ಹಗರಿಬೊಮ್ಮನಹಳ್ಳಿ (ವಿಜಯನಗರ): ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಶಾಸಕ ಕೆ. ನೇಮರಾಜ ನಾಯ್ಕ ಅವರು ಬುಧವಾರ ಜೆಡಿಎಸ್ ಸೇರಿದರು. ಅದಾದ ಒಂದು ದಿನದ ನಂತರ, ಗುರುವಾರ ನೂರಾರು ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶಿಸಿ ಪಟ್ಟಣದಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ಗಾಳೆಮ್ಮ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಬಂದ ನೇಮರಾಜ ನಾಯ್ಕ ಬಸವೇಶ್ವರ ಪ್ರತಿಮೆಗೆ ಹಾರ ಹಾಕಿ ನಂತರ ಮೆರವಣಿಗೆಯಲ್ಲಿ ತೆರಳಿ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ತಂಬ್ರಹಳ್ಳಿ ಬೈಪಾಸ್ನಲ್ಲಿ ಕಾರ್ಯಕರ್ತರ ನೂಕಾಟ ತಳ್ಳಾಟ ಹೆಚ್ಚಾಗಿತ್ತು. ಜನರನ್ನು ಮುಂದೆ ಕಳಿಸಲು ಪೊಲೀಸರು ಹರಸಾಹಸ ಪಟ್ಟರು. ಇದೇ ವೇಳೆ ಬಂದ ಬಿಜೆಪಿ ಕಾರ್ಯಕರ್ತರ ಮೆರವಣಿಗೆ ಮುಖಾಮುಖಿ ಆಗುವುದನ್ನು ಪೊಲೀಸರು ತಪ್ಪಿಸಿದರು.