‘ನಾನು ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಅದು ಜನರ ಭಾವನೆಗಳನ್ನು ಘಾಸಿಗೊಳಿಸಿದೆ ಎಂಬುದು ನನಗೆ ತಿಳಿಯಿತು. ನಾನು ಅದನ್ನು ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲ. ಅಲ್ಲದೇ ನನ್ನ ಮಾತಿನ ಅರ್ಥವೂ ಅದಾಗಿರಲಿಲ್ಲ. ನಾನು ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ, ಅಲ್ಲದೇ ಎಲ್ಲರ ಬಳಿ ವಿನಮೃತೆಯಿಂದ ಕ್ಷಮೆ ಕೇಳುತ್ತಿದ್ದೇನೆ. ರಾಮ ನನ್ನ ಪಾಲಿಗೆ ಯಾವಾಗಲೂ ಸದಾಚಾರ ಹಾಗೂ ವೀರತ್ವದ ಸಂಕೇತವಾಗಿದ್ದಾರೆ. ಆದಿಪುರುಷ್ ಸಿನಿಮಾವೂ ದುಷ್ಟರ ವಿರುದ್ಧದ ಹೋರಾಟದಲ್ಲಿ ಒಳ್ಳೆಯತನಕ್ಕೆ ಸಿಗುವ ಗೆಲುವನ್ನು ತೋರಿಸುವ ಸಿನಿಮಾವಾಗಿದೆ. ಮೂಲ ಮಹಾಕಾವ್ಯಕ್ಕೆ ಯಾವುದೇ ಧಕ್ಕೆ ಬಾರದಂತೆ ಸಿನಿಮಾವನ್ನು ಪ್ರಸ್ತುತ ಪಡಿಸಲು ಇಡೀ ತಂಡ ಶ್ರಮಿಸುತ್ತಿದೆ’ ಎಂದು ಹೇಳಿದ್ದಾರೆ.