ಪ್ರಚಾರದ ವೇಳೆ ಮೋದಿ, ಒಡಿಶಾದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಒಡಿಶಾದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಸರ್ಕಾರವು ಜನರೊಂದಿಗೆ ಸಂಪರ್ಕ ಕಡಿದುಕೊಂಡಿದೆ ಎಂದು ಆರೋಪಿಸಿದ್ದ ಮೋದಿ, ರಾಜ್ಯದ ಜನರೊಂದಿಗಿನ ತಮ್ಮ ಸಂಬಂಧವು ಭಾಷೆಯ ವ್ಯತ್ಯಾಸವನ್ನೂ ಮೀರಿ ನಿಕಟವಾಗಿದೆ ಎಂದಿದ್ದರು.
'ರಾಜ, ಮಹಾರಾಜರ ಕಾಲದಲ್ಲಿಯೂ, ಆಡಳಿತಗಾರರು ಮತ್ತು ಗ್ರಾಮೀಣ ಜನರು, ಸಾಮಾನ್ಯರ ನಡುವೆ ಬಾಂಧವ್ಯ ಇರುತ್ತಿತ್ತು. ಅದು ಈಗ ಒಡಿಶಾದಲ್ಲಿ ಸಂಪೂರ್ಣವಾಗಿ ಮಾಯವಾಗಿದೆ' ಎಂದು ಕಿಡಿಕಾರಿದ್ದರು.