ಪರಿಸರ ಉಳಿವಿಗಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಆಕೆ, ‘ಭಾರತ ಸೇರಿದಂತೆ ಇಡೀ ವಿಶ್ವವೇ ಪರಿಸರ ಮಾಲಿನ್ಯದಿಂದ ಆಪತ್ತಿಗೆ ಸಿಲುಕಿದೆ. ವಿಶ್ವದಾದ್ಯಂತ ಕಾಳ್ಗಿಚ್ಚು, ಬರ, ಪ್ರವಾಹ, ಹಿಮ ಕರಗುವಿಕೆ, ಸಮುದ್ರದಲ್ಲಿ ನೀರಿನ ಮಟ್ಟ ಏರುವಿಕೆ, ಆಹಾರ ಧಾನ್ಯಗಳ ನಾಶ, ಬಿಸಿಗಾಳಿಯ ಪ್ರಮಾಣ ಹೆಚ್ಚುತ್ತಿದೆ. ಇದು ಭವಿಷ್ಯದಲ್ಲಿ ಮನುಕುಲದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಾಗಾಗಿ, ಎಲ್ಲರೂ ಎಚ್ಚೆತ್ತುಕೊಳ್ಳಲು ಇದು ಸಕಾಲ’ ಎಂದಿದ್ದಾರೆ.