ಬಂಗಾರಾಜು ಸಿನಿಮಾ ನಾಗಾರ್ಜುನ್ ಹಾಗೂ ರಮ್ಯ ಕೃಷ್ಣ ಅವರ ‘ಸೊಗ್ಗಡೆ ಚಿನ್ನಿ ನಯನಾ’ ಸಿನಿಮಾದ ಸಿಕ್ವೇಲ್ ಆಗಿದ್ದು, ‘ಮನಂ’, ‘ಪ್ರೇಮಂ’ ನಂತರ ಅಪ್ಪ ಮಗ (ನಾಗ ಚೈತನ್ಯ) ಈ ಚಿತ್ರದಲ್ಲಿ ಒಟ್ಟಾಗುತ್ತಿದ್ದಾರೆ. ‘ಸೊಗ್ಗಡೆ ಚಿನ್ನಿ ನಯನಾ’ ನಿರ್ದೇಶಿಸಿದ್ದ ಕಲ್ಯಾಣ್ ಕೃಷ್ಣ ಕುರಸಾಲಾ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜೀ ಸ್ಟುಡಿಯೊ ಹಾಗೂ ನಾಗಾರ್ಜುನ್ ಅವರ ಅನ್ನಪೂರ್ಣ ಸ್ಟುಡಿಯೊ ಒಟ್ಟಾಗಿ ನಿರ್ಮಿಸುತ್ತಿವೆ.