<p>ಇತ್ತೀಚೆಗೆ ಬಹುತೇಕ ಸರ್ಕಾರಿ ಉದ್ಯೋಗಗಳ ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆ ಆಧರಿಸಿ ನಡೆಯುತ್ತದೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಲ್ಲಿ ಕೆಲವರು ಮಾತ್ರ ಯಶಸ್ಸು ಸಾಧಿಸಿದರೆ ಹಲವರು ವಿಫಲರಾಗುತ್ತಾರೆ. ಈ ವೈಫಲ್ಯಕ್ಕೆ ಕಾರಣಗಳೇನು ಎಂದು ಅರಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ.</p>.<p><strong>ಸಾಮಾನ್ಯವಾಗಿ ಎಲ್ಲ ಸ್ಪರ್ಧಾರ್ಥಿಗಳು ಮಾಡುವ ತಪ್ಪುಗಳೆಂದರೆ…</strong></p>.<p>ಪ್ರಕಟಣೆ ಹೊರಬಿದ್ದ ನಂತರ ತಯಾರಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಅಧ್ಯಯನ ಅಗತ್ಯ. ಬಹುತೇಕ ಸ್ಪರ್ಧಾರ್ಥಿಗಳು ‘ಬೆಂಕಿ ಬಿದ್ದಾಗ ಬಾವಿ ತೋಡಿದರು’ ಎಂಬಂತೆ ನೇಮಕಾತಿ ಪ್ರಕಟಣೆಯ ನಂತರ ಅಧ್ಯಯನದಲ್ಲಿ ತೊಡಗುತ್ತಾರೆ. ಇದರಿಂದ ಪರಿಪೂರ್ಣ ಅಧ್ಯಯನ ಸಾಧ್ಯವಾಗುವುದಿಲ್ಲ.</p>.<p>ಪಠ್ಯಕ್ರಮ ಪರಿಶೀಲಿಸದೇ ಇರುವುದು: ಪ್ರತಿ ಪರೀಕ್ಷೆಗೂ ನಿಗದಿತ ಪಠ್ಯಕ್ರಮ ಇದ್ದೇ ಇರುತ್ತದೆ. ಆದರೆ, ಬಹುತೇಕ ಸ್ಪರ್ಧಾರ್ಥಿಗಳು ಪಠ್ಯಕ್ರಮ ಅರಿಯದೆ ತಮಗೆ ತಿಳಿದುದನ್ನು ತಿಳಿದಂತೆ ಓದುವುದರಿಂದ ಹಿನ್ನಡೆ ಅನುಭವಿಸುತ್ತಾರೆ.</p>.<p>ಉದಾಹರಣೆಗೆ: ಕೆಎಎಸ್, ಪಿಎಸ್ಐ ಮತ್ತು ಎಫ್ಡಿಎ ಪಠ್ಯಕ್ರಮದಲ್ಲಿ ಸಾಮಾನ್ಯ ಅಂಶಗಳು ಇದ್ದರೂ ಪ್ರಶ್ನೆಪತ್ರಿಕೆ ತಯಾರಿಕೆಯಲ್ಲಿ ಬಹಳ ವ್ಯತ್ಯಾಸಗಳಿವೆ. ಪಿಎಸ್ಐ / ಎಫ್ಡಿಎ ಮಟ್ಟದ ತಯಾರಿ ಮಾಡಿಕೊಂಡವರು ಕೆಎಎಸ್ ಪರೀಕ್ಷೆಯಲ್ಲಿ ಪಾಸಾಗುವುದು ಅಸಾಧ್ಯದ ಮಾತು.</p>.<p>ತಪ್ಪಾದ ಅಧ್ಯಯನ ಸಾಮಗ್ರಿಗಳ ಆಯ್ಕೆ: ಒಳ್ಳೆಯ ಪುಸ್ತಕ ಹಾಗೂ ವೆಬ್ ರೆಫರೆನ್ಸ್ ಆಯ್ಕೆ ಮಾಡುವಲ್ಲಿ ತಪ್ಪು ಮಾಡಿದರೆ ಓದು, ಸಮಯ ವ್ಯರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಪರೀಕ್ಷೆ ಪಾಸಾದವರು ಅಥವಾ ತಜ್ಞರ ಮಾರ್ಗದರ್ಶನ ಅಗತ್ಯ.</p>.<p>ಮೂಲ ಆಕರಗಳ ನಿರ್ಲಕ್ಷ್ಯ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 5 ರಿಂದ 12ನೇ ತರಗತಿವರೆಗಿನ ರಾಜ್ಯ ಪಠ್ಯಕ್ರಮ, ಎನ್ಸಿಇಆರ್ಟಿ ಪುಸ್ತಕಗಳು ಮೂಲ ಆಕರಗಳಾಗಿರುತ್ತವೆ. ಈ ಪುಸ್ತಕಗಳನ್ನು ಬಿಟ್ಟು ಬೇರೆ ಪುಸ್ತಕ ಓದುವುದು ಸರಿಯಾದ ಕ್ರಮವಲ್ಲ.</p>.<p>ಪ್ರಶ್ನೆ ಭಂಡಾರ, ಮಾದರಿ ಪ್ರಶ್ನೆಪತ್ರಿಕೆಗಳ ಕಡೆಗಣನೆ: ಆಯಾ ಪರೀಕ್ಷೆಗಳ ಹಿಂದಿನ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಪರೀಕ್ಷೆಗಳ ಒಳನೋಟ ಒದಗಿಸಿದರೆ, ಮಾದರಿ ಪ್ರಶ್ನೆಪತ್ರಿಕೆಗಳು ಮುನ್ನೋಟ ಒದಗಿಸುತ್ತವೆ. ಇದರಿಂದ ಯಾವ ವಿಷಯದಲ್ಲಿ ಯಾವ ಪ್ರಶ್ನೆಗಳನ್ನು ಕೇಳಿದ್ದಾರೆ, ಯಾವ ಪ್ರಶ್ನೆ ಕೇಳಬಹುದು ಎಂದು ಊಹಿಸಬಹುದು.</p>.<p>ಬರೆಯದೇ ಓದುವುದು: ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳು ಬರವಣಿಗೆ ಆಧಾರಿತವಾಗಿರುತ್ತವೆ. ಉದಾಹರಣೆಗೆ: ಕೆಎಎಸ್ ಮುಖ್ಯ ಪರೀಕ್ಷೆ, ಪಿಎಸ್ಐ ಪ್ರಥಮ ಪತ್ರಿಕೆಯಲ್ಲಿ ಪ್ರಬಂಧ ಮಾದರಿ ಉತ್ತರ ಬರೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶುದ್ಧ, ವೇಗವಾದ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು.</p>.<p>ಸ್ಪಸಾಮರ್ಥ್ಯ ಪರಾಮರ್ಶಿಸದೇ ಇರುವುದು: ಎಸ್ಡಿಎ ಪರೀಕ್ಷೆ ಪಾಸು ಮಾಡುವ ಸಾಮರ್ಥ್ಯ ಇಲ್ಲದ ವ್ಯಕ್ತಿ ಕೆಎಎಸ್ ಪಾಸಾಗುತ್ತೇನೆ ಎಂದು ಭಾವಿಸಿ, ತಯಾರಿಯಲ್ಲಿ ತೊಡಗುತ್ತಾರೆ. ಇದರಿಂದ ವೇಳೆ, ಶ್ರಮದ ಅಪವ್ಯಯಕ್ಕೆ ಕಾರಣವಾಗುತ್ತದೆ.</p>.<p>ದಿನಪತ್ರಿಕೆಗಳ ಓದಿನಲ್ಲಿ ನಿರ್ಲಕ್ಷ್ಯ: ಕೆಲವರು ಆಕರ ಗ್ರಂಥಗಳ ಓದಿಗೆ ನೀಡುವ ಆದ್ಯತೆಯನ್ನು ದಿನಪತ್ರಿಕೆ ಓದಿಗೆ ನೀಡುವುದಿಲ್ಲ. ದಿನಪತ್ರಿಕೆಗಳಲ್ಲಿನ ಪ್ರಚಲಿತ ವಿದ್ಯಮಾನಗಳ ವರದಿ, ಅಂಕಿ-ಅಂಶಗಳು, ಸಂಪಾದಕೀಯ, ಲೇಖನಗಳು ಪರೀಕ್ಷೆಗೆ ಉಪಯುಕ್ತವಾಗಿವೆ. ಇದನ್ನು ಕಡೆಗಣಿಸಿದರೆ ಪ್ರಚಲಿತ ವಿದ್ಯಮಾನ, ಸಾಮಾನ್ಯ ಅಧ್ಯಯನ ವಿಷಯಗಳಲ್ಲಿ ಹಿನ್ನಡೆಯಾಗುತ್ತದೆ.</p>.<p>ಐಚ್ಛಿಕ ವಿಷಯ ಆಯ್ಕೆಯಲ್ಲಿ ಎಡವಟ್ಟು: ರಾಜ್ಯ ಅಥವಾ ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆಗಳಲ್ಲಿ ತಮ್ಮ ಆಸಕ್ತಿ, ಆಕರ, ಅಧ್ಯಯನ ಆಧರಿಸಿ ಐಚ್ಛಿಕ ವಿಷಯಗಳ ಆಯ್ಕೆ ಮಾಡಿಕೊಳ್ಳದೇ, ತಪ್ಪು ವಿಷಯಗಳನ್ನು ಆಯ್ದುಕೊಂಡರೆ ನಿರೀಕ್ಷಿತ ಅಂಕಗಳಿಕೆ ಅಸಾಧ್ಯ.</p>.<p>ಸಮಯ ನಿರ್ವಹಣೆಯ ಕಡೆಗಣನೆ: ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಯೋಜನಾಬದ್ಧವಾಗಿರಬೇಕು. ಆಳ ಅಧ್ಯಯನ, ನೋಟ್ಸ್ ತಯಾರಿ, ಪುನರ್ಮನನಕ್ಕೆ ಸಮರ್ಪಕ ವೇಳೆ ನೀಡಬೇಕು. ಇಲ್ಲದಿದ್ದರೆ, ಇಡೀ ಓದು ವ್ಯರ್ಥವಾಗುತ್ತದೆ.</p>.<p>ಒತ್ತಡ ನಿರ್ವಹಣೆಯಲ್ಲಿ ವೈಫಲ್ಯ: ಪರೀಕ್ಷಾ ಸಮಯದಲ್ಲಿ ಉಂಟಾಗುವ ಒತ್ತಡ ನಿರ್ವಹಿಸುವಲ್ಲಿ ಬಹುತೇಕರು ವಿಫಲರಾಗುತ್ತಾರೆ. ಇದರಿಂದ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಾರೆ.</p>.<p>(ಲೇಖಕರು: ನಿರ್ದೇಶಕರು, ಸ್ಲೇಟ್ ಸ್ಪರ್ಧಾತ್ಮಕ<br />ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</p>.<p>ದೀರ್ಘಾವಧಿ ಓದಿನ ನಡುವೆ ವಿರಾಮ ಪಡೆಯಿರಿ</p>.<p>ಕೊನೆಯ ನಿಮಿಷದ ತಯಾರಿ ತಪ್ಪಿಸಿ, ಒತ್ತಡ ಮುಕ್ತರಾಗಿರಿ</p>.<p>ಕಠಿಣ ವಿಷಯದ ಅಧ್ಯಯನ ಮುಂದೂಡಬೇಡಿ</p>.<p>ಅತೀ ಹೆಚ್ಚು ಅಥವಾ ಕಡಿಮೆ ನಿದ್ರೆ ಮಾಡಬೇಡಿ</p>.<p>ಮೊಬೈಲ್, ಸಾಮಾಜಿಕ ಮಾಧ್ಯಮಗಳ ಮೋಹಕ್ಕೆ ಸಿಲುಕದಿರಿ</p>.<p>ಅಧ್ಯಯನಕ್ಕಾಗಿ ಬೇರೆಯವರ ಮೇಲೆ ಅವಲಂಬಿತರಾಗದಿರಿ</p>.<p>ನಿಮ್ಮ ತಪ್ಪು ಮರೆಮಾಚಲು ರಕ್ಷಣಾತಂತ್ರ ಬಳಸದಿರಿ</p>.<p>ಅನಗತ್ಯ ಅಧ್ಯಯನ ಸಾಮಗ್ರಿಗಳನ್ನು ಖರೀದಿಸದಿರಿ</p>.<p>ಹಲವಾರು ಪರೀಕ್ಷೆಗಳಿಗೆ ಹಾಜರಾಗದೇ ಆದ್ಯತೆ ಪರಿಗಣಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತ್ತೀಚೆಗೆ ಬಹುತೇಕ ಸರ್ಕಾರಿ ಉದ್ಯೋಗಗಳ ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆ ಆಧರಿಸಿ ನಡೆಯುತ್ತದೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಲ್ಲಿ ಕೆಲವರು ಮಾತ್ರ ಯಶಸ್ಸು ಸಾಧಿಸಿದರೆ ಹಲವರು ವಿಫಲರಾಗುತ್ತಾರೆ. ಈ ವೈಫಲ್ಯಕ್ಕೆ ಕಾರಣಗಳೇನು ಎಂದು ಅರಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ.</p>.<p><strong>ಸಾಮಾನ್ಯವಾಗಿ ಎಲ್ಲ ಸ್ಪರ್ಧಾರ್ಥಿಗಳು ಮಾಡುವ ತಪ್ಪುಗಳೆಂದರೆ…</strong></p>.<p>ಪ್ರಕಟಣೆ ಹೊರಬಿದ್ದ ನಂತರ ತಯಾರಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಅಧ್ಯಯನ ಅಗತ್ಯ. ಬಹುತೇಕ ಸ್ಪರ್ಧಾರ್ಥಿಗಳು ‘ಬೆಂಕಿ ಬಿದ್ದಾಗ ಬಾವಿ ತೋಡಿದರು’ ಎಂಬಂತೆ ನೇಮಕಾತಿ ಪ್ರಕಟಣೆಯ ನಂತರ ಅಧ್ಯಯನದಲ್ಲಿ ತೊಡಗುತ್ತಾರೆ. ಇದರಿಂದ ಪರಿಪೂರ್ಣ ಅಧ್ಯಯನ ಸಾಧ್ಯವಾಗುವುದಿಲ್ಲ.</p>.<p>ಪಠ್ಯಕ್ರಮ ಪರಿಶೀಲಿಸದೇ ಇರುವುದು: ಪ್ರತಿ ಪರೀಕ್ಷೆಗೂ ನಿಗದಿತ ಪಠ್ಯಕ್ರಮ ಇದ್ದೇ ಇರುತ್ತದೆ. ಆದರೆ, ಬಹುತೇಕ ಸ್ಪರ್ಧಾರ್ಥಿಗಳು ಪಠ್ಯಕ್ರಮ ಅರಿಯದೆ ತಮಗೆ ತಿಳಿದುದನ್ನು ತಿಳಿದಂತೆ ಓದುವುದರಿಂದ ಹಿನ್ನಡೆ ಅನುಭವಿಸುತ್ತಾರೆ.</p>.<p>ಉದಾಹರಣೆಗೆ: ಕೆಎಎಸ್, ಪಿಎಸ್ಐ ಮತ್ತು ಎಫ್ಡಿಎ ಪಠ್ಯಕ್ರಮದಲ್ಲಿ ಸಾಮಾನ್ಯ ಅಂಶಗಳು ಇದ್ದರೂ ಪ್ರಶ್ನೆಪತ್ರಿಕೆ ತಯಾರಿಕೆಯಲ್ಲಿ ಬಹಳ ವ್ಯತ್ಯಾಸಗಳಿವೆ. ಪಿಎಸ್ಐ / ಎಫ್ಡಿಎ ಮಟ್ಟದ ತಯಾರಿ ಮಾಡಿಕೊಂಡವರು ಕೆಎಎಸ್ ಪರೀಕ್ಷೆಯಲ್ಲಿ ಪಾಸಾಗುವುದು ಅಸಾಧ್ಯದ ಮಾತು.</p>.<p>ತಪ್ಪಾದ ಅಧ್ಯಯನ ಸಾಮಗ್ರಿಗಳ ಆಯ್ಕೆ: ಒಳ್ಳೆಯ ಪುಸ್ತಕ ಹಾಗೂ ವೆಬ್ ರೆಫರೆನ್ಸ್ ಆಯ್ಕೆ ಮಾಡುವಲ್ಲಿ ತಪ್ಪು ಮಾಡಿದರೆ ಓದು, ಸಮಯ ವ್ಯರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಪರೀಕ್ಷೆ ಪಾಸಾದವರು ಅಥವಾ ತಜ್ಞರ ಮಾರ್ಗದರ್ಶನ ಅಗತ್ಯ.</p>.<p>ಮೂಲ ಆಕರಗಳ ನಿರ್ಲಕ್ಷ್ಯ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 5 ರಿಂದ 12ನೇ ತರಗತಿವರೆಗಿನ ರಾಜ್ಯ ಪಠ್ಯಕ್ರಮ, ಎನ್ಸಿಇಆರ್ಟಿ ಪುಸ್ತಕಗಳು ಮೂಲ ಆಕರಗಳಾಗಿರುತ್ತವೆ. ಈ ಪುಸ್ತಕಗಳನ್ನು ಬಿಟ್ಟು ಬೇರೆ ಪುಸ್ತಕ ಓದುವುದು ಸರಿಯಾದ ಕ್ರಮವಲ್ಲ.</p>.<p>ಪ್ರಶ್ನೆ ಭಂಡಾರ, ಮಾದರಿ ಪ್ರಶ್ನೆಪತ್ರಿಕೆಗಳ ಕಡೆಗಣನೆ: ಆಯಾ ಪರೀಕ್ಷೆಗಳ ಹಿಂದಿನ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಪರೀಕ್ಷೆಗಳ ಒಳನೋಟ ಒದಗಿಸಿದರೆ, ಮಾದರಿ ಪ್ರಶ್ನೆಪತ್ರಿಕೆಗಳು ಮುನ್ನೋಟ ಒದಗಿಸುತ್ತವೆ. ಇದರಿಂದ ಯಾವ ವಿಷಯದಲ್ಲಿ ಯಾವ ಪ್ರಶ್ನೆಗಳನ್ನು ಕೇಳಿದ್ದಾರೆ, ಯಾವ ಪ್ರಶ್ನೆ ಕೇಳಬಹುದು ಎಂದು ಊಹಿಸಬಹುದು.</p>.<p>ಬರೆಯದೇ ಓದುವುದು: ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳು ಬರವಣಿಗೆ ಆಧಾರಿತವಾಗಿರುತ್ತವೆ. ಉದಾಹರಣೆಗೆ: ಕೆಎಎಸ್ ಮುಖ್ಯ ಪರೀಕ್ಷೆ, ಪಿಎಸ್ಐ ಪ್ರಥಮ ಪತ್ರಿಕೆಯಲ್ಲಿ ಪ್ರಬಂಧ ಮಾದರಿ ಉತ್ತರ ಬರೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶುದ್ಧ, ವೇಗವಾದ ಬರವಣಿಗೆಯನ್ನು ರೂಢಿಸಿಕೊಳ್ಳಬೇಕು.</p>.<p>ಸ್ಪಸಾಮರ್ಥ್ಯ ಪರಾಮರ್ಶಿಸದೇ ಇರುವುದು: ಎಸ್ಡಿಎ ಪರೀಕ್ಷೆ ಪಾಸು ಮಾಡುವ ಸಾಮರ್ಥ್ಯ ಇಲ್ಲದ ವ್ಯಕ್ತಿ ಕೆಎಎಸ್ ಪಾಸಾಗುತ್ತೇನೆ ಎಂದು ಭಾವಿಸಿ, ತಯಾರಿಯಲ್ಲಿ ತೊಡಗುತ್ತಾರೆ. ಇದರಿಂದ ವೇಳೆ, ಶ್ರಮದ ಅಪವ್ಯಯಕ್ಕೆ ಕಾರಣವಾಗುತ್ತದೆ.</p>.<p>ದಿನಪತ್ರಿಕೆಗಳ ಓದಿನಲ್ಲಿ ನಿರ್ಲಕ್ಷ್ಯ: ಕೆಲವರು ಆಕರ ಗ್ರಂಥಗಳ ಓದಿಗೆ ನೀಡುವ ಆದ್ಯತೆಯನ್ನು ದಿನಪತ್ರಿಕೆ ಓದಿಗೆ ನೀಡುವುದಿಲ್ಲ. ದಿನಪತ್ರಿಕೆಗಳಲ್ಲಿನ ಪ್ರಚಲಿತ ವಿದ್ಯಮಾನಗಳ ವರದಿ, ಅಂಕಿ-ಅಂಶಗಳು, ಸಂಪಾದಕೀಯ, ಲೇಖನಗಳು ಪರೀಕ್ಷೆಗೆ ಉಪಯುಕ್ತವಾಗಿವೆ. ಇದನ್ನು ಕಡೆಗಣಿಸಿದರೆ ಪ್ರಚಲಿತ ವಿದ್ಯಮಾನ, ಸಾಮಾನ್ಯ ಅಧ್ಯಯನ ವಿಷಯಗಳಲ್ಲಿ ಹಿನ್ನಡೆಯಾಗುತ್ತದೆ.</p>.<p>ಐಚ್ಛಿಕ ವಿಷಯ ಆಯ್ಕೆಯಲ್ಲಿ ಎಡವಟ್ಟು: ರಾಜ್ಯ ಅಥವಾ ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆಗಳಲ್ಲಿ ತಮ್ಮ ಆಸಕ್ತಿ, ಆಕರ, ಅಧ್ಯಯನ ಆಧರಿಸಿ ಐಚ್ಛಿಕ ವಿಷಯಗಳ ಆಯ್ಕೆ ಮಾಡಿಕೊಳ್ಳದೇ, ತಪ್ಪು ವಿಷಯಗಳನ್ನು ಆಯ್ದುಕೊಂಡರೆ ನಿರೀಕ್ಷಿತ ಅಂಕಗಳಿಕೆ ಅಸಾಧ್ಯ.</p>.<p>ಸಮಯ ನಿರ್ವಹಣೆಯ ಕಡೆಗಣನೆ: ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಯೋಜನಾಬದ್ಧವಾಗಿರಬೇಕು. ಆಳ ಅಧ್ಯಯನ, ನೋಟ್ಸ್ ತಯಾರಿ, ಪುನರ್ಮನನಕ್ಕೆ ಸಮರ್ಪಕ ವೇಳೆ ನೀಡಬೇಕು. ಇಲ್ಲದಿದ್ದರೆ, ಇಡೀ ಓದು ವ್ಯರ್ಥವಾಗುತ್ತದೆ.</p>.<p>ಒತ್ತಡ ನಿರ್ವಹಣೆಯಲ್ಲಿ ವೈಫಲ್ಯ: ಪರೀಕ್ಷಾ ಸಮಯದಲ್ಲಿ ಉಂಟಾಗುವ ಒತ್ತಡ ನಿರ್ವಹಿಸುವಲ್ಲಿ ಬಹುತೇಕರು ವಿಫಲರಾಗುತ್ತಾರೆ. ಇದರಿಂದ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಾರೆ.</p>.<p>(ಲೇಖಕರು: ನಿರ್ದೇಶಕರು, ಸ್ಲೇಟ್ ಸ್ಪರ್ಧಾತ್ಮಕ<br />ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)</p>.<p>ದೀರ್ಘಾವಧಿ ಓದಿನ ನಡುವೆ ವಿರಾಮ ಪಡೆಯಿರಿ</p>.<p>ಕೊನೆಯ ನಿಮಿಷದ ತಯಾರಿ ತಪ್ಪಿಸಿ, ಒತ್ತಡ ಮುಕ್ತರಾಗಿರಿ</p>.<p>ಕಠಿಣ ವಿಷಯದ ಅಧ್ಯಯನ ಮುಂದೂಡಬೇಡಿ</p>.<p>ಅತೀ ಹೆಚ್ಚು ಅಥವಾ ಕಡಿಮೆ ನಿದ್ರೆ ಮಾಡಬೇಡಿ</p>.<p>ಮೊಬೈಲ್, ಸಾಮಾಜಿಕ ಮಾಧ್ಯಮಗಳ ಮೋಹಕ್ಕೆ ಸಿಲುಕದಿರಿ</p>.<p>ಅಧ್ಯಯನಕ್ಕಾಗಿ ಬೇರೆಯವರ ಮೇಲೆ ಅವಲಂಬಿತರಾಗದಿರಿ</p>.<p>ನಿಮ್ಮ ತಪ್ಪು ಮರೆಮಾಚಲು ರಕ್ಷಣಾತಂತ್ರ ಬಳಸದಿರಿ</p>.<p>ಅನಗತ್ಯ ಅಧ್ಯಯನ ಸಾಮಗ್ರಿಗಳನ್ನು ಖರೀದಿಸದಿರಿ</p>.<p>ಹಲವಾರು ಪರೀಕ್ಷೆಗಳಿಗೆ ಹಾಜರಾಗದೇ ಆದ್ಯತೆ ಪರಿಗಣಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>