ಚಿತ್ರದ ನಿರ್ಮಾಪಕ ಶ್ರೀಕಾಂತ್ ಮಾತನಾಡಿ, ಈ ಚಿತ್ರ ಯುವಕರ ತಂಡದ ಪ್ರಯತ್ನ. ನಾಯಕ ನಟನಾಗಿ ಆನಂದ್ ಗಣೇಶ್, ನಾಯಕಿಯಾಗಿ ರಕ್ಷಿತಾ ಬಂಗೇರಾ ನಟಿಸಿದ್ದಾರೆ. ಹರೀಶ್ ರಾವ್, ರಮೇಶ್ ನಾಯಕ್, ಟೆನಿಸ್ ಕೃಷ್ಣ, ವಿಶ್ವ, ಶ್ರೀನಿವಾಸ್ ಪ್ರಭು, ಅರುಣ್ ಹೀಗೆ ಖ್ಯಾತ ನಟ-ನಟಿಯರು ಈ ಚಿತ್ರದಲ್ಲಿದ್ದಾರೆ. ಸೆನ್ಸಾರ್ ಮಂಡಳಿ ಯುಎ ಸರ್ಟಿಫಿಕೆಟ್ ನೀಡಿದೆ ಎಂದರು.