ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಕೈಗೊಂಡ ಜನಪರ ಯೋಜನೆಗಳೇ ಕಾಂಗ್ರೆಸ್ಗೆ ಶ್ರೀರಕ್ಷೆಯಾಗಲಿವೆ. 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ವೈಫಲ್ಯಗಳನ್ನು ಜನರು ಗಮನಿಸಿದ್ದಾರೆ. ಬರೀ ಸುಳ್ಳು ಹೇಳಿ 10 ವರ್ಷ ಆಡಳಿತ ಮಾಡಿದ ಪ್ರಧಾನಿಗೆ ತಕ್ಕಪಾಠ ಕಲಿಸಲಿದ್ದಾರೆ. ದೇಶದ ತುಂಬೆಲ್ಲಾ ದ್ವೇಷವನ್ನೇ ಬಿತ್ತಿರುವ ಬಿಜೆಪಿ ಸಚಿವರು, ಸಂಸದರು ಶಾಂತಿಯನ್ನು ಹಾಳು ಮಾಡಿದ್ದಾರೆ. ಅಭಿವೃದ್ಧಿ, ಬೆಲೆ ಏರಿಕೆ, ಹಣದುಬ್ಬರ, ರೂಪಾಯಿ ಮೌಲ್ಯ ಕುಸಿದಿರುವ ಸಂಗತಿಗಳು ಬಿಜೆಪಿಗರಿಗೆ ಚುನಾವಣೆ ವಿಷಯಗಳೇ ಆಗಿಲ್ಲ. ಬರೀ ಮುಸ್ಲಿಂ, ಹಿಂದೂ, ಮಾಂಗಲ್ಯ ಕಸಿಯುವದು, ಆಸ್ತಿ ಕಸಿದುಕೊಳ್ಳುವುದು, ಮಿಸಲಾತಿ ಕಸಿದುಕೊಳ್ಳುವ ದಾಖಲೆ ರಹಿತ ಮಾತುಗಳನ್ನು ಚುನಾವಣೆಯ ಚರ್ಚೆ ಮಾಡುತ್ತಿರುವದು ದುರ್ದೈವದ ಸಂಗತಿಯಾಗಿದೆ ಎಂದು ಹೇಳಿದರು.