ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cinema News: ರಣವ್‌ಗೆ ಖಳನಾಗಿ ಬೆಳೆಯುವ ಕನಸು

Published 4 ಏಪ್ರಿಲ್ 2024, 17:44 IST
Last Updated 4 ಏಪ್ರಿಲ್ 2024, 17:44 IST
ಅಕ್ಷರ ಗಾತ್ರ

‘ಯುವರತ್ನ’, ‘ಅವತಾರ ಪುರುಷ’ ಚಿತ್ರಗಳಲ್ಲಿ ಖಳನಟನಾಗಿದ್ದ ರಣವ್‌ಗೆ ‘ಯುವ’ ಸಿನಿಮಾದಲ್ಲಿ ಗುರುತಿಸಿಕೊಳ್ಳುವಂತಹ ಪಾತ್ರ ಸಿಕ್ಕಿದೆ. ಸದ್ಯ ‘ಯುವ’ದ ಕೃಪಾಲ್‌ ಆಗಿ ಇವರನ್ನು ಜನ ಗುರುತಿಸುತ್ತಿದ್ದಾರೆ. 

‘ಪುನೀತ್‌ ರಾಜ್‌ಕುಮಾರ್‌ ಅವರ ‘ಯುವರತ್ನ’ ಸಿನಿಮಾದಿಂದ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟೆ. ಸಿಕ್ಕ ಸಣ್ಣ ಅವಕಾಶಗಳಲ್ಲಿ ನಟನೆ ಸಾಬೀತುಪಡಿಸಿಕೊಂಡೆ. ‘ಯುವ’ದ ಕೃಪಾಲ್‌ ಪಾತ್ರ ನನ್ನ ವೃತ್ತಿ ಬದುಕಿನ ತಿರುವು. ಪ್ರಮುಖ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ’ ಎನ್ನುತ್ತಾರೆ ಮೈಸೂರು ಮೂಲದ ರಣವ್ ಕ್ಷೀರಸಾಗರ್‌. 

ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಮುಗಿಸಿರುವ ರಣವ್‌, ಸಿನಿಮಾ ಕನಸಿನಿಂದ ನಟನೆ ತರಬೇತಿ ಪಡೆದುಕೊಂಡಿದ್ದಾರೆ. ‘ಈಗಾಗಲೇ ನಾಲ್ಕೈದು ಸಿನಿಮಾ ಒಪ್ಪಿಕೊಂಡಿರುವೆ. ನಾವೇ ಎಲ್ಲವನ್ನೂ ಹೇಳಿಕೊಂಡರೆ ಚೆನ್ನಾಗಿರುವುದಿಲ್ಲ. ಸಿನಿಮಾ ತಂಡಗಳೇ ಅಧಿಕೃತವಾಗಿ ಘೋಷಿಸುತ್ತವೆ. ಪ್ರತಿ ನಟನ ಕನಸೂ ನಾಯಕನಾಗುವುದು. ಮೊದಲು ಖಳನಾಯಕನಾಗಿ ನೆಲಯೂರಬೇಕಿದೆ. ಸಿನಿಮಾಗಾಗಿಯೇ ಬದುಕಿನಲ್ಲಿ ಬೇರೆಲ್ಲ ದೂರ ಇಟ್ಟಿರುವೆ’ ಎಂದು ತಮ್ಮೊಳಗಿನ ಸಿನಿಮಾ ಹಂಬಲ ಹಂಚಿಕೊಂಡರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT