<p><strong>ಕೂಚ್ಬಿಹಾರ್/ಕೋಲ್ಕತ್ತ:</strong> ಪಶ್ಚಿಮ ಬಂಗಾಳದಲ್ಲಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನದ ವೇಳೆ, ಹಲವೆಡೆ ಹಿಂಸಾಚಾರ ನಡೆದಿದೆ.</p>.<p>ಕೂಚ್ ಬಿಹಾರ್ ಕ್ಷೇತ್ರದಲ್ಲಿ ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದೆ.</p>.<p>ಮತದಾನದ ವೇಳೆ ಹಿಂಸಾಚಾರ, ಮತದಾರರಿಗೆ ಬೆದರಿಕೆ ಒಡ್ಡಿರುವುದು ಹಾಗೂ ಏಜೆಂಟರ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿ ಟಿಎಂಸಿ ಹಾಗೂ ಬಿಜೆಪಿ ಕ್ರಮವಾಗಿ 80 ಹಾಗೂ 30 ದೂರುಗಳನ್ನು ದಾಖಲಿಸಿವೆ ಎಂದು ಎರಡೂ ಪಕ್ಷಗಳ ಮೂಲಗಳು ಹೇಳಿವೆ.</p>.<p>ಕೂಚ್ಬಿಹಾರ್ ಹಾಗೂ ಅಲಿಪುರ್ದೌರ್ ಕ್ಷೇತ್ರಗಳಲ್ಲಿ ಅಧಿಕ ಸಂಖ್ಯೆಯ ದೂರುಗಳು ದಾಖಲಾಗಿವೆ.</p>.<p>‘ಹಲವು ದೂರುಗಳನ್ನು ಸ್ವೀಕರಿಸಿದ್ದೇವೆ. ಆದರೆ, ಹಿಂಸಾಚಾರ ನಡೆದ ಬಗ್ಗೆ ಈವರೆಗೆ ನಮಗೆ ಯಾವುದೇ ವರದಿಗಳು ಬಂದಿಲ್ಲ’ ಎಂದು ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ನಿಸಿತ್ ಪ್ರಾಮಾಣಿಕ್ (ಕೂಚ್ ಬಿಹಾರ್ದಿಂದ ಸ್ಪರ್ಧೆ) ಸೇರಿದಂತೆ 37 ಅಭ್ಯರ್ಥಿಗಳು ಈ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ.</p>.<p>ಆರೋಪ–ಪ್ರತ್ಯಾರೋಪ: ‘ಕೂಚ್ಬಿಹಾರ್ ಕ್ಷೇತ್ರದ ಸೀತಲಕುಚಿಯಲ್ಲಿ ಪಕ್ಷದ ಏಜೆಂಟರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಮತದಾರರು ಕೆಲ ಮತಗಟ್ಟೆಗಳ ಪ್ರವೇಶಿಸುವುದನ್ನು ತಡೆದಿದ್ದಾರೆ ’ ಎಂದು ಟಿಎಂಸಿ ಆರೋಪಿಸಿದೆ.</p>.<p>ಈ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ, ಟಿಎಂಸಿ ಕಾರ್ಯಕರ್ತರೇ ಮತದಾರರನ್ನು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿದ್ದಾರೆ.</p>.<p>ಕೂಚ್ಬಿಹಾರ್ ಜಿಲ್ಲೆಯ ಮಾಥಾಭಾಂಗಾ ಎಂಬಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿರುವ ದೃಶ್ಯಗಳು ಕೆಲ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ.</p>.<p>ಅಮಿತ್ ಶಾ ಪೋಸ್ಟ್: ಮೊದಲ ಹಂತದ ಮತದಾನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿ,‘ಒಳನುಸುಳುವಿಕೆ ಹಾಗೂ ಭ್ರಷ್ಟಾಚಾರ ತಡೆಗಟ್ಟುವುದಕ್ಕಾಗಿ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು’ ಎಂದು ಒತ್ತಾಯಿಸಿದ್ದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ್ದ ಟಿಎಂಸಿ ಮುಖಂಡ ಕುನಾಲ್ ಘೋಷ್, ‘ಅಕ್ರಮವಾಗಿ ದೇಶದೊಳಗೆ ನುಸುಳುವುದನ್ನು ತಡೆಗಟ್ಟುವುದು ಕೇಂದ್ರ ಗೃಹ ಸಚಿವರ ಕಚೇರಿ ಹಾಗೂ ಬಿಎಸ್ಎಫ್ನ ಕೆಲಸ’ ಎಂದು ಹೇಳಿದ್ದಾರೆ.</p>.<p><strong>ಮತದಾನದ ಸುತ್ತ...</strong></p>.<p>* ಅಕ್ರಮವಾಗಿ ಮತ ಚಲಾವಣೆ ಮಾಡುವುದಕ್ಕೆ ಕೇಂದ್ರೀಯ ಪಡೆಗಳು ಬಿಜೆಪಿ ಕಾರ್ಯಕರ್ತರಿಗೆ ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾಥಾಭಾಂಗಾದಲ್ಲಿ ಟಿಎಂಸಿ ಕಾರ್ಯಕರ್ತರಿಂದ ಪ್ರತಿಭಟನೆ</p>.<p>* ಟಿಎಂಸಿಯ ಬೇಥಗುರಿ ಬ್ಲಾಕ್ ಅಧ್ಯಕ್ಷ ಅನಂತ ಬರ್ಮನ್ ಅವರನ್ನು ಬಿಜೆಪಿ ಕಾರ್ಯಕರ್ತರು ಥಳಿಸಿದ ಆರೋಪ. ಅನಂತರ ಆಸ್ಪತ್ರೆಗೆ ದಾಖಲು</p>.<p>* ಕೂಚ್ಬಿಹಾರ್ ದಕ್ಷಿಣ ಭಾಗದಲ್ಲಿ ಪಕ್ಷದ ಕಾರ್ಯಕರ್ತರನ್ನು ಟಿಎಂಸಿ ಅಪಹರಿಸಿದೆ. ಏಜೆಂಟರು ಮತಗಟ್ಟೆ ಪ್ರವೇಶಿಸದಂತೆ ತಡೆದಿದೆ ಎಂದು ಬಿಜೆಪಿ ಆರೋಪ</p>.<p>ಚುನಾವಣಾ ಅಕ್ರಮ ನಡೆಸುವುದಕ್ಕಾಗಿ ಬಿಜೆಪಿಯು ಕೇಂದ್ರೀಯ ಪಡೆಗಳ ಜೊತೆ ಸೇರಿ ಭಯದ ವಾತಾವರಣ ನಿರ್ಮಿಸಿದೆ. ಟಿಎಂಸಿ ಕಾರ್ಯಕರ್ತರನ್ನು ಥಳಿಸಲಾಗಿದೆ </p><p>-ಉದಯನ್ ಗುಹಾ ಉತ್ತರ ಬಂಗಾಳ ಅಭಿವೃದ್ಧಿ ಸಚಿವ</p>.<p>ತಾನು ಸೋಲುವುದನ್ನು ಮನಗಂಡಿರುವ ಟಿಎಂಸಿ ಮತದಾರರನ್ನು ಬೆದರಿಸಲು ಯತ್ನಿಸಿದೆ. ಉದಯನ್ ಗುಹಾ ತಾವು ಹೋದಲ್ಲೆಲ್ಲಾ ಜನರನ್ನು ಪ್ರಚೋದಿಸಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಾರೆ </p><p>-ನಿಸಿತ್ ಪ್ರಾಮಾಣಿಕ್ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಚ್ಬಿಹಾರ್/ಕೋಲ್ಕತ್ತ:</strong> ಪಶ್ಚಿಮ ಬಂಗಾಳದಲ್ಲಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನದ ವೇಳೆ, ಹಲವೆಡೆ ಹಿಂಸಾಚಾರ ನಡೆದಿದೆ.</p>.<p>ಕೂಚ್ ಬಿಹಾರ್ ಕ್ಷೇತ್ರದಲ್ಲಿ ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದೆ.</p>.<p>ಮತದಾನದ ವೇಳೆ ಹಿಂಸಾಚಾರ, ಮತದಾರರಿಗೆ ಬೆದರಿಕೆ ಒಡ್ಡಿರುವುದು ಹಾಗೂ ಏಜೆಂಟರ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿ ಟಿಎಂಸಿ ಹಾಗೂ ಬಿಜೆಪಿ ಕ್ರಮವಾಗಿ 80 ಹಾಗೂ 30 ದೂರುಗಳನ್ನು ದಾಖಲಿಸಿವೆ ಎಂದು ಎರಡೂ ಪಕ್ಷಗಳ ಮೂಲಗಳು ಹೇಳಿವೆ.</p>.<p>ಕೂಚ್ಬಿಹಾರ್ ಹಾಗೂ ಅಲಿಪುರ್ದೌರ್ ಕ್ಷೇತ್ರಗಳಲ್ಲಿ ಅಧಿಕ ಸಂಖ್ಯೆಯ ದೂರುಗಳು ದಾಖಲಾಗಿವೆ.</p>.<p>‘ಹಲವು ದೂರುಗಳನ್ನು ಸ್ವೀಕರಿಸಿದ್ದೇವೆ. ಆದರೆ, ಹಿಂಸಾಚಾರ ನಡೆದ ಬಗ್ಗೆ ಈವರೆಗೆ ನಮಗೆ ಯಾವುದೇ ವರದಿಗಳು ಬಂದಿಲ್ಲ’ ಎಂದು ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ನಿಸಿತ್ ಪ್ರಾಮಾಣಿಕ್ (ಕೂಚ್ ಬಿಹಾರ್ದಿಂದ ಸ್ಪರ್ಧೆ) ಸೇರಿದಂತೆ 37 ಅಭ್ಯರ್ಥಿಗಳು ಈ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ.</p>.<p>ಆರೋಪ–ಪ್ರತ್ಯಾರೋಪ: ‘ಕೂಚ್ಬಿಹಾರ್ ಕ್ಷೇತ್ರದ ಸೀತಲಕುಚಿಯಲ್ಲಿ ಪಕ್ಷದ ಏಜೆಂಟರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಮತದಾರರು ಕೆಲ ಮತಗಟ್ಟೆಗಳ ಪ್ರವೇಶಿಸುವುದನ್ನು ತಡೆದಿದ್ದಾರೆ ’ ಎಂದು ಟಿಎಂಸಿ ಆರೋಪಿಸಿದೆ.</p>.<p>ಈ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ, ಟಿಎಂಸಿ ಕಾರ್ಯಕರ್ತರೇ ಮತದಾರರನ್ನು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿದ್ದಾರೆ.</p>.<p>ಕೂಚ್ಬಿಹಾರ್ ಜಿಲ್ಲೆಯ ಮಾಥಾಭಾಂಗಾ ಎಂಬಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿರುವ ದೃಶ್ಯಗಳು ಕೆಲ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿವೆ.</p>.<p>ಅಮಿತ್ ಶಾ ಪೋಸ್ಟ್: ಮೊದಲ ಹಂತದ ಮತದಾನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿ,‘ಒಳನುಸುಳುವಿಕೆ ಹಾಗೂ ಭ್ರಷ್ಟಾಚಾರ ತಡೆಗಟ್ಟುವುದಕ್ಕಾಗಿ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು’ ಎಂದು ಒತ್ತಾಯಿಸಿದ್ದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ್ದ ಟಿಎಂಸಿ ಮುಖಂಡ ಕುನಾಲ್ ಘೋಷ್, ‘ಅಕ್ರಮವಾಗಿ ದೇಶದೊಳಗೆ ನುಸುಳುವುದನ್ನು ತಡೆಗಟ್ಟುವುದು ಕೇಂದ್ರ ಗೃಹ ಸಚಿವರ ಕಚೇರಿ ಹಾಗೂ ಬಿಎಸ್ಎಫ್ನ ಕೆಲಸ’ ಎಂದು ಹೇಳಿದ್ದಾರೆ.</p>.<p><strong>ಮತದಾನದ ಸುತ್ತ...</strong></p>.<p>* ಅಕ್ರಮವಾಗಿ ಮತ ಚಲಾವಣೆ ಮಾಡುವುದಕ್ಕೆ ಕೇಂದ್ರೀಯ ಪಡೆಗಳು ಬಿಜೆಪಿ ಕಾರ್ಯಕರ್ತರಿಗೆ ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾಥಾಭಾಂಗಾದಲ್ಲಿ ಟಿಎಂಸಿ ಕಾರ್ಯಕರ್ತರಿಂದ ಪ್ರತಿಭಟನೆ</p>.<p>* ಟಿಎಂಸಿಯ ಬೇಥಗುರಿ ಬ್ಲಾಕ್ ಅಧ್ಯಕ್ಷ ಅನಂತ ಬರ್ಮನ್ ಅವರನ್ನು ಬಿಜೆಪಿ ಕಾರ್ಯಕರ್ತರು ಥಳಿಸಿದ ಆರೋಪ. ಅನಂತರ ಆಸ್ಪತ್ರೆಗೆ ದಾಖಲು</p>.<p>* ಕೂಚ್ಬಿಹಾರ್ ದಕ್ಷಿಣ ಭಾಗದಲ್ಲಿ ಪಕ್ಷದ ಕಾರ್ಯಕರ್ತರನ್ನು ಟಿಎಂಸಿ ಅಪಹರಿಸಿದೆ. ಏಜೆಂಟರು ಮತಗಟ್ಟೆ ಪ್ರವೇಶಿಸದಂತೆ ತಡೆದಿದೆ ಎಂದು ಬಿಜೆಪಿ ಆರೋಪ</p>.<p>ಚುನಾವಣಾ ಅಕ್ರಮ ನಡೆಸುವುದಕ್ಕಾಗಿ ಬಿಜೆಪಿಯು ಕೇಂದ್ರೀಯ ಪಡೆಗಳ ಜೊತೆ ಸೇರಿ ಭಯದ ವಾತಾವರಣ ನಿರ್ಮಿಸಿದೆ. ಟಿಎಂಸಿ ಕಾರ್ಯಕರ್ತರನ್ನು ಥಳಿಸಲಾಗಿದೆ </p><p>-ಉದಯನ್ ಗುಹಾ ಉತ್ತರ ಬಂಗಾಳ ಅಭಿವೃದ್ಧಿ ಸಚಿವ</p>.<p>ತಾನು ಸೋಲುವುದನ್ನು ಮನಗಂಡಿರುವ ಟಿಎಂಸಿ ಮತದಾರರನ್ನು ಬೆದರಿಸಲು ಯತ್ನಿಸಿದೆ. ಉದಯನ್ ಗುಹಾ ತಾವು ಹೋದಲ್ಲೆಲ್ಲಾ ಜನರನ್ನು ಪ್ರಚೋದಿಸಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಾರೆ </p><p>-ನಿಸಿತ್ ಪ್ರಾಮಾಣಿಕ್ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>