಾಗೂ ಕೌದಳ್ಳಿಯ ಅಬ್ದುಲ್ ನಜು ಬಂಧಿತರು. <br /> <br /> ಆನೆ ಹತ್ಯೆ ಜಾಲದ ಪ್ರಮುಖ ಆರೋಪಿ ತಂಬಿ ಅಜ್ಜೀಪುರ ಗ್ರಾಮ ಪಂಚಾಯಿತಿಯ ಸದಸ್ಯನಾಗಿದ್ದು, ಈತನನ್ನೂ ಬಂಧಿಸಲಾಗಿದೆ. <br /> <br /> ಬಂಧಿತರಿಂದ 2 ದಂತ ಹಾಗೂ 2 ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ತಂಡ ಕೊಳ್ಳೇಗಾಲ ಹಾಗೂ ಬಿಆರ್ಟಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿ ಆನೆಗಳ ಹತ್ಯೆಗೆ ಸಂಚು ರೂಪಿಸಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಖಚಿತ ಮಾಹಿತಿ ದೊರೆಕಿತ್ತು. <br /> <br /> ಆರೋಪಿಗಳ ಬಂಧನಕ್ಕಾಗಿ ಒಂದು ತಿಂಗಳ ಹಿಂದೆಯೇ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳೊಂದಿಗೆ ಆನೆ ದಂತ ಖರೀದಿಸುವ ನೆಪದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸಂಪರ್ಕ ಸಾಧಿಸಿ ಅವರನ್ನು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>