ತುಮಕೂರು: ‘ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಬಿಜೆಪಿಗೆ ಕರೆತಂದಿದ್ದೇ ನಾನು. ಈಗ ನನಗೆ ವಿರೋಧ ಮಾಡುತ್ತಿದ್ದಾರೆ’ ಎಂದು ಲೋಕಸಭೆ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿಗೆ ಬರುವುದಿಲ್ಲ ಎಂದಿದ್ದರು. ನೀನು ಬುದ್ಧಿವಂತ, ಪ್ರಜ್ಞಾವಂತ ಎಂದು ಹೇಳಿ ಕರೆದುಕೊಂಡು ಬಂದವರಲ್ಲಿ ನಾನು ಮೊದಲಿಗ. ಆದರೆ ಈಗ ಪದೇಪದೇ ಸೋಮಣ್ಣನನ್ನು ಸೋಲಿಸುತ್ತೇನೆ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.
‘ಮಾಧುಸ್ವಾಮಿ ಅಸಮಾಧಾನವನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ. ನಾಯಕರು ಹೇಳಿದಂತೆ ನಡೆದುಕೊಳ್ಳುತ್ತೇನೆ. ನಾನು ಹರಿಯುವ ನೀರು. ಇನ್ಯಾರಿಗೋಸ್ಕರನೋ ಬದುಕಿದವನಲ್ಲ’ ಎಂದು ಹೇಳಿದರು.