ಅರ್ಹರಾಗಿರುವ ಎಲ್ಲರೂ ಖಂಡಿತವಾಗಿಯೂ ಮತದಾನ ಮಾಡಬೇಕು. ನಮಗೆ ರಸ್ತೆ ಇಲ್ಲ, ನೀರು ಇಲ್ಲ, ಬಸ್ ಇಲ್ಲ... ಹೀಗೆ ಅನೇಕ ಸೌಕರ್ಯಗಳ ಕೊರತೆಯ ಬಗ್ಗೆ ಜನರು ಮಾತನಾಡುತ್ತಲೇ ಇರುತ್ತಾರೆ. ಆದರೆ, ಚುನಾವಣೆ ಬಂದಾಗ ಕೆಲವರು ಮತದಾನ ಮಾಡದೇ ಸುಮ್ಮನಿರುತ್ತಾರೆ. ಇದು ನಿಜಕ್ಕೂ ಸರಿಯಲ್ಲ. ಚುನಾವಣೆ ಬಂದಾಗ ಈ ಎಲ್ಲ ಕೊರತೆಗಳನ್ನು ನೀಗಿಸುವ ಭರವಸೆ ಇರುವ ಅಭ್ಯರ್ಥಿಗೆ ಮತದಾನ ಮಾಡಬೇಕು.