ಮೈಸೂರು: ವಿಧಾನಸಭೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆಯು ಇಲ್ಲಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆರಂಭಗೊಳ್ಳಲು ಕ್ಷಣಗಣನೆ ಆರಂಭವಾಗಿದೆ.
ಪೊಲೀಸರು ಹಾಗೂ ಸಿಆರ್ಪಿಎಫ್ನವರು
ಹೆಜ್ಜೆ ಹೆಜ್ಜೆಗೂ ಭದ್ರತಾ ತಪಾಸಣೆ ನಡೆಸುತ್ತಿರುವುದರಿಂದ
ಕೇಂದ್ರವನ್ನು ಪ್ರವೇಶಿಸಲು ಎಣಿಕೆ ಏಜೆಂಟರು ಪರದಾಡುತ್ತಿದ್ದಾರೆ. ಪೊಲೀಸರ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, 143 ಅಭ್ಯರ್ಥಿಗಳು ಕಣದಲ್ಲಿದ್ದರು. ಅವರ ಪರವಾಗಿ ನೇಮಕಗೊಂಡಿರುವ ಅಧಿಕೃತ ಎಣಿಕೆ ಏಜೆಂಟರು ಕೇಂದ್ರದ ಒಳಗಡೆಗೆ ಬರಲು ಸುಗಮವಾದ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಇದರಿಂದಾಗಿ ಎಣಿಕೆ ಕೇಂದ್ರದ ಬಾಗಿಲಲ್ಲಿ ನೂಕು ನುಗ್ಗಲು ಕಂಡುಬರುತ್ತಿದೆ.