<p>ಶಿವಮೊಗ್ಗ: ಇಂದಿನ ಕಂಪ್ಯೂಟರ್ ಯುಗದಲ್ಲಿ ಪುಸ್ತಕ ಒಂದು ಸವಾಲಾಗಿ ಪರಿಣಮಿಸಿದ್ದು, ಪುಸ್ತಕಕ್ಕೇ ತನ್ನದೇ ಆದ ವ್ಯಕ್ತಿತ್ವ ಇದೆ ಎಂದು ಲೇಖಕ ಪ್ರೊ.ಎಂ.ಬಿ. ನಟರಾಜ್ ಅಭಿಪ್ರಾಯಪಟ್ಟರು.<br /> <br /> ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಗ್ರಂಥಾಲಯ ವಿಭಾಗ ಸೋಮವಾರ ವಿಶ್ವ ಪುಸ್ತಕ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಬರೆಯುವ ಬರಹಗಾರ ಹೇಗೆಯೇ ಇರಲಿ, ಪುಸ್ತಕ ಆತನನ್ನು ಹಿಂದಕ್ಕೆ ಹಾಕುವ ಶಕ್ತಿ ಪಡೆದುಕೊಂಡಿದೆ. ಕುಮಾರವ್ಯಾಸ, ರಾಘವಾಂಕ, ನೃಪತುಂಗ ಮುಂತಾದವರ ಗ್ರಂಥಗಳು ಇಂದಿಗೂ ನಮ್ಮ ಸ್ಮೃತಿಪಟಲದಲ್ಲಿವೆ ಎಂದರು.<br /> <br /> ಮನುಷ್ಯ ಹಾಗೂ ಪುಸ್ತಕದ ನಡುವೆ ವೈಯಕ್ತಿಕ ಸಂಬಂಧ ಅನಾದಿಕಾಲದಿಂದಲೂ ಇದೆ ಎಂದ ಅವರು, ನಿಜಜೀವನಕ್ಕೆ ಹೋಗಲು ಪುಸ್ತಕ ಪ್ರೇರಣೆ ನೀಡುತ್ತದೆ ಎಂದರು. <br /> <br /> ಜ್ಞಾನದ ಪರಂಪರೆ ಬೆಳೆಸುವ ಪುಸ್ತಕದ ಜತೆಗಿನ ಸಂಬಂಧ ಕಡಿಮೆಯಾಗುತ್ತಿರುವ ಬಗ್ಗೆ ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದರು.<br /> <br /> ಪುಸ್ತಕ ಪ್ರದರ್ಶನ ಉದ್ಘಾಟಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಮಾತನಾಡಿ, ನಾಟಕಕಾರ ವಿಲಿಯಂ ಶೇಕ್ಸ್ಪಿಯರ್ನ ಜನ್ಮದಿನದ ಅಂಗವಾಗಿ ವಿಶ್ವಸಂಸ್ಥೆಯ ನಿರ್ದೇಶನದಂತೆ ವಿಶ್ವ ಪುಸ್ತಕ ದಿನವನ್ನು ಆಚರಿಸಲಾಗುತ್ತಿದೆ ಎಂದರು.<br /> <br /> ವಿದೇಶಿಯರು ಭಾರತದ ಮೇಲೆ ದಂಡೆತ್ತಿ ಬಂದು ವಿಜಯ ಸಾಧಿಸಿದಾಗ ಇಲ್ಲಿನ ಜ್ಞಾನ ಹಾಳು ಮಾಡಲೆಂದೇ ಗ್ರಂಥರಾಶಿಗಳನ್ನು ಧ್ವಂಸಗೊಳಿಸಿದ ಎಷ್ಟೋ ಉದಾಹರಣೆಗಳಿವೆ ಎಂದು ಹೇಳಿದರು.<br /> <br /> ಗ್ರಂಥಪಾಲಕ ಜಗದೀಶ ಕಮಲಾಕರ ಸ್ವಾಗತಿಸಿದರು. ಡಾ.ಬಾಲಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಡಾ.ನಾಗಭೂಷಣ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: ಇಂದಿನ ಕಂಪ್ಯೂಟರ್ ಯುಗದಲ್ಲಿ ಪುಸ್ತಕ ಒಂದು ಸವಾಲಾಗಿ ಪರಿಣಮಿಸಿದ್ದು, ಪುಸ್ತಕಕ್ಕೇ ತನ್ನದೇ ಆದ ವ್ಯಕ್ತಿತ್ವ ಇದೆ ಎಂದು ಲೇಖಕ ಪ್ರೊ.ಎಂ.ಬಿ. ನಟರಾಜ್ ಅಭಿಪ್ರಾಯಪಟ್ಟರು.<br /> <br /> ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಗ್ರಂಥಾಲಯ ವಿಭಾಗ ಸೋಮವಾರ ವಿಶ್ವ ಪುಸ್ತಕ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಬರೆಯುವ ಬರಹಗಾರ ಹೇಗೆಯೇ ಇರಲಿ, ಪುಸ್ತಕ ಆತನನ್ನು ಹಿಂದಕ್ಕೆ ಹಾಕುವ ಶಕ್ತಿ ಪಡೆದುಕೊಂಡಿದೆ. ಕುಮಾರವ್ಯಾಸ, ರಾಘವಾಂಕ, ನೃಪತುಂಗ ಮುಂತಾದವರ ಗ್ರಂಥಗಳು ಇಂದಿಗೂ ನಮ್ಮ ಸ್ಮೃತಿಪಟಲದಲ್ಲಿವೆ ಎಂದರು.<br /> <br /> ಮನುಷ್ಯ ಹಾಗೂ ಪುಸ್ತಕದ ನಡುವೆ ವೈಯಕ್ತಿಕ ಸಂಬಂಧ ಅನಾದಿಕಾಲದಿಂದಲೂ ಇದೆ ಎಂದ ಅವರು, ನಿಜಜೀವನಕ್ಕೆ ಹೋಗಲು ಪುಸ್ತಕ ಪ್ರೇರಣೆ ನೀಡುತ್ತದೆ ಎಂದರು. <br /> <br /> ಜ್ಞಾನದ ಪರಂಪರೆ ಬೆಳೆಸುವ ಪುಸ್ತಕದ ಜತೆಗಿನ ಸಂಬಂಧ ಕಡಿಮೆಯಾಗುತ್ತಿರುವ ಬಗ್ಗೆ ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದರು.<br /> <br /> ಪುಸ್ತಕ ಪ್ರದರ್ಶನ ಉದ್ಘಾಟಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಮಾತನಾಡಿ, ನಾಟಕಕಾರ ವಿಲಿಯಂ ಶೇಕ್ಸ್ಪಿಯರ್ನ ಜನ್ಮದಿನದ ಅಂಗವಾಗಿ ವಿಶ್ವಸಂಸ್ಥೆಯ ನಿರ್ದೇಶನದಂತೆ ವಿಶ್ವ ಪುಸ್ತಕ ದಿನವನ್ನು ಆಚರಿಸಲಾಗುತ್ತಿದೆ ಎಂದರು.<br /> <br /> ವಿದೇಶಿಯರು ಭಾರತದ ಮೇಲೆ ದಂಡೆತ್ತಿ ಬಂದು ವಿಜಯ ಸಾಧಿಸಿದಾಗ ಇಲ್ಲಿನ ಜ್ಞಾನ ಹಾಳು ಮಾಡಲೆಂದೇ ಗ್ರಂಥರಾಶಿಗಳನ್ನು ಧ್ವಂಸಗೊಳಿಸಿದ ಎಷ್ಟೋ ಉದಾಹರಣೆಗಳಿವೆ ಎಂದು ಹೇಳಿದರು.<br /> <br /> ಗ್ರಂಥಪಾಲಕ ಜಗದೀಶ ಕಮಲಾಕರ ಸ್ವಾಗತಿಸಿದರು. ಡಾ.ಬಾಲಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಡಾ.ನಾಗಭೂಷಣ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>