ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಬಳಿಕ ಏನಾಯ್ತು?: ಅನುಭವ ಹಂಚಿಕೊಂಡ ದಾನಿಶ್ ಸೇಠ್

ಅಕ್ಷರ ಗಾತ್ರ

ಬೆಂಗಳೂರು: ನಟ ಮತ್ತು ನಿರೂಪಕ ದಾನಿಶ್ ಸೇಠ್ ಕಳೆದ ವಾರ ಬಹುಕಾಲದ ಗೆಳತಿ ಆನ್ಯಾ ರಂಗಸ್ವಾಮಿ ಅವರನ್ನುಮದುವೆಯಾಗಿದ್ದಾರೆ.

ದಾನಿಶ್ ಸೇಠ್ ಮದುವೆ ವಿಚಾರವನ್ನು ಸಾಮಾಜಿಕ ತಾಣಗಳಲ್ಲಿಹಂಚಿಕೊಂಡಿದ್ದರು. ಈ ಬಾರಿ ಮದುವೆ ಬಳಿಕ ಏನಾಯ್ತು ಎಂದು ಇನ್‌ಸ್ಟಾಗ್ರಾಂ ವಿಡಿಯೊದಲ್ಲಿ ದಾನಿಶ್ ಸೇಠ್ ವಿವರಿಸಿದ್ದಾರೆ.

ತನ್ನ ಎಂದಿನ ಶೈಲಿಯಲ್ಲಿ ದಾನಿಶ್ ಸೇಠ್, ವಿವಿಧ ರೀತಿಯ ಸಂಭಾಷಣೆಯನ್ನು ಅನುಕರಿಸಿ ಮದುವೆ ಬಳಿಕ ಜನರು ಏನು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಮದುವೆಯ ಮರುದಿನವೇ ಜನರು ವಿವಿಧ ಪ್ರಶ್ನೆಗಳನ್ನು ದಾನಿಶ್ ಸೇಠ್‌ಗೆ ಕೇಳಿದ್ದು, ಮದುವೆ ಹೇಗಾಯ್ತು, ಗುಡ್ ನ್ಯೂಸ್ ಯಾವಾಗ, ಹನಿಮೂನ್ ಏನು ಕಥೆ ಎಂಬೆಲ್ಲಾ ಪ್ರಶ್ನೆಗಳು ಬಂದಿವೆ.

ಮದುವೆಗೆ ಯಾಕೆ ಕರೆದಿಲ್ಲ ಎಂದು ಹಲವರು ಆಕ್ಷೇಪಿಸಿದರೆ, ಮತ್ತೆ ಕೆಲವರು ಮಕ್ಕಳ ಕುರಿತು ಏನು ಯೋಚನೆ ಮಾಡಿದ್ದೀರಿ ಎಂದು ಕೇಳಿದ್ದಾರೆ ಎಂದು ದಾನಿಶ್ ಸೇಠ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT