‘ಪ್ರಧಾನಿಯಾಗಲು ಮೋದಿ ನಾಲಾಯಕ್ಕು’
‘ದೇವೇಗೌಡರು ಏಕೆ ಇಷ್ಟು ಕೀಳುಮಟ್ಟಕ್ಕೆ, ಕೆಳಮಟ್ಟಕ್ಕೆ ಇಳಿದಿದ್ದಾರೆ? ನಿಮ್ಮ ಜಾತ್ಯತೀತ ಸಿದ್ಧಾಂತ ಏನಾಯಿತು’ ಎಂದು ಸಿದ್ದರಾಮಯ್ಯ ಶಿಡ್ಲಘಟ್ಟದ ರೋಡ್ ಶೋ ವೇಳೆ ಪ್ರಶ್ನಿಸಿದರು. ‘ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ದೇವೇಗೌಡರು ರೈಲು ಬಿಡುತ್ತಿದ್ದಾರೆ. ಗೌಡರೇ, ನಿಮಗೆ ನಾಚಿಕೆ ಆಗಬೇಕು. ಕುಟುಂಬದ ಸ್ವಾರ್ಥಕ್ಕಾಗಿ ಕೋಮುವಾದಿಗಳೊಂದಿಗೆ ಕೈಜೋಡಿಸಿಬಿಟ್ಟಿರಾ’ ಎಂದು ಕೇಳಿದರು.