‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ 2ನೇ ಆವೃತ್ತಿಗೆ ಕ್ಲ್ಯಾಪ್ ಮಾಡುವ ಮುಖಾಂತರ ಚಾಲನೆ ನೀಡಿದ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಪಾರುಲ್ ಶಾ ಹಾಗೂ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ –
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್
ಆನ್ಲೈನ್ನಲ್ಲಿ ಸಿನಿಮಾ ನೋಡಿದರೆ ಮೆಷಿನ್ ಜೊತೆ ಸಿನಿಮಾ ನೋಡಿದ ಅನುಭವವಾಗುತ್ತದೆ. ನಾವೆಲ್ಲ ಒಟ್ಟಿಗೆ ಕುಳಿತು ಸಿನಿಮಾ ನೋಡುವಂತೆ ಆಗಬೇಕು. ಗುಂಪಾಗಿ ನೋಡಿದಾಗ ಮಾತ್ರ ಭಾವನೆಗಳು ಹೊರಬರಲು ಸಾಧ್ಯ. ಒಬ್ಬರೇ ಕುಳಿತು ಸಿನಿಮಾ ನೋಡಿದಾಗ ಎಷ್ಟೋ ಭಾವನೆಗಳು ಅಭಿವ್ಯಕ್ತಗೊಳ್ಳದೇ ಹೋಗಬಹುದು. ಸಿನಿಮಾ ಯಾವತ್ತೂ ಆಫ್ಲೈನ್ ಮಾಧ್ಯಮ, ಆನ್ಲೈನ್ ಅಲ್ಲ’
ಟಿ.ಎಸ್.ನಾಗಾಭರಣ, ಮುಖ್ಯ ತೀರ್ಪುಗಾರರ ಮಂಡಳಿ ಅಧ್ಯಕ್ಷ
ಪ್ರಜಾವಾಣಿಗೆ ತನ್ನದೇ ಆದ ಮೌಲ್ಯವಿದೆ. ನಮ್ಮ ಕೆಲಸವನ್ನು ಪ್ರಜಾವಾಣಿ ಮಾಡುತ್ತಿದೆ. ಇಂತಹ ಪ್ರಶಸ್ತಿಗಳು ಸ್ಫೂರ್ತಿ ನೀಡುತ್ತವೆ. ಕನ್ನಡ ಚಿತ್ರರಂಗದಲ್ಲಿ ಇದೊಂದು ಮಾದರಿ ಸನ್ಮಾನ ಕಾರ್ಯಕ್ರಮ. ನಿರ್ಮಾಪಕರನ್ನೂ ಪ್ರಶಸ್ತಿ ಮೂಲಕ ಗುರುತಿಸುವ ಕೆಲಸವಾಗಲಿ ಎಂದು ಆಶಿಸುತ್ತೇನೆ.
ಎನ್.ಎಂ.ಸುರೇಶ್, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ