ನಟ ರಮೇಶ್ ಅರವಿಂದ್ ‘ವಿದ್ವತ್’ ಆ್ಯಪ್ನ ಪ್ರಚಾರ ರಾಯಭಾರಿಯಾಗಿದ್ದಾರೆ. ಇತ್ತೀಚೆಗೆ ಆ್ಯಪ್ಗೆ ಚಾಲನೆ ನೀಡಿದ ಅವರು, ‘ಬಹಳಷ್ಟು ಪೋಷಕರಿಗೆ ಸಮಯವಿಲ್ಲ. ಹಾಗಾಗಿ, ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಕೊರತೆಯನ್ನು ಆ್ಯಪ್ ನೀಗಿಸಲಿದೆ. ಇದರಲ್ಲಿರುವ ಕಂಟೆಂಟ್ ನನಗೆ ಇಷ್ಟವಾಯಿತು. ಹಾಗಾಗಿಯೇ, ರಾಯಭಾರಿಯಾಗಲು ಒಪ್ಪಿಕೊಂಡೆ’ ಎಂದು ಹೇಳಿದರು.