ಇಲ್ಲಿನ ತೋಟಗಾರಿಕಾ ಇಲಾಖೆ ಸಮೀಪ ಇರುವ ಶಕೀಲ್ ಶೇಖ್ ಹಾಗೂ ತಬ್ರೇಜ್ ಶೇಖ್ ಜಂಟಿ ಮಾಲೀಕತ್ವದ ಆಟೊ ಮಾರ್ಕ್ ಕಚೇರಿ ಹಾಗೂ ಅವರ ಮನೆಯ ಮೇಲೆ ದಾಳಿ ನಡೆಸಿ, ಮಹತ್ವದ ಕಾಗದಪತ್ರಗಳನ್ನು ಸಂಗ್ರಹಿಸಲಾಗಿದೆ. ಹುಬ್ಬಳ್ಳಿಯಿಂದ ಇನ್ನೋವಾ ಕಾರಿನಲ್ಲಿ ಬಂದಿದ್ದ ಐಟಿ ಇಲಾಖೆಯ ಐವರು ಅಧಿಕಾರಿಗಳು, ಸ್ಥಳೀಯ ಚುನಾವಣಾ ಪ್ಲೈಯಿಂಗ್ ಸ್ಕ್ವಾಡ್ನ ಅಧಿಕಾರಿ ಬಿ.ವಿ.ನಾಯ್ಕ ಸಹಕಾರದಲ್ಲಿ ದಾಳಿ ನಡೆಸಿದರು. ಹೆಚ್ಚಿನ ವಿಚಾರಣೆಗೆ ಅವರನ್ನು ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.