‘ಹಾಸನದಲ್ಲಿ ಭವಾನಿ ರೇವಣ್ಣ ಏಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ’ ಎಂದು ಪ್ರಶ್ನಿಸಿದ ಅವರು, ‘ದೇವೇಗೌಡರ ನಿರ್ಧಾರಕ್ಕೆ ಬದ್ಧ. ಅವರು ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟರೂ ಒಪ್ಪಿಗೆ ಇದೆ. ಹಾಸನ ಟಿಕೆಟ್ ಸಂಬಂಧ ನಾನು, ಕುಮಾರಸ್ವಾಮಿ ಮಾತನಾಡಿಕೊಂಡಿದ್ದೇವೆ. ಶಕುನಿಗಳ ಮಾತಿಗೆ ತಲೆ ಕೆಡಿಸಿಕೊಳ್ಳಲ್ಲ‘ ಎಂದು ಸ್ಪಷ್ಟಪಡಿಸಿದರು. ಬಿರುಸಿನ ಪ್ರಚಾರ ನಡೆಸಿರುವ ಅವರ ಜೊತೆಗೆ ಭವಾನಿ ಕೂಡ ಮತಯಾಚನೆ ಮಾಡುತ್ತಿದ್ದಾರೆ.