ನಿರ್ದೇಶಕ ಅರವಿಂದ್ ಶಾಸ್ತ್ರಿ ಪ್ರತಿಕ್ರಿಯಿಸಿ, ‘ಹಬ್ಬದ ಅವಧಿಯಲ್ಲಿ ನಡೆಯುವ ಸರಣಿ ಕೊಲೆಗಳ ಸುತ್ತ ನಡೆಯುವ ಕಥೆ ಇದು. ಹಾಗಾಗಿ ‘ದಸರಾ’ ಹೆಸರೇ ಸೂಕ್ತ ಎನಿಸಿತು. ಕಾಕತಾಳೀಯ ಎಂದರೆ ಚಿತ್ರದ ಶೂಟಿಂಗ್ ಪುನರಾರಂಭವೂ ದಸರಾ ವೇಳೆಗೇ ಆಗಿದೆ. ಚಿತ್ರದ ಕೆಲವು ಭಾಗಗಳನ್ನು ಬೆಂಗಳೂರ ಮತ್ತು ಹೊನ್ನಾವರದಲ್ಲಿ ಚಿತ್ರಿಸಬೇಕಿದೆ. ಶೀಘ್ರವೇ ಚಿತ್ರ ಸಿದ್ಧವಾಗುವ ವಿಶ್ವಾಸವಿದೆ’ ಎಂದರು.