ರಾಜ್ಯದ ಗಮನ ಸೆಳೆದಿದ್ದ ಹೈವೋಲ್ಟೇಜ್ ಕ್ಷೇತ್ರ ಎನಿಸಿಕೊಂಡಿದ್ದ ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇ ಬೇಕೆಂಬ ಹಠದಿಂದ ಬಿಜೆಪಿ ಹೈಕಮಾಂಡ್ ಲಿಂಗಾಯತ ನಾಯಕ ವಿ,ಸೋಮಣ್ಣ ಅವರನ್ನು ನಿಲ್ಲಿಸಿ ಅವರ ಪರ ಅಬ್ಬರದ ಪ್ರಚಾರವನ್ನೂ ಮಾಡಿತ್ತು. ಇತ್ತ ತಂದೆಗಾಗಿ ಕ್ಷೇತ್ರ ಬಿಟ್ಟುಕೊಟ್ಟ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ತಂದೆಯನ್ನ ಗೆಲ್ಲಿಸಲು ಟೊಂಕ ಕಟ್ಟಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಸದ್ಯ ಕ್ಷೆತ್ರ ಉಳಿಸಿಕೊಂಡು ಗೆಲುವಿನ ನಗೆ ಬೀರಿದ್ದಾರೆ ಸಿದ್ದರಾಮಯ್ಯ.