‘ಬಂಗಾರಾಜು’ವಿಗಾಗಿ ನಾಗಲಕ್ಷ್ಮೀಯಾಗಿ ಬಂದ ನಟಿ ಕೃತಿ ಶೆಟ್ಟಿ: ಪೋಸ್ಟರ್ ಅನಾವರಣ

ಬೆಂಗಳೂರು: 'ಉಪ್ಪೆನಾ' ತೆಲುಗು ಸಿನಿಮಾ ಮೂಲಕ ಟಾಲಿವುಡ್ನಲ್ಲಿ ಗಮನ ಸೆಳೆದ ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿಗೆ ಇದೀಗ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ.
ನಾಗ ಚೈತನ್ಯ ಹಾಗೂ ನಾಗಾರ್ಜುನ್ ಅವರ ಕಾಂಭಿನೇಷನ್ನಲ್ಲಿ ತಯಾರಾಗುತ್ತಿರುವ ‘ಬಂಗಾರಾಜು’ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾದ ಮೊದಲ ಪೋಸ್ಟರ್ ಅನಾವರಣಗೊಂಡಿದ್ದು ಅದರಲ್ಲಿ ಕೃತಿ ಶೆಟ್ಟಿ ಪಾತ್ರವನ್ನು ರಿವೀಲ್ ಮಾಡಲಾಗಿದೆ.
ನಾಗಾರ್ಜುನ್, ನಾಗಚೈತನ್ಯ ಪೋಸ್ಟರ್ನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಬಂಗಾರಾಜು ಸಿನಿಮಾಕ್ಕಾಗಿ ನಾಗಲಕ್ಷ್ಮೀಯಾಗಿ ಕೃತಿ ಶೆಟ್ಟಿ ಕಾಣಿಸಿಕೊಂಡಿದ್ದು, ಸಾಕಷ್ಟು ಗಮನ ಸೆಳೆದಿದ್ದಾರೆ. ಕೃತಿಗೆ ಈ ಸಿನಿಮಾ ಟಾಲಿವುಡ್ನಲ್ಲಿ ದೊಡ್ಡ ಬ್ರೇಕ್ ನೀಡಲಿದೆ ಎನ್ನಲಾಗುತ್ತಿದೆ.
Thank you for the introduction @chay_akkineni 😎 being Naga Lakshmi has given me so much joy!!! 💓 can’t wait to see #Bangarraju‘s look 🤩 https://t.co/lUmHIgEzUp
— KrithiShetty (@IamKrithiShetty) November 18, 2021
ಬಂಗಾರಾಜು ಸಿನಿಮಾ ನಾಗಾರ್ಜುನ್ ಹಾಗೂ ರಮ್ಯ ಕೃಷ್ಣ ಅವರ ‘ಸೊಗ್ಗಡೆ ಚಿನ್ನಿ ನಯನಾ’ ಸಿನಿಮಾದ ಸಿಕ್ವೇಲ್ ಆಗಿದ್ದು, ‘ಮನಂ’, ‘ಪ್ರೇಮಂ’ ನಂತರ ಅಪ್ಪ ಮಗ (ನಾಗ ಚೈತನ್ಯ) ಈ ಚಿತ್ರದಲ್ಲಿ ಒಟ್ಟಾಗುತ್ತಿದ್ದಾರೆ. ‘ಸೊಗ್ಗಡೆ ಚಿನ್ನಿ ನಯನಾ’ ನಿರ್ದೇಶಿಸಿದ್ದ ಕಲ್ಯಾಣ್ ಕೃಷ್ಣ ಕುರಸಾಲಾ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜೀ ಸ್ಟುಡಿಯೊ ಹಾಗೂ ನಾಗಾರ್ಜುನ್ ಅವರ ಅನ್ನಪೂರ್ಣ ಸ್ಟುಡಿಯೊ ಒಟ್ಟಾಗಿ ನಿರ್ಮಿಸುತ್ತಿವೆ.
ಸೊಗ್ಗಡೆ ಚಿನ್ನಿ ನಯನಾ ಕನ್ನಡಲ್ಲಿ ‘ಮತ್ತೆ ಹುಟ್ಟಿ ಬಾ ಉಪೇಂದ್ರ‘ ಎಂದು ರಿಮೇಕ್ ಆಗಿತ್ತು. ಅದರಲ್ಲಿ ಉಪೇಂದ್ರ ಹಾಗೂ ಪ್ರೇಮಾ ನಟನೆ ಗಮನ ಸೆಳೆದಿತ್ತು.
ಇದನ್ನೂ ಓದಿ: ಜೈ ಭೀಮ್: ನಟ ಸೂರ್ಯನಿಗೆ ಒದೆಯಿರಿ ಎಂದಿದ್ದ ರಾಜಕೀಯ ಮುಖಂಡನ ಮೇಲೆ ಬಿತ್ತು ಕೇಸ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.