<p><strong>ನವದೆಹಲಿ: </strong>ಕೋವಿಡ್–19 ಹಬ್ಬಿದ ಬಳಿಕ 15 ರಾಜ್ಯಗಳಲ್ಲಿ ಶೇಕಡ 62ರಷ್ಟು ಕುಟುಂಬಗಳಲ್ಲಿನ ಮಕ್ಕಳು ಶಿಕ್ಷಣ ಪಡೆಯುವುದನ್ನು ಸ್ಥಗಿತಗೊಳಿಸಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.</p>.<p>ಮಕ್ಕಳ ಹಕ್ಕುಗಳ ಕುರಿತಾದ ಸರ್ಕಾರೇತರ ಸಂಸ್ಥೆ ‘ಸೇವ್ ದ ಚಿಲ್ಡ್ರನ್’ ಈ ಸಮೀಕ್ಷೆ ಕೈಗೊಂಡಿತ್ತು. ಜೂನ್ 7ರಿಂದ 30ರವರೆಗೆ 7,235 ಕುಟುಂಬಗಳ ಸಮೀಕ್ಷೆಯನ್ನು ಈ ಸಂಸ್ಥೆ ನಡೆಸಿದೆ.</p>.<p>ಉತ್ತರ ಭಾರತದಲ್ಲಿ ಶೇಕಡ 64 ಮತ್ತು ದಕ್ಷಿಣ ಭಾರತದಲ್ಲಿ ಶೇಕಡ 48ರಷ್ಟು ಮಕ್ಕಳು ಶಿಕ್ಷಣ ಸ್ಥಗಿತಗೊಳಿಸಿದ್ದಾರೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ದೊರೆಯದ ಬಗ್ಗೆಯೂ ಹಲವರು ದೂರಿದ್ದಾರೆ.</p>.<p>ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಾಲೆ ಅಥವಾ ಶಿಕ್ಷಣ ಇಲಾಖೆಯಿಂದ ಯಾವುದೇ ರೀತಿ ಬೆಂಬಲ ದೊರೆಯಲಿಲ್ಲ ಎಂದು ಸರಾಸರಿಯಾಗಿ ಐದರಲ್ಲಿನ ಎರಡು ಕುಟುಂಬಗಳು ತಿಳಿಸಿವೆ.</p>.<p>ಆನ್ಲೈನ್ ತರಗತಿಗಳಿಗೆ ಹಾಜರಾಗಲು ಹಲವರಲ್ಲಿ ಸ್ಮಾರ್ಟ್ಫೋನ್ಗಳು ಇಲ್ಲದಿರುವುದು ಕಂಡು ಬಂದಿದೆ. ಜತೆಗೆ, ಶಾಲೆಗಳು ಮುಚ್ಚಿರುವುದರಿಂದ ನಾಲ್ವರಲ್ಲಿ ಒಂದು ಮಗು ಮನೆಯಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.</p>.<p>ಆಸ್ತಿ ಮಾರಾಟ</p>.<p>ಹಲವರಿಗೆ ಬದುಕು ಸಾಗಿಸುವ ಸಂಕಷ್ಟ ಎದುರಾಗಿದೆ. ಆದಾಯದ ಕೊರತೆಯಿಂದಾಗಿ ಶೇಕಡ 45ರಷ್ಟು ಮಂದಿ ಸಾಲ ಪಡೆಯುವ ಕ್ರಮಕ್ಕೆ ಮುಂದಾಗಿದ್ದಾರೆ. ಹತ್ತು ಮಂದಿಯಲ್ಲಿ ಒಬ್ಬರು ಗೃಹೋಪಯೋಗಿ ವಸ್ತುಗಳು ಮತ್ತು ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ.</p>.<p>ಪೌಷ್ಟಿಕ ಆಹಾರದ ಕೊರತೆ</p>.<p>‘ಮಕ್ಕಳಿಗೆ ಪೌಷ್ಟಿಕ ಆಹಾರವೂ ದೊರೆಯುತ್ತಿಲ್ಲ. ಮಧ್ಯಾಹ್ನದ ಬಿಸಿಯೂಟ ದೊರೆಯುತ್ತಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಹುಪಾಲು ಮಕ್ಕಳಿಗೆ ಬೆಂಬಲ ದೊರೆಯುತ್ತಿಲ್ಲ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ’ ಎಂದು ಸಂಸ್ಥೆಯ ಯೋಜನೆಗಳ ನಿರ್ದೇಶಕ ಅನಿಂದಿತ್ ರಾಯ್ ಚೌಧರಿ ತಿಳಿಸಿದ್ದಾರೆ.</p>.<p>‘ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಿದ್ದಾರೆ. ಅವರಿಗೆ ತಮ್ಮ ಊರಲ್ಲಿ ಮನೆ ಇದೆ. ಆದರೆ, ಉದ್ಯೋಗ ಇಲ್ಲದಂತಾಗಿದೆ. ಆದಾಯ ಇಲ್ಲದೆ ಗ್ರಾಮೀಣ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಈ ರೀತಿಯ ಎಲ್ಲ ಸಮಸ್ಯೆಗಳಿಂದ ಬಾಲಕಾರ್ಮಿಕರ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಮಕ್ಕಳ ಅಕ್ರಮ ಸಾಗಾಣಿಕೆ ನಡೆಯುವ ಸಾಧ್ಯತೆ ಇದೆ. ಬಾಲ್ಯ ವಿವಾಹಗಳು ಹೆಚ್ಚಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.</p>.<p><strong>ಸಮೀಕ್ಷೆ ವಿವರ</strong></p>.<p>1,722: ಪೂರ್ವ ವಲಯದ ಕುಟುಂಬಗಳು</p>.<p>1,130:ಪಶ್ಚಿಮ ವಲಯದ ಕುಟುಂಬಗಳು</p>.<p>ಶೇಕಡ 40:ನಗರ ಪ್ರದೇಶದ ಮಕ್ಕಳಿಗೆ ಬಿಸಿಯೂಟ ಇಲ್ಲ</p>.<p>ಶೇಕಡ 38: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಿಸಿಯೂಟ ಇಲ್ಲ</p>.<p>ಶೇಕಡ 10; ಕುಟುಂಬಗಳಿಗೆ ಆದಾಯದ ಕೊರತೆ</p>.<p>ಶೇಕಡ 14:ಕುಟುಂಬಗಳಲ್ಲಿ ಸ್ಮಾರ್ಟ್ಫೋನ್ ಇಲ್ಲ</p>.<p>ಶೇಕಡ 80: ಕುಟುಂಬಗಳಲ್ಲಿ ಹಣದ ಕೊರತೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೋವಿಡ್–19 ಹಬ್ಬಿದ ಬಳಿಕ 15 ರಾಜ್ಯಗಳಲ್ಲಿ ಶೇಕಡ 62ರಷ್ಟು ಕುಟುಂಬಗಳಲ್ಲಿನ ಮಕ್ಕಳು ಶಿಕ್ಷಣ ಪಡೆಯುವುದನ್ನು ಸ್ಥಗಿತಗೊಳಿಸಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.</p>.<p>ಮಕ್ಕಳ ಹಕ್ಕುಗಳ ಕುರಿತಾದ ಸರ್ಕಾರೇತರ ಸಂಸ್ಥೆ ‘ಸೇವ್ ದ ಚಿಲ್ಡ್ರನ್’ ಈ ಸಮೀಕ್ಷೆ ಕೈಗೊಂಡಿತ್ತು. ಜೂನ್ 7ರಿಂದ 30ರವರೆಗೆ 7,235 ಕುಟುಂಬಗಳ ಸಮೀಕ್ಷೆಯನ್ನು ಈ ಸಂಸ್ಥೆ ನಡೆಸಿದೆ.</p>.<p>ಉತ್ತರ ಭಾರತದಲ್ಲಿ ಶೇಕಡ 64 ಮತ್ತು ದಕ್ಷಿಣ ಭಾರತದಲ್ಲಿ ಶೇಕಡ 48ರಷ್ಟು ಮಕ್ಕಳು ಶಿಕ್ಷಣ ಸ್ಥಗಿತಗೊಳಿಸಿದ್ದಾರೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ದೊರೆಯದ ಬಗ್ಗೆಯೂ ಹಲವರು ದೂರಿದ್ದಾರೆ.</p>.<p>ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಾಲೆ ಅಥವಾ ಶಿಕ್ಷಣ ಇಲಾಖೆಯಿಂದ ಯಾವುದೇ ರೀತಿ ಬೆಂಬಲ ದೊರೆಯಲಿಲ್ಲ ಎಂದು ಸರಾಸರಿಯಾಗಿ ಐದರಲ್ಲಿನ ಎರಡು ಕುಟುಂಬಗಳು ತಿಳಿಸಿವೆ.</p>.<p>ಆನ್ಲೈನ್ ತರಗತಿಗಳಿಗೆ ಹಾಜರಾಗಲು ಹಲವರಲ್ಲಿ ಸ್ಮಾರ್ಟ್ಫೋನ್ಗಳು ಇಲ್ಲದಿರುವುದು ಕಂಡು ಬಂದಿದೆ. ಜತೆಗೆ, ಶಾಲೆಗಳು ಮುಚ್ಚಿರುವುದರಿಂದ ನಾಲ್ವರಲ್ಲಿ ಒಂದು ಮಗು ಮನೆಯಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.</p>.<p>ಆಸ್ತಿ ಮಾರಾಟ</p>.<p>ಹಲವರಿಗೆ ಬದುಕು ಸಾಗಿಸುವ ಸಂಕಷ್ಟ ಎದುರಾಗಿದೆ. ಆದಾಯದ ಕೊರತೆಯಿಂದಾಗಿ ಶೇಕಡ 45ರಷ್ಟು ಮಂದಿ ಸಾಲ ಪಡೆಯುವ ಕ್ರಮಕ್ಕೆ ಮುಂದಾಗಿದ್ದಾರೆ. ಹತ್ತು ಮಂದಿಯಲ್ಲಿ ಒಬ್ಬರು ಗೃಹೋಪಯೋಗಿ ವಸ್ತುಗಳು ಮತ್ತು ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ.</p>.<p>ಪೌಷ್ಟಿಕ ಆಹಾರದ ಕೊರತೆ</p>.<p>‘ಮಕ್ಕಳಿಗೆ ಪೌಷ್ಟಿಕ ಆಹಾರವೂ ದೊರೆಯುತ್ತಿಲ್ಲ. ಮಧ್ಯಾಹ್ನದ ಬಿಸಿಯೂಟ ದೊರೆಯುತ್ತಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಹುಪಾಲು ಮಕ್ಕಳಿಗೆ ಬೆಂಬಲ ದೊರೆಯುತ್ತಿಲ್ಲ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ’ ಎಂದು ಸಂಸ್ಥೆಯ ಯೋಜನೆಗಳ ನಿರ್ದೇಶಕ ಅನಿಂದಿತ್ ರಾಯ್ ಚೌಧರಿ ತಿಳಿಸಿದ್ದಾರೆ.</p>.<p>‘ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಿದ್ದಾರೆ. ಅವರಿಗೆ ತಮ್ಮ ಊರಲ್ಲಿ ಮನೆ ಇದೆ. ಆದರೆ, ಉದ್ಯೋಗ ಇಲ್ಲದಂತಾಗಿದೆ. ಆದಾಯ ಇಲ್ಲದೆ ಗ್ರಾಮೀಣ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಈ ರೀತಿಯ ಎಲ್ಲ ಸಮಸ್ಯೆಗಳಿಂದ ಬಾಲಕಾರ್ಮಿಕರ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಮಕ್ಕಳ ಅಕ್ರಮ ಸಾಗಾಣಿಕೆ ನಡೆಯುವ ಸಾಧ್ಯತೆ ಇದೆ. ಬಾಲ್ಯ ವಿವಾಹಗಳು ಹೆಚ್ಚಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.</p>.<p><strong>ಸಮೀಕ್ಷೆ ವಿವರ</strong></p>.<p>1,722: ಪೂರ್ವ ವಲಯದ ಕುಟುಂಬಗಳು</p>.<p>1,130:ಪಶ್ಚಿಮ ವಲಯದ ಕುಟುಂಬಗಳು</p>.<p>ಶೇಕಡ 40:ನಗರ ಪ್ರದೇಶದ ಮಕ್ಕಳಿಗೆ ಬಿಸಿಯೂಟ ಇಲ್ಲ</p>.<p>ಶೇಕಡ 38: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಿಸಿಯೂಟ ಇಲ್ಲ</p>.<p>ಶೇಕಡ 10; ಕುಟುಂಬಗಳಿಗೆ ಆದಾಯದ ಕೊರತೆ</p>.<p>ಶೇಕಡ 14:ಕುಟುಂಬಗಳಲ್ಲಿ ಸ್ಮಾರ್ಟ್ಫೋನ್ ಇಲ್ಲ</p>.<p>ಶೇಕಡ 80: ಕುಟುಂಬಗಳಲ್ಲಿ ಹಣದ ಕೊರತೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>