<p><strong>ಬೆಳಗಾವಿ:</strong> ಮೂವರು ಗಂಡುಮಕ್ಕಳನ್ನು ಬಾವಿಗೆ ನೂಕಿ, ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಯರ್ಮಾಳ ಗ್ರಾಮದಲ್ಲಿ ಭಾನುವಾರ ಬೆಳಕಿಗೆ ಬಂದಿದೆ. <br /> <br /> ಮೃತರನ್ನು ಯರ್ಮಾಳ ಗ್ರಾಮದ ಬಂಗಾರವ್ವ ರಾಮನಗೌಡ ಪಾಟೀಲ (37) ಎಂಬ ಮಹಿಳೆ ತನ್ನ ಮಕ್ಕಳಾದ ಪರಶುರಾಮ (7), ಮಧು (5) ಹಾಗೂ ನವೀನ (3) ಎಂದು ಗುರುತಿಸಲಾಗಿದೆ.<br /> <br /> ಹೋಳಿ ಹಬ್ಬದ ದಿನ ಮಗನೊಬ್ಬನ ಕಾಲಿಗೆ ಒಡೆದ ಬಾಟಲಿ ತಗುಲಿ ಗಾಯವಾಗಿದೆ. ಗಾಯಗೊಂಡ ಮಗನ ಕಾಲಿಗೆ ರಾತ್ರಿ ಆರೈಕೆ ಮಾಡುತ್ತಿದ್ದಾಗ, ರಾತ್ರಿ ದೀಪ ಉರಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಬಂಗಾರವ್ವಳ ಮೇಲೆ ಮನೆಯವರೆಲ್ಲ ಸಿಡುಕಿದ್ದಾರೆ ಎನ್ನಲಾಗಿದೆ. <br /> <br /> ಇದರಿಂದ ಬೇಸರಗೊಂಡ ಬಂಗಾರವ್ವ ತನ್ನ ಮೂವರು ಮಕ್ಕಳೊಂದಿಗೆ ಶುಕ್ರವಾರ ರಾತ್ರಿಯೇ ನಾಪತ್ತೆಯಾಗಿದ್ದಳು. ಗ್ರಾಮಸ್ಥರು ಇವರಿಗಾಗಿ ಹುಡುಕಾಡಿದಾಗ ಬಂಗಾರವ್ವ ಹಾಗೂ ಮೂವರು ಮಕ್ಕಳ ಶವ ಭಾನುವಾರದಂದು ಗ್ರಾಮದ ಬಾವಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಮೂವರು ಗಂಡುಮಕ್ಕಳನ್ನು ಬಾವಿಗೆ ನೂಕಿ, ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಯರ್ಮಾಳ ಗ್ರಾಮದಲ್ಲಿ ಭಾನುವಾರ ಬೆಳಕಿಗೆ ಬಂದಿದೆ. <br /> <br /> ಮೃತರನ್ನು ಯರ್ಮಾಳ ಗ್ರಾಮದ ಬಂಗಾರವ್ವ ರಾಮನಗೌಡ ಪಾಟೀಲ (37) ಎಂಬ ಮಹಿಳೆ ತನ್ನ ಮಕ್ಕಳಾದ ಪರಶುರಾಮ (7), ಮಧು (5) ಹಾಗೂ ನವೀನ (3) ಎಂದು ಗುರುತಿಸಲಾಗಿದೆ.<br /> <br /> ಹೋಳಿ ಹಬ್ಬದ ದಿನ ಮಗನೊಬ್ಬನ ಕಾಲಿಗೆ ಒಡೆದ ಬಾಟಲಿ ತಗುಲಿ ಗಾಯವಾಗಿದೆ. ಗಾಯಗೊಂಡ ಮಗನ ಕಾಲಿಗೆ ರಾತ್ರಿ ಆರೈಕೆ ಮಾಡುತ್ತಿದ್ದಾಗ, ರಾತ್ರಿ ದೀಪ ಉರಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಬಂಗಾರವ್ವಳ ಮೇಲೆ ಮನೆಯವರೆಲ್ಲ ಸಿಡುಕಿದ್ದಾರೆ ಎನ್ನಲಾಗಿದೆ. <br /> <br /> ಇದರಿಂದ ಬೇಸರಗೊಂಡ ಬಂಗಾರವ್ವ ತನ್ನ ಮೂವರು ಮಕ್ಕಳೊಂದಿಗೆ ಶುಕ್ರವಾರ ರಾತ್ರಿಯೇ ನಾಪತ್ತೆಯಾಗಿದ್ದಳು. ಗ್ರಾಮಸ್ಥರು ಇವರಿಗಾಗಿ ಹುಡುಕಾಡಿದಾಗ ಬಂಗಾರವ್ವ ಹಾಗೂ ಮೂವರು ಮಕ್ಕಳ ಶವ ಭಾನುವಾರದಂದು ಗ್ರಾಮದ ಬಾವಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>