<p><strong>ಬಾಗಲಕೋಟೆ: ‘</strong>ಗಜಕೇಸರಿ ಯೋಗದಲ್ಲಿ ಹುಟ್ಟಿದ್ದೇನೆ. ನಾನು ಹುಟ್ಟಿದ ವರ್ಷ ಮೊದಲನೇ ಬಾರಿ ನಮ್ಮ ತಂದೆ ಶಾಸಕರಾಗಿದ್ದರು. ಈಗ ಯೋಗ ಹೇಗೆ ಬಂದಿದೆ ಎಂದರೆ ಮುಂದೆ ಪ್ರಧಾನಿಯಾಗಲೂಬಹುದು’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.</p><p>ಬಾಗಲಕೋಟೆಯಲ್ಲಿ ಭಾನುವಾರ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಸಣ್ಣಾಕಿ ಇದ್ದಾಗ ಟೀಚರ್ ಮುಂದೆ ಏನು ಆಗುತ್ತಿ?’ ಎಂದು ಕೇಳುತ್ತಿದ್ದರು. ‘ಭಾರತ ದೇಶದ ಪ್ರಧಾನಿಯಾಗುತ್ತೇನೆ’ ಎನ್ನುತ್ತಿದ್ದೆ. ಮುಂದೆ ಅದು ನಿಜವಾಗಲೂಬಹುದು’ ಎಂದರು.</p><p>ಸಂಯುಕ್ತಾ ಪಾಟೀಲ ತಂದೆ, ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ಯೋಗಗಳು ಬರುತ್ತವೆ, ಹೋಗುತ್ತವೆ. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವುದರಲ್ಲಿ ನಂಬಿಕೆ ಇಟ್ಟವನು. ಪರಿಶ್ರಮವಿದ್ದರೆ ಸೋಲು, ಗೆಲುವಾಗಿ ಪರಿವರ್ತನೆಯಾಗುತ್ತದೆ’ ಎಂದರು.</p><p><strong>ಕೆಪಿಸಿಸಿಗೆ ದೂರು: </strong>‘ಕಾಂಗ್ರೆಸ್ ಟಿಕೆಟ್ ತಪ್ಪಲು ಶಾಸಕರು ಕಾರಣ’ ಎಂದು ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಹಾಗೂ ಬೆಂಬಲಿಗರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದನ್ನು ಮುಂದುವರೆಸಿದರೆ ಕೆಪಿಸಿಸಿ, ಎಐಸಿಸಿಗೆ ದೂರು ನೀಡಬೇಕಾಗುತ್ತದೆ ಎಂದು ಶಾಸಕ ಜೆ.ಟಿ. ಪಾಟೀಲ ಎಚ್ಚರಿಸಿದರು.</p><p>‘ಯಾವುದೇ ತಪ್ಪು ಮಾಡದೆ ನಾನು ಹಾಗೂ ವೇದಿಕೆ ಮೇಲಿರುವ ಶಾಸಕರು ಆರೋಪ ಹೊರಲು ಸಿದ್ಧರಿಲ್ಲ. ನಾವು ಕಾರಣ ಎಂದು ಸಾಬೀತು ಮಾಡಿದರೆ ರಾಜೀನಾಮೆ ನೀಡಲೂ ಸಿದ್ಧ’ ಎಂದು ಸವಾಲು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: ‘</strong>ಗಜಕೇಸರಿ ಯೋಗದಲ್ಲಿ ಹುಟ್ಟಿದ್ದೇನೆ. ನಾನು ಹುಟ್ಟಿದ ವರ್ಷ ಮೊದಲನೇ ಬಾರಿ ನಮ್ಮ ತಂದೆ ಶಾಸಕರಾಗಿದ್ದರು. ಈಗ ಯೋಗ ಹೇಗೆ ಬಂದಿದೆ ಎಂದರೆ ಮುಂದೆ ಪ್ರಧಾನಿಯಾಗಲೂಬಹುದು’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.</p><p>ಬಾಗಲಕೋಟೆಯಲ್ಲಿ ಭಾನುವಾರ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಸಣ್ಣಾಕಿ ಇದ್ದಾಗ ಟೀಚರ್ ಮುಂದೆ ಏನು ಆಗುತ್ತಿ?’ ಎಂದು ಕೇಳುತ್ತಿದ್ದರು. ‘ಭಾರತ ದೇಶದ ಪ್ರಧಾನಿಯಾಗುತ್ತೇನೆ’ ಎನ್ನುತ್ತಿದ್ದೆ. ಮುಂದೆ ಅದು ನಿಜವಾಗಲೂಬಹುದು’ ಎಂದರು.</p><p>ಸಂಯುಕ್ತಾ ಪಾಟೀಲ ತಂದೆ, ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ಯೋಗಗಳು ಬರುತ್ತವೆ, ಹೋಗುತ್ತವೆ. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವುದರಲ್ಲಿ ನಂಬಿಕೆ ಇಟ್ಟವನು. ಪರಿಶ್ರಮವಿದ್ದರೆ ಸೋಲು, ಗೆಲುವಾಗಿ ಪರಿವರ್ತನೆಯಾಗುತ್ತದೆ’ ಎಂದರು.</p><p><strong>ಕೆಪಿಸಿಸಿಗೆ ದೂರು: </strong>‘ಕಾಂಗ್ರೆಸ್ ಟಿಕೆಟ್ ತಪ್ಪಲು ಶಾಸಕರು ಕಾರಣ’ ಎಂದು ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಹಾಗೂ ಬೆಂಬಲಿಗರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದನ್ನು ಮುಂದುವರೆಸಿದರೆ ಕೆಪಿಸಿಸಿ, ಎಐಸಿಸಿಗೆ ದೂರು ನೀಡಬೇಕಾಗುತ್ತದೆ ಎಂದು ಶಾಸಕ ಜೆ.ಟಿ. ಪಾಟೀಲ ಎಚ್ಚರಿಸಿದರು.</p><p>‘ಯಾವುದೇ ತಪ್ಪು ಮಾಡದೆ ನಾನು ಹಾಗೂ ವೇದಿಕೆ ಮೇಲಿರುವ ಶಾಸಕರು ಆರೋಪ ಹೊರಲು ಸಿದ್ಧರಿಲ್ಲ. ನಾವು ಕಾರಣ ಎಂದು ಸಾಬೀತು ಮಾಡಿದರೆ ರಾಜೀನಾಮೆ ನೀಡಲೂ ಸಿದ್ಧ’ ಎಂದು ಸವಾಲು ಹಾಕಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>