‘ಶ್ರೀದೇವಿ ಸಾವಾದ ನಂತರ ನಾನು ದುಬೈ ಪೊಲೀಸರ ವಿಚಾರಣೆಯನ್ನು ಹೊರತುಪಡಿಸಿ ಏನನ್ನೂ ಮಾತನಾಡಿರಲಿಲ್ಲ. ಆದರೂ, ಸರ್ವಾಧಿಕಾರಿ ಮನೋಭಾವದ ಕೆಲ ಭಾರತೀಯ ಮಾಧ್ಯಮಗಳು ಅವಳ ಸಾವಿಗೆ ಊಹಾಪೋಹಗಳನ್ನು ಸೇರಿಸಿ ವರದಿ ಮಾಡಿದ್ದವು. ಆದರೆ, ನಾನು ಏನನ್ನೂ ಮಾತನಾಡಿರಲಿಲ್ಲ‘ ಎಂದಿದ್ದಾರೆ.
‘ಶ್ರೀದೇವಿ ವಿಪರೀತ ಡಯಟ್ ಮಾಡುತ್ತಿದ್ದಳು. ಅದರಲ್ಲೂ ಇಂಗ್ಲಿಷ್–ವಿಂಗ್ಲಿಷ್ ಸಿನಿಮಾ ಸಂದರ್ಭದಲ್ಲಿ 45 ಕೆ.ಜಿಗೆ ತೂಕ ಇಳಿಸಿಕೊಂಡಿದ್ದಳು. ಕಡೆಗೆ ಆಹಾರದಲ್ಲಿ ಉಪ್ಪು ಬಳಸುವುದನ್ನೂ ನಿಲ್ಲಿಸಿದ್ದಳು. ಇದರಿಂದ ಅವಳ ಬಿಪಿ ತುಂಬಾ ಕಡಿಮೆ ಆಗಿತ್ತು’ ಎಂದು ಹೇಳಿದ್ದಾರೆ.
‘ನಟ ನಾಗಾರ್ಜುನ್ ನನ್ನ ಬಳಿ ಒಮ್ಮೆ ಹೇಳಿದ್ದರು. ಶೂಟಿಂಗ್ ಸಂದರ್ಭದಲ್ಲಿ ವಿಪರೀತ ಡಯಟ್ನಿಂದ ಶ್ರೀದೇವಿ ಬಾತ್ರೂಮಿನಲ್ಲಿ ಬಿದ್ದು ಹಲ್ಲು ಮುರಿದುಕೊಂಡಿದ್ದಳು. ಆ ವಿಷಯ ನನಗೆ ಶ್ರೀದೇವಿಯನ್ನು ಮದುವೆಯಾದ ಮೇಲೆ ಗೊತ್ತಾಗಿತ್ತು. ಆ ನಂತರವೂ ಕೂಡ ಅವಳು ವಿಪರೀತ ಡಯಟ್ ಮಾಡುತ್ತಿದ್ದಳು’ ಎಂದು ಹೇಳಿದ್ದಾರೆ.
‘ಶ್ರೀದೇವಿ ಸಾವನ್ನು ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವಳ ಸಾವು ಸಹಜ ಸಾವಲ್ಲ, ಅದೊಂದು ಆಕಸ್ಮಿಕ’ ಸಾವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಈ ವಿಚಾರದಲ್ಲಿ ದುಬೈ ಪೊಲೀಸರು ನನಗೆ ಕ್ಲೀನ್ ಚೀಟ್ ಕೊಟ್ಟರೂ ಭಾರತೀಯ ಮಾಧ್ಯಮಗಳಿಂದ ಸಿಕ್ಕಿಲ್ಲ’ ಎಂದು ಹೇಳಿಕೊಂಡಿದ್ದಾರೆ.