<p>ದಾವಣಗೆರೆ: ಬಸವ ತತ್ವದ ಅನುಯಾಯಿಗಳು ಪ್ರಚಾರಪ್ರಿಯರಾಗದೇ ಬಸವಪ್ರಿಯರಾಗಬೇಕು ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಹೇಳಿದರು. <br /> <br /> ನಗರದ ವಿರಕ್ತಮಠದಲ್ಲಿ ಬುಧವಾರ ಬಸವಜಯಂತಿ ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಬಸವ ಪ್ರಭಾತ್ ಫೇರಿ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ನೂರು ವರ್ಷಗಳ ಹಿಂದ ವಿರಕ್ತಮಠದಲ್ಲಿ ಮೃತ್ಯುಂಜಯ ಸ್ವಾಮೀಜಿ ಮತ್ತು ಹರ್ಡೇಕರ್ ಮಂಜಪ್ಪ ಅವರು ಬಸವ ಜಯಂತಿಯನ್ನು ಆರಂಭಿಸಿದರು. ಆ ಇತಿಹಾಸಕ್ಕೆ ಇಂದು ನಾವು ಸಾಕ್ಷಿಯಾಗಿದ್ದೇವೆ. ವಿಶ್ವಗುರು ಬಸವಣ್ಣನ ತತ್ವಗಳಾದ ಸಮಾನತೆ, ಕಾಯಕ, ದಾಸೋಹ, ಸೋದರತೆ, ಸ್ವಾತಂತ್ರ್ಯ ಇಂದಿಗೂ ಆದರ್ಶಗಳಾಗಿವೆ. <br /> <br /> ನಾವೆಲ್ಲರೂ ಬಸವ ಜಯಂತಿ ಹೆಸರಿನಲ್ಲಿ ಕೇವಲ ಪ್ರಚಾರ ಫಲಕಗಳಲ್ಲಷ್ಟೇ ಕಾಣಿಸಿಕೊಳ್ಳಲು ಸೀಮಿತವಾಗಬಾರದು. ಬಸವ ತತ್ವಗಳನ್ನು ಮನೆಮನೆಗೆ ತಲುಪಿಸಬೇಕು. ಅದಕ್ಕಾಗಿ ಬಸವ ಪ್ರಭಾತ್ ಫೇರಿ ನಡೆಸಲಾಗುತ್ತಿದೆ ಎಂದರು.<br /> <br /> ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವ ಜಯಂತಿಯ ಆರಂಭ ಸ್ಥಳವಾದ ವಿರಕ್ತಮಠ ಈ ನಿಟ್ಟಿನಲ್ಲಿ ಬಸವ ಗಂಗೋತ್ರಿ ಆಗಿದೆ. ಬಸವಣ್ಣನವರು ಬೋಧಿಸಿದ ಜಾಗತಿಕ ತತ್ವಗಳನ್ನು ಪಾಲಿಸಬೇಕಿದೆ ಎಂದು ಹೇಳಿದರು.<br /> <br /> ವಿರಕ್ತಮಠದಿಂದ ಹೊರಟ ಪ್ರಭಾತ್ ಫೇರಿಯು ದೊಡ್ಡಪೇಟೆಯ ಬಸವಮಂಟಪ, ಪಾತಾಳಲಿಂಗೇಶ್ವರ ದೇವಸ್ಥಾನ, ಸ್ವಾಗೇರ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಗಳಲ್ಲಿ ಸಂಚರಿಸಿತು.<br /> <br /> ಮೃತ್ಯುಂಜಯ ಸ್ವಾಮೀಜಿ, ಹರ್ಡೇಕರ ಮಂಜಪ್ಪ ಮತ್ತಿತರ ಶರಣರ ಕುರಿತು ಘೋಷಣೆಗಳು ಮೊಳಗಿದವು.<br /> ಮೇಯರ್ ಸುಧಾ ಜಯರುದ್ರೇಶ್, `ದೂಡಾ~ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಕೆಪಿಸಿಸಿ ಸದಸ್ಯ ಡಿ. ಬಸವರಾಜ್, ಎಚ್.ಕೆ.ರಾಮಚಂದ್ರಪ್ಪ, ಎಚ್.ಎಂ. ಸ್ವಾಮಿ, ಜಯಕುಮಾರ್, ಜಿ. ಶಿವಯೋಗಪ್ಪ, ಕಣಕುಪ್ಪೆ ಮುರುಗೇಶಪ್ಪ, ಎ. ನಾಗರಾಜ್, ದಿನೇಶ್ ಕೆ. ಶೆಟ್ಟಿ, ಎಚ್.ಬಿ. ಮಂಜುನಾಥ್ ಇತರರು ಇದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ಬಸವ ತತ್ವದ ಅನುಯಾಯಿಗಳು ಪ್ರಚಾರಪ್ರಿಯರಾಗದೇ ಬಸವಪ್ರಿಯರಾಗಬೇಕು ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಹೇಳಿದರು. <br /> <br /> ನಗರದ ವಿರಕ್ತಮಠದಲ್ಲಿ ಬುಧವಾರ ಬಸವಜಯಂತಿ ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಬಸವ ಪ್ರಭಾತ್ ಫೇರಿ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ನೂರು ವರ್ಷಗಳ ಹಿಂದ ವಿರಕ್ತಮಠದಲ್ಲಿ ಮೃತ್ಯುಂಜಯ ಸ್ವಾಮೀಜಿ ಮತ್ತು ಹರ್ಡೇಕರ್ ಮಂಜಪ್ಪ ಅವರು ಬಸವ ಜಯಂತಿಯನ್ನು ಆರಂಭಿಸಿದರು. ಆ ಇತಿಹಾಸಕ್ಕೆ ಇಂದು ನಾವು ಸಾಕ್ಷಿಯಾಗಿದ್ದೇವೆ. ವಿಶ್ವಗುರು ಬಸವಣ್ಣನ ತತ್ವಗಳಾದ ಸಮಾನತೆ, ಕಾಯಕ, ದಾಸೋಹ, ಸೋದರತೆ, ಸ್ವಾತಂತ್ರ್ಯ ಇಂದಿಗೂ ಆದರ್ಶಗಳಾಗಿವೆ. <br /> <br /> ನಾವೆಲ್ಲರೂ ಬಸವ ಜಯಂತಿ ಹೆಸರಿನಲ್ಲಿ ಕೇವಲ ಪ್ರಚಾರ ಫಲಕಗಳಲ್ಲಷ್ಟೇ ಕಾಣಿಸಿಕೊಳ್ಳಲು ಸೀಮಿತವಾಗಬಾರದು. ಬಸವ ತತ್ವಗಳನ್ನು ಮನೆಮನೆಗೆ ತಲುಪಿಸಬೇಕು. ಅದಕ್ಕಾಗಿ ಬಸವ ಪ್ರಭಾತ್ ಫೇರಿ ನಡೆಸಲಾಗುತ್ತಿದೆ ಎಂದರು.<br /> <br /> ಬಸವಪ್ರಭು ಸ್ವಾಮೀಜಿ ಮಾತನಾಡಿ, ಬಸವ ಜಯಂತಿಯ ಆರಂಭ ಸ್ಥಳವಾದ ವಿರಕ್ತಮಠ ಈ ನಿಟ್ಟಿನಲ್ಲಿ ಬಸವ ಗಂಗೋತ್ರಿ ಆಗಿದೆ. ಬಸವಣ್ಣನವರು ಬೋಧಿಸಿದ ಜಾಗತಿಕ ತತ್ವಗಳನ್ನು ಪಾಲಿಸಬೇಕಿದೆ ಎಂದು ಹೇಳಿದರು.<br /> <br /> ವಿರಕ್ತಮಠದಿಂದ ಹೊರಟ ಪ್ರಭಾತ್ ಫೇರಿಯು ದೊಡ್ಡಪೇಟೆಯ ಬಸವಮಂಟಪ, ಪಾತಾಳಲಿಂಗೇಶ್ವರ ದೇವಸ್ಥಾನ, ಸ್ವಾಗೇರ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಗಳಲ್ಲಿ ಸಂಚರಿಸಿತು.<br /> <br /> ಮೃತ್ಯುಂಜಯ ಸ್ವಾಮೀಜಿ, ಹರ್ಡೇಕರ ಮಂಜಪ್ಪ ಮತ್ತಿತರ ಶರಣರ ಕುರಿತು ಘೋಷಣೆಗಳು ಮೊಳಗಿದವು.<br /> ಮೇಯರ್ ಸುಧಾ ಜಯರುದ್ರೇಶ್, `ದೂಡಾ~ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಕೆಪಿಸಿಸಿ ಸದಸ್ಯ ಡಿ. ಬಸವರಾಜ್, ಎಚ್.ಕೆ.ರಾಮಚಂದ್ರಪ್ಪ, ಎಚ್.ಎಂ. ಸ್ವಾಮಿ, ಜಯಕುಮಾರ್, ಜಿ. ಶಿವಯೋಗಪ್ಪ, ಕಣಕುಪ್ಪೆ ಮುರುಗೇಶಪ್ಪ, ಎ. ನಾಗರಾಜ್, ದಿನೇಶ್ ಕೆ. ಶೆಟ್ಟಿ, ಎಚ್.ಬಿ. ಮಂಜುನಾಥ್ ಇತರರು ಇದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>