‘ಶಾಲೆಯ ಕಥೆ ಎಂದಾಕ್ಷಣ ಅದರ ಶ್ರೇಯೋಭಿವೃದ್ಧಿ, ಭೂ ವಿವಾದ, ಮಕ್ಕಳಿಗೆ ಬೋಧನೆ, ಶಾಲೆಯ ದುಃಸ್ಥಿತಿ, ಅವ್ಯವಹಾರದ ವಿರುದ್ಧ ಸೆಣಸಾಟ ನಡೆಸುವ ನಾಯಕನ ಕಥೆಯೇ ಕಣ್ಮುಂದೆ ಬರುವುದು ಸಹಜ. ಇದರಲ್ಲಿ ಅಂತಹ ಚಿತ್ರಣವಿಲ್ಲ. ರೆಗ್ಯುಲರ್ ಫಾರ್ಮೆಟ್ನಿಂದ ಹೊರತಾದ ಚಿತ್ರ ಇದು’ ಎಂದು ವಿವರಿಸುತ್ತಾರೆ ನಿರ್ದೇಶಕ ಪ್ರಮೋದ್ ಚಕ್ರವರ್ತಿ.