ಈ ಚಿತ್ರದಲ್ಲಿ ನವರಸಗಳು ಇರಲಿವೆ. ಭರಮಣ್ಣ ಹಾಗೂ ಮುದ್ದಣ್ಣನ ಮುಖಾಮುಖಿ ಕೂಡ ಇದರಲ್ಲಿ ಇರಲಿದೆ ಎಂದು ತಿಳಿಸಿದರು. ಮುದ್ದಣ್ಣನ ಪಾತ್ರವನ್ನು ಪ್ರಭಾಕರ್ ನಿಭಾಯಿಸಲಿದ್ದಾರೆ. ‘ಇತಿಹಾಸ, ಸಾಹಿತ್ಯ ಹಾಗೂ ಸಿನಿಮಾ ಒಂದೇ ಅಲ್ಲ. ಹಾಗಾಗಿ, ಭರಮಣ್ಣನ ಕಥೆಯನ್ನು ಸಿನಿಮಾ ರೂಪದಲ್ಲಿ ಹೇಳುವಾಗ ಸಿನಿಮ್ಯಾಟಿಕ್ ಅಂಶಗಳನ್ನು ಸೇರಿಸಿಕೊಳ್ಳಲಾಗುತ್ತದೆ’ ಎಂಬುದನ್ನು ಸ್ಪಷ್ಟಪಡಿಸಿದರು ವೇಣು.