ಚಿಕ್ಕಮಗಳೂರು: ಬಿಜೆಪಿ ಎರಡನೇ ಪಟ್ಟಿ ಪ್ರಕಟಿಸಿದ್ದು, ಮೂಡಿಗೆರೆ ಮೀಸಲು ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಟಿಕೆಟ್ ಕೈತಪ್ಪಿದೆ. ಬಿಜೆಪಿ ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ಒಲಿದಿದೆ.
ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಬಾರದು ಎಂದು ಒಂದು ಗುಂಪು ಪಕ್ಷದ ನಾಯಕರಿಗೆ ಒತ್ತಡ ಮಾಡಿತ್ತು. ಮತ್ತೊಂದು ಗುಂಪು ಕುಮಾರಸ್ವಾಮಿ ಅವರಿಗೇ ಟಿಕೆಟ್ ನೀಡಬೇಕು ಎಂದು ಒತ್ತಡ ಹೇರಿದ್ದರು.
ಜಿಲ್ಲೆಯ ಕೆಲ ಮುಖಂಡರು ಕುಮಾರಸ್ವಾಮಿಗೆ ಟಿಕೆಟ್ ತಪ್ಪಿಸಲು ಬಹಳ ದಿನಗಳ ಹಿಂದೆಯೇ ತಂತ್ರ ಹೆಣೆದಿದ್ದರು ಪಕ್ಷದ ಮುಖಂಡರೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.
ಈ ಕ್ಷೇತ್ರದ ಟಿಕೆಟ್ ಗಾಗಿ ಎಂಟಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದರು. ಹಲವು ತಿಂಗಳಿನಿಂದ ತೀವ್ರ ಕಸರತ್ತು ನಡೆಸಿದ್ದ ದೀಪಕ್ ದೊಡ್ಡಯ್ಯ ಅವರು ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.