<p><strong>ಬೆಂಗಳೂರು:</strong> ನಗರದ ಮೂವರು ಸಂಸದರು ತಮ್ಮ ಲೋಕಸಭಾ ಕ್ಷೇತ್ರದ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿನ (ಎಂ.ಪಿ. ಲ್ಯಾಡ್ಸ್) ₹55.88 ಕೋಟಿ ಉಪಯೋಗಿಸಿಕೊಂಡಿದ್ದು, ಅದರಲ್ಲಿ ಶೇ 42.67ರಷ್ಟು ಅನುದಾನವನ್ನು ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿದ್ದಾರೆ.</p>.<p>ಬೆಂಗಳೂರಿನ ಉತ್ತರ, ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ 2019ರಿಂದ 2024ರವರೆಗಿನ ಅನುದಾನ ಬಳಕೆ ವಿವರಗಳನ್ನು ಪರಿಶೀಲಿಸಿ ‘ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಕಮಿಟಿ’ (ಬಿ–ಪ್ಯಾಕ್) ಶನಿವಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶಗಳಿವೆ.</p>.<p>ಅನುದಾನದಲ್ಲಿ ಶುದ್ಧ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗೆ ಖರ್ಚು ಮಾಡಲಾಗಿದೆ. ನಂತರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಸಂಸದರೊಬ್ಬರಿಗೆ ಪ್ರತಿವರ್ಷ ಎಂ.ಪಿ.ಲ್ಯಾಡ್ಸ್ಯಡಿ ₹ 5 ಕೋಟಿ ಅನುದಾನ ಲಭ್ಯವಾಗುತ್ತದೆ.</p>.<p>ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ₹19.36 ಕೋಟಿ ಅನುದಾನ ಬಳಸಿಕೊಂಡಿದ್ದರೆ, ಕೇಂದ್ರ ಕ್ಷೇತ್ರದ ಪಿ.ಸಿ. ಮೋಹನ್ ₹18.69 ಹಾಗೂ ಉತ್ತರ ಕ್ಷೇತ್ರದ ಡಿ.ವಿ. ಸದಾನಂದ ಗೌಡ ಅವರು ₹17.97 ಕೋಟಿ ಅನುದಾನ ಉಪಯೋಗಿಸಿದ್ದಾರೆ.</p>.<p>‘ಈ ವರದಿ ಮೂಲಕ ಸಂಸದರು ಐದು ವರ್ಷಗಳಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಮತದಾರರಿಗೆ ತಿಳಿಸುವ ಪ್ರಯತ್ನ ಇದಾಗಿದೆ’ ಎಂದು ಬಿ.ಪ್ಯಾಕ್ ಟ್ರಸ್ಟಿ ರೇವತಿ ಅಶೋಕ್ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಕೋವಿಡ್ ಹಿನ್ನೆಲೆಯಲ್ಲಿ ಎ.ಪಿ.ಲ್ಯಾಡ್ಸ್ ಅನ್ನು 2020ರ ಏಪ್ರಿಲ್ 6ರಿಂದ 2021ರ ನವೆಂಬರ್ 9ರವರೆಗೆ ಅಮಾನತುಗೊಳಿಸಲಾಗಿತ್ತು. 2020–21ನೇ ಆರ್ಥಿಕ ಸಾಲಿನಲ್ಲಿ ಈ ಯೋಜನೆಯ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. 2021–22ರ ಆರ್ಥಿಕ ವರ್ಷದಲ್ಲಿ 2021ರ ನವೆಂಬರ್ 10ರಿಂದ 2022ರ ಮಾರ್ಚ್ 31ರವರೆಗೆ ಪ್ರತಿ ಸಂಸದರಿಗೆ ₹2 ಕೋಟಿ ಹಣ ಬಿಡುಗಡೆ ಆಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದ ಮೂವರು ಸಂಸದರು ತಮ್ಮ ಲೋಕಸಭಾ ಕ್ಷೇತ್ರದ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿನ (ಎಂ.ಪಿ. ಲ್ಯಾಡ್ಸ್) ₹55.88 ಕೋಟಿ ಉಪಯೋಗಿಸಿಕೊಂಡಿದ್ದು, ಅದರಲ್ಲಿ ಶೇ 42.67ರಷ್ಟು ಅನುದಾನವನ್ನು ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿದ್ದಾರೆ.</p>.<p>ಬೆಂಗಳೂರಿನ ಉತ್ತರ, ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ 2019ರಿಂದ 2024ರವರೆಗಿನ ಅನುದಾನ ಬಳಕೆ ವಿವರಗಳನ್ನು ಪರಿಶೀಲಿಸಿ ‘ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಕಮಿಟಿ’ (ಬಿ–ಪ್ಯಾಕ್) ಶನಿವಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶಗಳಿವೆ.</p>.<p>ಅನುದಾನದಲ್ಲಿ ಶುದ್ಧ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗೆ ಖರ್ಚು ಮಾಡಲಾಗಿದೆ. ನಂತರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಸಂಸದರೊಬ್ಬರಿಗೆ ಪ್ರತಿವರ್ಷ ಎಂ.ಪಿ.ಲ್ಯಾಡ್ಸ್ಯಡಿ ₹ 5 ಕೋಟಿ ಅನುದಾನ ಲಭ್ಯವಾಗುತ್ತದೆ.</p>.<p>ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ₹19.36 ಕೋಟಿ ಅನುದಾನ ಬಳಸಿಕೊಂಡಿದ್ದರೆ, ಕೇಂದ್ರ ಕ್ಷೇತ್ರದ ಪಿ.ಸಿ. ಮೋಹನ್ ₹18.69 ಹಾಗೂ ಉತ್ತರ ಕ್ಷೇತ್ರದ ಡಿ.ವಿ. ಸದಾನಂದ ಗೌಡ ಅವರು ₹17.97 ಕೋಟಿ ಅನುದಾನ ಉಪಯೋಗಿಸಿದ್ದಾರೆ.</p>.<p>‘ಈ ವರದಿ ಮೂಲಕ ಸಂಸದರು ಐದು ವರ್ಷಗಳಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಮತದಾರರಿಗೆ ತಿಳಿಸುವ ಪ್ರಯತ್ನ ಇದಾಗಿದೆ’ ಎಂದು ಬಿ.ಪ್ಯಾಕ್ ಟ್ರಸ್ಟಿ ರೇವತಿ ಅಶೋಕ್ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಕೋವಿಡ್ ಹಿನ್ನೆಲೆಯಲ್ಲಿ ಎ.ಪಿ.ಲ್ಯಾಡ್ಸ್ ಅನ್ನು 2020ರ ಏಪ್ರಿಲ್ 6ರಿಂದ 2021ರ ನವೆಂಬರ್ 9ರವರೆಗೆ ಅಮಾನತುಗೊಳಿಸಲಾಗಿತ್ತು. 2020–21ನೇ ಆರ್ಥಿಕ ಸಾಲಿನಲ್ಲಿ ಈ ಯೋಜನೆಯ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ. 2021–22ರ ಆರ್ಥಿಕ ವರ್ಷದಲ್ಲಿ 2021ರ ನವೆಂಬರ್ 10ರಿಂದ 2022ರ ಮಾರ್ಚ್ 31ರವರೆಗೆ ಪ್ರತಿ ಸಂಸದರಿಗೆ ₹2 ಕೋಟಿ ಹಣ ಬಿಡುಗಡೆ ಆಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>