<p><strong>ಬೆಂಗಳೂರು: </strong>ಮಧುಮೇಹದಿಂದ ಬಳಲುತ್ತಿರುವ ಬಹುಭಾಷಾ ನಟ ಕೆ. ವಿಶ್ವನಾಥ್ ಇಲ್ಲಿನ ವಿಜಯನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.</p>.<p>ಈಗಾಗಲೇ ಅವರ ಕಾಲಿಗೆ ಶಸ್ತ್ರಚಿಕಿತ್ಸೆಯಾಗಿದೆ. ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ದಿನನಿತ್ಯದ ಆಸ್ಪತ್ರೆಯ ಖರ್ಚಿಗೂ ಪರದಾಡುವಂತಹ ಪರಿಸ್ಥಿತಿ ಎದುರಿಸುತ್ತಿದ್ದು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ.</p>.<p>ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ಪಡುವಾರಹಳ್ಳಿ ಪಾಂಡವರು’ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುವ ಮೂಲಕ ಅವರು ಬೆಳ್ಳಿತೆರೆ ಪ್ರವೇಶಿಸಿದರು. ‘ಚಲಿಸುವ ಮೋಡಗಳು’ ಸಿನಿಮಾವೂ ಸೇರಿದಂತೆ ವರನಟ ರಾಜ್ಕುಮಾರ್ ಜೊತೆಗೆ ಐದು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.</p>.<p>ತೆಲುಗಿನಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ನಟ ನಾಗಾರ್ಜುನ ಕಾಂಬಿನೇಷನ್ನಡಿ ತೆರೆಕಂಡಿದ್ದ ‘ಶಿವ’ ಚಿತ್ರದಲ್ಲಿ ನಟಿಸಿದ್ದರು. ತಮಿಳಿನಲ್ಲೂ ಕೆ. ಬಾಲಚಂದರ್ ನಿರ್ದೇಶಿಸಿದ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.</p>.<p>ವಿಶ್ವನಾಥ್ ಅವರ ಚಿಕಿತ್ಸೆಗೆ ಹೆಚ್ಚಿನ ಹಣದ ಅಗತ್ಯವಿದೆ. ಕನ್ನಡ ಚಿತ್ರರಂಗದ ನಟ, ನಟಿಯರು, ಪ್ರೇಕ್ಷಕರು ಧನಸಹಾಯ ಮಾಡಲು ಕೋರಲಾಗಿದೆ.</p>.<p>ಅವರ ಬ್ಯಾಂಕ್ ಖಾತೆಯ ವಿವರ ಇಂತಿದೆ: –ಕೆ. ವಿಶ್ವನಾಥ್, ಸಿಂಡಿಕೇಟ್ ಬ್ಯಾಂಕ್, ವಿ.ವಿ.ಪುರಂ, ಉಳಿತಾಯ ಖಾತೆ ನಂಬರ್ -2010062749, ifsc code: SYNB0000440</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಮಧುಮೇಹದಿಂದ ಬಳಲುತ್ತಿರುವ ಬಹುಭಾಷಾ ನಟ ಕೆ. ವಿಶ್ವನಾಥ್ ಇಲ್ಲಿನ ವಿಜಯನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.</p>.<p>ಈಗಾಗಲೇ ಅವರ ಕಾಲಿಗೆ ಶಸ್ತ್ರಚಿಕಿತ್ಸೆಯಾಗಿದೆ. ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ದಿನನಿತ್ಯದ ಆಸ್ಪತ್ರೆಯ ಖರ್ಚಿಗೂ ಪರದಾಡುವಂತಹ ಪರಿಸ್ಥಿತಿ ಎದುರಿಸುತ್ತಿದ್ದು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದೆ.</p>.<p>ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ಪಡುವಾರಹಳ್ಳಿ ಪಾಂಡವರು’ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುವ ಮೂಲಕ ಅವರು ಬೆಳ್ಳಿತೆರೆ ಪ್ರವೇಶಿಸಿದರು. ‘ಚಲಿಸುವ ಮೋಡಗಳು’ ಸಿನಿಮಾವೂ ಸೇರಿದಂತೆ ವರನಟ ರಾಜ್ಕುಮಾರ್ ಜೊತೆಗೆ ಐದು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.</p>.<p>ತೆಲುಗಿನಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ನಟ ನಾಗಾರ್ಜುನ ಕಾಂಬಿನೇಷನ್ನಡಿ ತೆರೆಕಂಡಿದ್ದ ‘ಶಿವ’ ಚಿತ್ರದಲ್ಲಿ ನಟಿಸಿದ್ದರು. ತಮಿಳಿನಲ್ಲೂ ಕೆ. ಬಾಲಚಂದರ್ ನಿರ್ದೇಶಿಸಿದ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.</p>.<p>ವಿಶ್ವನಾಥ್ ಅವರ ಚಿಕಿತ್ಸೆಗೆ ಹೆಚ್ಚಿನ ಹಣದ ಅಗತ್ಯವಿದೆ. ಕನ್ನಡ ಚಿತ್ರರಂಗದ ನಟ, ನಟಿಯರು, ಪ್ರೇಕ್ಷಕರು ಧನಸಹಾಯ ಮಾಡಲು ಕೋರಲಾಗಿದೆ.</p>.<p>ಅವರ ಬ್ಯಾಂಕ್ ಖಾತೆಯ ವಿವರ ಇಂತಿದೆ: –ಕೆ. ವಿಶ್ವನಾಥ್, ಸಿಂಡಿಕೇಟ್ ಬ್ಯಾಂಕ್, ವಿ.ವಿ.ಪುರಂ, ಉಳಿತಾಯ ಖಾತೆ ನಂಬರ್ -2010062749, ifsc code: SYNB0000440</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>