<p>ಹೌದು. ನಾನು ಅಮಿತಾಭ್ ಬಚ್ಚನ್ ಆಗಬೇಕು. ಎಷ್ಟೋ ಲಕ್ಷ ಕಲಾವಿದರು ಹಂಬಲಿಸುವಂತೆ ನಾನೂ ಒಂದು ದಿನ ಬಚ್ಚನ್ ಆಗಬೇಕು.<br />ಅವರು ನಿಜಕ್ಕೂ ನಟರಿಗೆಲ್ಲಾ ‘ಷಹನ್ಶಾ’. ಭಾವಪೂರ್ಣ ದೃಶ್ಯವೇ ಇರಲಿ, ಹಾಸ್ಯ ಮತ್ತು ಸಾಹಸ ದೃಶ್ಯಗಳೇ ಆಗಲಿ, ಸಂಪೂರ್ಣ ಪಾರಮ್ಯ ಸಾಧಿಸಿರುವಾತ. ಅವರ 'ಆಂಗ್ರಿ ಯಂಗ್ ಮ್ಯಾನ್' ಪಾತ್ರ ಪೋಷಣೆಯನ್ನು ಯಾರೂ ಸರಿಗಟ್ಟಲಾರರು.</p>.<p>ಅವರ ಚಿತ್ರಗಳನ್ನು ನೋಡಿದವರೆಲ್ಲರೂ ಅವರಂತೆ ನಡೆಯುವುದು, ಮಾತಾಡುವುದು ಮತ್ತು ಆ ನಟನ ಹಾಗೆ ವರ್ತಿಸುವವರೇ. ಅಂದ ಮೇಲೆ ಬಚ್ಚನ್ ಅವರನ್ನೇ ನಾನೂ ಅನುಸರಿಸುವುದು ಎಂದರೆ ಅದು ಸಹಜ ನಡೆ ತಾನೇ?</p>.<p>ಹಾಗಿದ್ದಲ್ಲಿ, ಆ ಭಗವಂತನು ನಮ್ಮ-ನಮ್ಮ ಪಾತ್ರಗಳನ್ನು ಅದಲು-ಬದಲು ಮಾಡಿಕೊಳ್ಳುವ ಅವಕಾಶ ಕೊಟ್ಟರೆ, ಅದನ್ನು ಉಪಯೋಗಿಸುವೆನೇನು? ಬಹುಶಃ ಇಲ್ಲ !!</p>.<p>ಏಕೆಂದರೆ, ನನಗೂ ಬಿಗ್ ಬಿಯಷ್ಟು ಯಶಸ್ವಿಯಾಗಬೇಕೆಂಬ ಆಸೆಯಿದ್ದರೂ ನನ್ನ ಪ್ರಕಾರ, ಯಶಸ್ಸು ಎಂದರೆ ದಿನನಿತ್ಯದ ಹೋರಾಟ ಅಥವಾ ಜಂಜಡಗಳಿಲ್ಲದೆಯೇ ಬದುಕುವುದು. ಆದರೆ ವಾಸ್ತವದಲ್ಲಿ ಬಿಗ್ ಬಿ ತಮ್ಮ ಜೀವನದಲ್ಲಿ ಹಲವಾರು ಅಡಚಣೆಗಳನ್ನೆದುರಿಸಿ, ಹೋರಾಡಿ ಈ ಹಂತ ತಲುಪಿದ್ದಾರೆ. ಅವರು ಜೀವನದುದ್ದಕ್ಕೂ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತು. ಅಂತಹ ಗೆಲುವುಗಳೆಲ್ಲಾ ನನ್ನ ಬದುಕಲ್ಲಿರಬೇಕೆಂಬುದು ನನ್ನಾಸೆ. ಆದರೆ ಆ ಸವಾಲುಗಳನ್ನು, ಸೋಲನ್ನು ಎದುರಿಸಲು ನಾನು ಸಿದ್ಧವೇ? ಖಚಿತವಾಗಿ ಹೇಳಲಾರೆ.</p>.<p>ಮೇರು ನಟನ ತಂದೆ ಪ್ರಸಿದ್ಧ ಕವಿ ಹರಿವಂಶರಾಯ್ ಅವರು ಹೇಳುವ ಹಾಗೆ ‘ಎಲ್ಲಿಯವರೆಗೂ ಬದುಕಿರುತ್ತೇವೋ, ಅಲ್ಲಿಯವರೆಗೂ ಹೋರಾಟ ಇದ್ದೇ ಇರುತ್ತದೆ’ (ಜಬ್ ತಕ್ ಜೀವನ್ ಹೈ, ತಬ್ ತಕ್ ಸಂಘರ್ಷ ಹೈ). ಇದು ನಿಜ. ಏಕೆಂದರೆ, ‘ಎಲ್ಲಿಯವರೆಗೂ ಹೋರಾಟ - ಸವಾಲು ಇರುತ್ತದೆಯೋ ಅಲ್ಲಿಯವರೆಗೂ ಜೀವನ ಜೀವನವಾಗಿ ಉಳಿದಿರುತ್ತದೆ’.</p>.<p>1975ರಲ್ಲಿ ಬಿಡುಗಡೆ ಆದ ತಮ್ಮ ‘ದೀವಾರ್’ ಚಿತ್ರದಲ್ಲಿ ಅಮಿತಾಭ್ ಹೇಳುವ ಡೈಲಾಗ್ ‘ಮೈ ಲಡ್ತೇ, ಲಡ್ತೇ ಥಕ್ ಗಯಾ ಹ್ಞೂಂ ಮಾ’ (ಹೋರಾಡಿ, ಹೋರಾಡಿ ನನಗೆ ಸುಸ್ತಾಗಿದೆ ಅಮ್ಮ). ಈ ಮಾತು, ನಿಜ ಜೀವನದಲ್ಲಿ ಯಾವುದನ್ನೂ ಬಿಟ್ಟುಕೊಡಲು ಒಪ್ಪದ ಬಚ್ಚನ್ ವ್ಯಕ್ತಿತ್ವದ ತದ್ವಿರುದ್ಧ. ಈ ನಿಜವಾದ ಬಚ್ಚನ್ರನ್ನೇ ನಾನು ಯಾವಾಗಲೂ ಅನುಕರಿಸಲು ನೋಡುವುದು.</p>.<p>ಪರಿಪೂರ್ಣವಲ್ಲದ, ನೀರಸವಲ್ಲದ ಮತ್ತು ಸವಾಲುಗಳನ್ನು ಹೊಂದಿರುವ ಜೀವನವನ್ನು ಬದುಕಬೇಕೆಂಬುದು ನನ್ನ ಆಕಾಂಕ್ಷೆಗಳಲ್ಲೊಂದು. ಈ ಪರಿಕಲ್ಪನೆಯನ್ನು ಅಮೆರಿಕದ ಟೆಲಿವಿಷನ್ ಧಾರಾವಾಹಿಯೊಂದರಲ್ಲಿ ಸಮರ್ಪಕವಾಗಿ ವಿವರಿಸಿದ್ದಾರೆ.</p>.<p>ಸ್ವರ್ಗವೆಂದರೇನು? 'ಒಮ್ಮೆ ಹೋಗಿ ಭೇಟಿ ಕೊಡಬಹುದಾದ ಒಂದು ಸೊಗಸಾದ ಜಾಗ’. ಇದು, ಏಪ್ರಿಲ್ 15, 1960ರಲ್ಲಿ ಪ್ರಸಾರವಾದ ‘ಟ್ವೈಲೈಟ್ ಝೋನ್’ ಧಾರಾವಾಹಿಯ ಕಥೆಯೊಂದರ ಶೀರ್ಷಿಕೆ.</p>.<p>ಈ ಶೀರ್ಷಿಕೆಗೆ ಜನಪ್ರಿಯ ಆಡುಮಾತು ‘ಒಮ್ಮೆ ಭೇಟಿ ಕೊಡಬಹುದಾದ ಸೊಗಸಾದ ಜಾಗ, ಆದರೆ ಅಲ್ಲೇ ಜೀವನ ಸಾಗಿಸಲು ನಾನೊಲ್ಲೆ’ ಎಂಬುದು ಪ್ರೇರಣೆ. ಏಕೆ? ಅದೊಂದು ಸೊಗಸಾದ ಜಾಗವಾಗಿದ್ದರೆ ಅಲ್ಲೇಕೆ ಜೀವನ ನಡೆಸಲು ಒಲ್ಲೆ? ತೀರಾ ಚೆನ್ನಾಗಿರುವುದು ನೀರಸವೂ ಹೌದು ಎಂಬುದಕ್ಕೇನೋ.</p>.<p>ಬದುಕಿನ ಕುರಿತು ನನಗೂ ಇದೇ ರೀತಿಯ ಅಭಿಪ್ರಾಯವಿದೆ. ತಪ್ಪುಗಳನ್ನು ಮಾಡುವೆನೇನೋ, ಅಭದ್ರತೆ ಕಾಡಿ, ತಾಳ್ಮೆ ಕಳೆದುಕೊಂಡು ಕೊನೆಗೆ ಸುಸ್ತಾಗುವೆನೋ ಏನೋ. ಆದರೆ ನಾನು ಹೋರಾಡುವುದನ್ನು ನಿಲ್ಲಿಸದೆ ಮುಂದಕ್ಕೆ ಹೆಜ್ಜೆಯಿಡುತ್ತೇನೆ. ನಿಜ ಜೀವನದಲ್ಲಿ ಅಮಿತಾಭ್ ಬಚ್ಚನ್ ಇರುವಂತೆ ಇರುತ್ತೇನೆ.</p>.<p><strong>ಎ ನೈಸ್ ಪ್ಲೇಸ್ ಟು ವಿಸಿಟ್'...<br /></strong><br />ಟ್ವೈಲೈಟ್ ಝೋನ್ ಧಾರಾವಾಹಿಯ ಈ ಕಂತಿನ ಕಥೆ ಹೀಗಿದೆ– ನಾಯಕ ಹೆನ್ರಿ ವ್ಯಾಲಂಟೈನ್ಗೆ ತನ್ನ ಬದುಕು ಬರೀ ಸವಾಲುಗಳಿಂದ ತುಂಬಿದೆಯೆಂದು ಆಗಾಗ ಅನಿಸುವುದುಂಟು. ಒಮ್ಮೆ ಕಳ್ಳತನ ಮಾಡುವಾಗ ಪೋಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಗುಂಡೇಟು ತಿಂದು ಸಾಯುತ್ತಾನೆ.</p>.<p>ಪರಲೋಕದಲ್ಲಿ ಇವನು ತನ್ನನ್ನು ಕಾಯುವ ದೇವತೆಯೆಂದೇ ನಂಬಿರುವ ಪಿಪ್ ಎಂಬ ವೃದ್ಧನು ವ್ಯಾಲಂಟೈನ್ನನ್ನು ಒಂದು ಸೊಗಸಾದ ಜಾಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಇವನು ಬಯಸಿದುದೆಲ್ಲವನ್ನೂ ಒದಗಿಸಿ ಕೊಡುತ್ತಾನೆ. ವ್ಯಾಲಂಟೈನ್ನಾದರೋ ಎಲ್ಲ ರೀತಿಯಿಂದಲೂ ಪಾಪಿಷ್ಟ. ಆದರೂ, ಆ ದೇವರೇ ತನಗೆ ಸ್ವರ್ಗವನ್ನು ದಯಪಾಲಿಸಿರುವಾಗ ತಾನಾದರೂ ಅದರ ಬಗ್ಗೆ ಏಕೆ ಚರ್ಚೆ, ವಾದ ಮಾಡಬೇಕೆಂಬ ಧೋರಣೆಯುಳ್ಳವನು.</p>.<p>ಕೆಲ ಸಮಯದ ಬಳಿಕ ಆತನಿಗೆ, ತಾನು ಬಯಸಿದುದೆಲ್ಲವನ್ನೂ, ತನ್ನಿಂದ ಯಾವುದೇ ಪ್ರಯತ್ನವನ್ನೂ ಮಾಡಿಸದೆ ಈಡೇರಿಸುವ ತನ್ನ ಈ ‘ಸ್ವರ್ಗ’ ನೀರಸವೆನಿಸತೊಡಗುತ್ತದೆ. ವೃದ್ಧ ಪಿಪ್ ಬಳಿ ಬಂದು ತಾನು ‘ಆ ಇನ್ನೊಂದು ಜಾಗ’ಕ್ಕೆ ಹೋಗಬೇಕು ಎನ್ನುತ್ತಾನೆ. ಪ್ರತಿಯಾಗಿ ಪಿಪ್ ಉತ್ತರಿಸುತ್ತಾನೆ, ‘ಸ್ವರ್ಗ’? ಮಿಸ್ಟರ್ ವ್ಯಾಲಂಟೈನ್, ನಿನಗೆ ಯಾರು ಇದನ್ನು ಸ್ವರ್ಗವೆಂದು ಹೇಳಿದ್ದು? ಇದೇ ನಿನ್ನ 'ಆ ಇನ್ನೊಂದು ಜಾಗ’..!!</p>.<p>ಇದರಿಂದ ಆಘಾತಗೊಂಡ ವ್ಯಾಲಂಟೈನ್ ಅಲ್ಲಿಂದ ಓಡಿ ಹೋಗಲು ವಿಫಲ ಯತ್ನ ನಡೆಸುತ್ತಾನೆ. ಅವನ ಈ ಗೋಳಾಟವನ್ನು ನೋಡಿ ಪಿಪ್ ನಗಲಾರಂಭಿಸುತ್ತಾನೆ.</p>.<p>ಮುಕ್ತಾಯದ ನಿರೂಪಣೆ ಹೀಗಿದೆ: ‘ಹೆದರಿ, ಕ್ರುದ್ಧನಾಗಿರುವ ಈ ಚಿಕ್ಕ ಮನುಷ್ಯನಿಗೆ ಒಂದೂ ಉತ್ತಮ ಅವಕಾಶ ದೊರೆಯಲಿಲ್ಲ. ಈಗ ಅವನ ಬಳಿ ಅವನು ಇಷ್ಟ ಪಟ್ಟಿದ್ದೆಲ್ಲವೂ ಉಂಟು. ಆದರೆ ಇವನು ಶಾಶ್ವತವಾಗಿ ಅವುಗಳ ಜೊತೆಯೇ ಈ ಸಂಧಿಕಾಲದ ಪರಿಮಿತಿಯಲ್ಲಿ ಬದುಕಬೇಕು’.</p>.<p><strong>(ಲೇಖಕರು ಕನ್ನಡ ಚಲನಚಿತ್ರ ನಟ, ನಿರ್ದೇಶಕ ಮತ್ತು ಗಾಯಕ) ಕನ್ನಡಕ್ಕೆ: ಜಯಶ್ರೀ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೌದು. ನಾನು ಅಮಿತಾಭ್ ಬಚ್ಚನ್ ಆಗಬೇಕು. ಎಷ್ಟೋ ಲಕ್ಷ ಕಲಾವಿದರು ಹಂಬಲಿಸುವಂತೆ ನಾನೂ ಒಂದು ದಿನ ಬಚ್ಚನ್ ಆಗಬೇಕು.<br />ಅವರು ನಿಜಕ್ಕೂ ನಟರಿಗೆಲ್ಲಾ ‘ಷಹನ್ಶಾ’. ಭಾವಪೂರ್ಣ ದೃಶ್ಯವೇ ಇರಲಿ, ಹಾಸ್ಯ ಮತ್ತು ಸಾಹಸ ದೃಶ್ಯಗಳೇ ಆಗಲಿ, ಸಂಪೂರ್ಣ ಪಾರಮ್ಯ ಸಾಧಿಸಿರುವಾತ. ಅವರ 'ಆಂಗ್ರಿ ಯಂಗ್ ಮ್ಯಾನ್' ಪಾತ್ರ ಪೋಷಣೆಯನ್ನು ಯಾರೂ ಸರಿಗಟ್ಟಲಾರರು.</p>.<p>ಅವರ ಚಿತ್ರಗಳನ್ನು ನೋಡಿದವರೆಲ್ಲರೂ ಅವರಂತೆ ನಡೆಯುವುದು, ಮಾತಾಡುವುದು ಮತ್ತು ಆ ನಟನ ಹಾಗೆ ವರ್ತಿಸುವವರೇ. ಅಂದ ಮೇಲೆ ಬಚ್ಚನ್ ಅವರನ್ನೇ ನಾನೂ ಅನುಸರಿಸುವುದು ಎಂದರೆ ಅದು ಸಹಜ ನಡೆ ತಾನೇ?</p>.<p>ಹಾಗಿದ್ದಲ್ಲಿ, ಆ ಭಗವಂತನು ನಮ್ಮ-ನಮ್ಮ ಪಾತ್ರಗಳನ್ನು ಅದಲು-ಬದಲು ಮಾಡಿಕೊಳ್ಳುವ ಅವಕಾಶ ಕೊಟ್ಟರೆ, ಅದನ್ನು ಉಪಯೋಗಿಸುವೆನೇನು? ಬಹುಶಃ ಇಲ್ಲ !!</p>.<p>ಏಕೆಂದರೆ, ನನಗೂ ಬಿಗ್ ಬಿಯಷ್ಟು ಯಶಸ್ವಿಯಾಗಬೇಕೆಂಬ ಆಸೆಯಿದ್ದರೂ ನನ್ನ ಪ್ರಕಾರ, ಯಶಸ್ಸು ಎಂದರೆ ದಿನನಿತ್ಯದ ಹೋರಾಟ ಅಥವಾ ಜಂಜಡಗಳಿಲ್ಲದೆಯೇ ಬದುಕುವುದು. ಆದರೆ ವಾಸ್ತವದಲ್ಲಿ ಬಿಗ್ ಬಿ ತಮ್ಮ ಜೀವನದಲ್ಲಿ ಹಲವಾರು ಅಡಚಣೆಗಳನ್ನೆದುರಿಸಿ, ಹೋರಾಡಿ ಈ ಹಂತ ತಲುಪಿದ್ದಾರೆ. ಅವರು ಜೀವನದುದ್ದಕ್ಕೂ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತು. ಅಂತಹ ಗೆಲುವುಗಳೆಲ್ಲಾ ನನ್ನ ಬದುಕಲ್ಲಿರಬೇಕೆಂಬುದು ನನ್ನಾಸೆ. ಆದರೆ ಆ ಸವಾಲುಗಳನ್ನು, ಸೋಲನ್ನು ಎದುರಿಸಲು ನಾನು ಸಿದ್ಧವೇ? ಖಚಿತವಾಗಿ ಹೇಳಲಾರೆ.</p>.<p>ಮೇರು ನಟನ ತಂದೆ ಪ್ರಸಿದ್ಧ ಕವಿ ಹರಿವಂಶರಾಯ್ ಅವರು ಹೇಳುವ ಹಾಗೆ ‘ಎಲ್ಲಿಯವರೆಗೂ ಬದುಕಿರುತ್ತೇವೋ, ಅಲ್ಲಿಯವರೆಗೂ ಹೋರಾಟ ಇದ್ದೇ ಇರುತ್ತದೆ’ (ಜಬ್ ತಕ್ ಜೀವನ್ ಹೈ, ತಬ್ ತಕ್ ಸಂಘರ್ಷ ಹೈ). ಇದು ನಿಜ. ಏಕೆಂದರೆ, ‘ಎಲ್ಲಿಯವರೆಗೂ ಹೋರಾಟ - ಸವಾಲು ಇರುತ್ತದೆಯೋ ಅಲ್ಲಿಯವರೆಗೂ ಜೀವನ ಜೀವನವಾಗಿ ಉಳಿದಿರುತ್ತದೆ’.</p>.<p>1975ರಲ್ಲಿ ಬಿಡುಗಡೆ ಆದ ತಮ್ಮ ‘ದೀವಾರ್’ ಚಿತ್ರದಲ್ಲಿ ಅಮಿತಾಭ್ ಹೇಳುವ ಡೈಲಾಗ್ ‘ಮೈ ಲಡ್ತೇ, ಲಡ್ತೇ ಥಕ್ ಗಯಾ ಹ್ಞೂಂ ಮಾ’ (ಹೋರಾಡಿ, ಹೋರಾಡಿ ನನಗೆ ಸುಸ್ತಾಗಿದೆ ಅಮ್ಮ). ಈ ಮಾತು, ನಿಜ ಜೀವನದಲ್ಲಿ ಯಾವುದನ್ನೂ ಬಿಟ್ಟುಕೊಡಲು ಒಪ್ಪದ ಬಚ್ಚನ್ ವ್ಯಕ್ತಿತ್ವದ ತದ್ವಿರುದ್ಧ. ಈ ನಿಜವಾದ ಬಚ್ಚನ್ರನ್ನೇ ನಾನು ಯಾವಾಗಲೂ ಅನುಕರಿಸಲು ನೋಡುವುದು.</p>.<p>ಪರಿಪೂರ್ಣವಲ್ಲದ, ನೀರಸವಲ್ಲದ ಮತ್ತು ಸವಾಲುಗಳನ್ನು ಹೊಂದಿರುವ ಜೀವನವನ್ನು ಬದುಕಬೇಕೆಂಬುದು ನನ್ನ ಆಕಾಂಕ್ಷೆಗಳಲ್ಲೊಂದು. ಈ ಪರಿಕಲ್ಪನೆಯನ್ನು ಅಮೆರಿಕದ ಟೆಲಿವಿಷನ್ ಧಾರಾವಾಹಿಯೊಂದರಲ್ಲಿ ಸಮರ್ಪಕವಾಗಿ ವಿವರಿಸಿದ್ದಾರೆ.</p>.<p>ಸ್ವರ್ಗವೆಂದರೇನು? 'ಒಮ್ಮೆ ಹೋಗಿ ಭೇಟಿ ಕೊಡಬಹುದಾದ ಒಂದು ಸೊಗಸಾದ ಜಾಗ’. ಇದು, ಏಪ್ರಿಲ್ 15, 1960ರಲ್ಲಿ ಪ್ರಸಾರವಾದ ‘ಟ್ವೈಲೈಟ್ ಝೋನ್’ ಧಾರಾವಾಹಿಯ ಕಥೆಯೊಂದರ ಶೀರ್ಷಿಕೆ.</p>.<p>ಈ ಶೀರ್ಷಿಕೆಗೆ ಜನಪ್ರಿಯ ಆಡುಮಾತು ‘ಒಮ್ಮೆ ಭೇಟಿ ಕೊಡಬಹುದಾದ ಸೊಗಸಾದ ಜಾಗ, ಆದರೆ ಅಲ್ಲೇ ಜೀವನ ಸಾಗಿಸಲು ನಾನೊಲ್ಲೆ’ ಎಂಬುದು ಪ್ರೇರಣೆ. ಏಕೆ? ಅದೊಂದು ಸೊಗಸಾದ ಜಾಗವಾಗಿದ್ದರೆ ಅಲ್ಲೇಕೆ ಜೀವನ ನಡೆಸಲು ಒಲ್ಲೆ? ತೀರಾ ಚೆನ್ನಾಗಿರುವುದು ನೀರಸವೂ ಹೌದು ಎಂಬುದಕ್ಕೇನೋ.</p>.<p>ಬದುಕಿನ ಕುರಿತು ನನಗೂ ಇದೇ ರೀತಿಯ ಅಭಿಪ್ರಾಯವಿದೆ. ತಪ್ಪುಗಳನ್ನು ಮಾಡುವೆನೇನೋ, ಅಭದ್ರತೆ ಕಾಡಿ, ತಾಳ್ಮೆ ಕಳೆದುಕೊಂಡು ಕೊನೆಗೆ ಸುಸ್ತಾಗುವೆನೋ ಏನೋ. ಆದರೆ ನಾನು ಹೋರಾಡುವುದನ್ನು ನಿಲ್ಲಿಸದೆ ಮುಂದಕ್ಕೆ ಹೆಜ್ಜೆಯಿಡುತ್ತೇನೆ. ನಿಜ ಜೀವನದಲ್ಲಿ ಅಮಿತಾಭ್ ಬಚ್ಚನ್ ಇರುವಂತೆ ಇರುತ್ತೇನೆ.</p>.<p><strong>ಎ ನೈಸ್ ಪ್ಲೇಸ್ ಟು ವಿಸಿಟ್'...<br /></strong><br />ಟ್ವೈಲೈಟ್ ಝೋನ್ ಧಾರಾವಾಹಿಯ ಈ ಕಂತಿನ ಕಥೆ ಹೀಗಿದೆ– ನಾಯಕ ಹೆನ್ರಿ ವ್ಯಾಲಂಟೈನ್ಗೆ ತನ್ನ ಬದುಕು ಬರೀ ಸವಾಲುಗಳಿಂದ ತುಂಬಿದೆಯೆಂದು ಆಗಾಗ ಅನಿಸುವುದುಂಟು. ಒಮ್ಮೆ ಕಳ್ಳತನ ಮಾಡುವಾಗ ಪೋಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಗುಂಡೇಟು ತಿಂದು ಸಾಯುತ್ತಾನೆ.</p>.<p>ಪರಲೋಕದಲ್ಲಿ ಇವನು ತನ್ನನ್ನು ಕಾಯುವ ದೇವತೆಯೆಂದೇ ನಂಬಿರುವ ಪಿಪ್ ಎಂಬ ವೃದ್ಧನು ವ್ಯಾಲಂಟೈನ್ನನ್ನು ಒಂದು ಸೊಗಸಾದ ಜಾಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಇವನು ಬಯಸಿದುದೆಲ್ಲವನ್ನೂ ಒದಗಿಸಿ ಕೊಡುತ್ತಾನೆ. ವ್ಯಾಲಂಟೈನ್ನಾದರೋ ಎಲ್ಲ ರೀತಿಯಿಂದಲೂ ಪಾಪಿಷ್ಟ. ಆದರೂ, ಆ ದೇವರೇ ತನಗೆ ಸ್ವರ್ಗವನ್ನು ದಯಪಾಲಿಸಿರುವಾಗ ತಾನಾದರೂ ಅದರ ಬಗ್ಗೆ ಏಕೆ ಚರ್ಚೆ, ವಾದ ಮಾಡಬೇಕೆಂಬ ಧೋರಣೆಯುಳ್ಳವನು.</p>.<p>ಕೆಲ ಸಮಯದ ಬಳಿಕ ಆತನಿಗೆ, ತಾನು ಬಯಸಿದುದೆಲ್ಲವನ್ನೂ, ತನ್ನಿಂದ ಯಾವುದೇ ಪ್ರಯತ್ನವನ್ನೂ ಮಾಡಿಸದೆ ಈಡೇರಿಸುವ ತನ್ನ ಈ ‘ಸ್ವರ್ಗ’ ನೀರಸವೆನಿಸತೊಡಗುತ್ತದೆ. ವೃದ್ಧ ಪಿಪ್ ಬಳಿ ಬಂದು ತಾನು ‘ಆ ಇನ್ನೊಂದು ಜಾಗ’ಕ್ಕೆ ಹೋಗಬೇಕು ಎನ್ನುತ್ತಾನೆ. ಪ್ರತಿಯಾಗಿ ಪಿಪ್ ಉತ್ತರಿಸುತ್ತಾನೆ, ‘ಸ್ವರ್ಗ’? ಮಿಸ್ಟರ್ ವ್ಯಾಲಂಟೈನ್, ನಿನಗೆ ಯಾರು ಇದನ್ನು ಸ್ವರ್ಗವೆಂದು ಹೇಳಿದ್ದು? ಇದೇ ನಿನ್ನ 'ಆ ಇನ್ನೊಂದು ಜಾಗ’..!!</p>.<p>ಇದರಿಂದ ಆಘಾತಗೊಂಡ ವ್ಯಾಲಂಟೈನ್ ಅಲ್ಲಿಂದ ಓಡಿ ಹೋಗಲು ವಿಫಲ ಯತ್ನ ನಡೆಸುತ್ತಾನೆ. ಅವನ ಈ ಗೋಳಾಟವನ್ನು ನೋಡಿ ಪಿಪ್ ನಗಲಾರಂಭಿಸುತ್ತಾನೆ.</p>.<p>ಮುಕ್ತಾಯದ ನಿರೂಪಣೆ ಹೀಗಿದೆ: ‘ಹೆದರಿ, ಕ್ರುದ್ಧನಾಗಿರುವ ಈ ಚಿಕ್ಕ ಮನುಷ್ಯನಿಗೆ ಒಂದೂ ಉತ್ತಮ ಅವಕಾಶ ದೊರೆಯಲಿಲ್ಲ. ಈಗ ಅವನ ಬಳಿ ಅವನು ಇಷ್ಟ ಪಟ್ಟಿದ್ದೆಲ್ಲವೂ ಉಂಟು. ಆದರೆ ಇವನು ಶಾಶ್ವತವಾಗಿ ಅವುಗಳ ಜೊತೆಯೇ ಈ ಸಂಧಿಕಾಲದ ಪರಿಮಿತಿಯಲ್ಲಿ ಬದುಕಬೇಕು’.</p>.<p><strong>(ಲೇಖಕರು ಕನ್ನಡ ಚಲನಚಿತ್ರ ನಟ, ನಿರ್ದೇಶಕ ಮತ್ತು ಗಾಯಕ) ಕನ್ನಡಕ್ಕೆ: ಜಯಶ್ರೀ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>