‘ನಿಪ್ಪಾಣಿ ಕ್ಷೇತ್ರದಲ್ಲಿ ನಿಮ್ಮ ಮನೆ ಮಗಳು ಶಶಿಕಲಾ ಸ್ಪರ್ಧೆಸಿದ್ದಾರೆ. ತವರು ನೆಲದಲ್ಲಿ ಹೆಣ್ಣುಮಗಳಿಗೆ ಅವಮಾನ ಆಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಕಾಂಗ್ರೆಸ್ ಹಾಗೂ ಎನ್ಸಿಪಿ ಅಭ್ಯರ್ಥಿಗಳೂ ಎಚ್ಚರ ವಹಿಸಿ; ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಲಿಯಿರಿ’ ಎಂದೂ ಹೇಳಿದರು.
‘ಇಡೀ ರಾಜ್ಯದಲ್ಲಿ ಎನ್ಸಿಪಿ ನಿಪ್ಪಾಣಿಯಲ್ಲಿ ಮಾತ್ರ ಸ್ಫರ್ಧಿಸಿದೆ. ಒಬ್ಬರೇ ಗೆದ್ದು ಸರ್ಕಾರ ತರಲು ಸಾಧ್ಯವೇ? ಈ ಚುನಾವಣೆ ನೆಪಮಾತ್ರ. ಶಶಿಕಲಾ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುವುದೇ ಎನ್ಸಿಪಿ, ಕಾಂಗ್ರೆಸ್ ಹುನ್ನಾರ’ ಎಂದೂ ಹರಿಹಾಯ್ದರು.
‘ಬಿಜೆಪಿ ಮುಸ್ಲಿಂ ಮೀಸಲಾತಿ ರದ್ದುಪಡಿಸಿ ಒಕ್ಕಲಿಗ ಮತ್ತು ಲಿಂಗಾಯತ ಸಮಾಜಕ್ಕೆ ಮೀಸಲಾತಿ ಕೊಟ್ಟರೆ ನಿರ್ಲಜ್ಜ ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋಗಿದೆ’ ಎಂದರು.