<p><strong>ಮೈಸೂರು: </strong>ನಟ ದರ್ಶನ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ನಗರದ ಹರ್ಷ ಮೆಲಂತಾ ಎಂಬುವವರಿಗೆ ₹ 25 ಲಕ್ಷ ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ ಸಂಬಂಧ ಅರುಣಕುಮಾರಿ ಎಂಬುವವರ ವಿರುದ್ಧ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಈ ಸಂಬಂಧ ಭಾನುವಾರ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಇಲ್ಲಿನ ಎನ್.ಆರ್.ವಿಭಾಗದ ಎಸಿಪಿ ಕಚೇರಿಗೆ ಹಾಜರಾಗಿದ್ದರು.</p>.<p class="Subhead"><strong>ಏನಿದು ಪ್ರಕರಣ?</strong></p>.<p>ನಗರದ ಹೆಬ್ಬಾಳದಲ್ಲಿ ‘ಮೈಸೂರು ಯೂನಿಯನ್’ ಕ್ಲಬ್ ನಡೆಸುತ್ತಿರುವ ಹರ್ಷ ಅವರನ್ನು ಜೂನ್ 16ರಂದು ಆರೋಪಿ ಅರುಣಕುಮಾರಿ ಭೇಟಿಯಾಗುತ್ತಾರೆ.</p>.<p>ತಾನು ಬ್ಯಾಂಕ್ನ ವ್ಯವಸ್ಥಾಪಕಿ ಎಂಬುದಾಗಿ ಪರಿಚಯಿಸಿಕೊಂಡು, ‘ಬೆಂಗಳೂರಿನ ಸೌತ್ಎಂಡ್ ವೃತ್ತದಲ್ಲಿರುವ ಕೆನರಾ ಬ್ಯಾಂಕಿನಲ್ಲಿ ₹ 25 ಕೋಟಿ ಸಾಲಕ್ಕೆ ತಾವು ಅರ್ಜಿ ಸಲ್ಲಿಸಿದ್ದೀರಿ. ಅದರಲ್ಲಿ ನಟ ದರ್ಶನ್ ಅವರ ಆಸ್ತಿಯ ನಕಲಿ ದಾಖಲೆ ಒದಗಿಸಿದ್ದೀರಿ. ಅವರ ಸಹಿಯನ್ನೂ ನಕಲು ಮಾಡಿರುತ್ತೀರಿ’ ಎಂದು ಹೇಳುತ್ತಾರೆ. ಅಲ್ಲದೇ, ಈ ವಿಷಯವನ್ನು ಬಹಿರಂಗಪಡಿಸಬಾರದು ಎಂದರೆ ₹ 25 ಲಕ್ಷ ನೀಡಬೇಕು ಎಂದು ಬ್ಲ್ಯಾಕ್ಮೇಲ್ ಮಾಡುತ್ತಾರೆ. ಮಹಿಳೆಯು ನಕಲಿ ಅಧಿಕಾರಿ ಎಂಬುದು ಗೊತ್ತಾಗುತ್ತಿದ್ದಂತೆ, ಜುಲೈ 3ರಂದು ಹರ್ಷ ದೂರು ದಾಖಲಿಸುತ್ತಾರೆ.</p>.<p>ನಿರ್ಮಾಪಕ ಉಮಾಪತಿ ಅವರಿಗೂ ಕರೆ ಮಾಡಿದ ಇದೇ ಮಹಿಳೆ, ‘ಹರ್ಷ ಅವರು ಸಾಲಕ್ಕಾಗಿ ದರ್ಶನ್ ಅವರ ಜಾಮೀನು ಹಾಗೂ ದಾಖಲಾತಿ ನೀಡಿದ್ದಾರೆ. ಇದು ನಿಜವೇ’ ಎಂಬುದಾಗಿ ಪ್ರಶ್ನಿಸುತ್ತಾರೆ. ಅನುಮಾನಗೊಂಡ ಉಮಾಪತಿ, ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಗೆ ಜೂನ್ 17ರಂದು ದೂರು ನೀಡಿದ್ದರು.</p>.<p class="Subhead"><strong>ತಲೆ ತೆಗೆಯುತ್ತೇನೆ: ದರ್ಶನ್ ಗುಡುಗು</strong></p>.<p>ಭಾನುವಾರ ಇಲ್ಲಿನ ನರಸಿಂಹರಾಜ ಉಪವಿಭಾಗದ ಎಸಿಪಿ ಕಚೇರಿಗೆ ಬಂದ ದರ್ಶನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ಯಾರೇ ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡರೂ, ಅವರ ರೆಕ್ಕೆಯನ್ನಲ್ಲ; ತಲೆಯನ್ನೇ ತೆಗೆಯುತ್ತೇನೆ’ ಎಂದು ಗುಡುಗಿದರು.</p>.<p>‘ನನಗೆ ಯಾರೂ ಬ್ಲಾಕ್ಮೇಲ್ ಮಾಡಿಲ್ಲ. ಆದರೆ, ನನ್ನ ಮೇಲೆ ಗೂಬೆ ಕೂರಿಸುವ ಯತ್ನ ನಡೆದಿದೆ. ಪೊಲೀಸರು ತನಿಖೆ ಪೂರ್ಣಗೊಂಡ ಬಳಿಕ ವಿವರ ನೀಡುತ್ತೇನೆ’ ಎಂದರು.</p>.<p>‘ನಾವು ಯಾರನ್ನೂ ವಶಕ್ಕೆ ಪಡೆದಿಲ್ಲ ಹಾಗೂ ಯಾರನ್ನೂ ವಿಚಾರಣೆಗೆ ಕರೆದಿಲ್ಲ. ದೂರುದಾರರ ಜತೆ ಕೆಲವರು ಬಂದಿದ್ದರು’ ಎಂದು ಡಿಸಿಪಿ ಪ್ರದೀಪ್ ಗುಂಟಿ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ನಟ ದರ್ಶನ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ನಗರದ ಹರ್ಷ ಮೆಲಂತಾ ಎಂಬುವವರಿಗೆ ₹ 25 ಲಕ್ಷ ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ ಸಂಬಂಧ ಅರುಣಕುಮಾರಿ ಎಂಬುವವರ ವಿರುದ್ಧ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಈ ಸಂಬಂಧ ಭಾನುವಾರ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಇಲ್ಲಿನ ಎನ್.ಆರ್.ವಿಭಾಗದ ಎಸಿಪಿ ಕಚೇರಿಗೆ ಹಾಜರಾಗಿದ್ದರು.</p>.<p class="Subhead"><strong>ಏನಿದು ಪ್ರಕರಣ?</strong></p>.<p>ನಗರದ ಹೆಬ್ಬಾಳದಲ್ಲಿ ‘ಮೈಸೂರು ಯೂನಿಯನ್’ ಕ್ಲಬ್ ನಡೆಸುತ್ತಿರುವ ಹರ್ಷ ಅವರನ್ನು ಜೂನ್ 16ರಂದು ಆರೋಪಿ ಅರುಣಕುಮಾರಿ ಭೇಟಿಯಾಗುತ್ತಾರೆ.</p>.<p>ತಾನು ಬ್ಯಾಂಕ್ನ ವ್ಯವಸ್ಥಾಪಕಿ ಎಂಬುದಾಗಿ ಪರಿಚಯಿಸಿಕೊಂಡು, ‘ಬೆಂಗಳೂರಿನ ಸೌತ್ಎಂಡ್ ವೃತ್ತದಲ್ಲಿರುವ ಕೆನರಾ ಬ್ಯಾಂಕಿನಲ್ಲಿ ₹ 25 ಕೋಟಿ ಸಾಲಕ್ಕೆ ತಾವು ಅರ್ಜಿ ಸಲ್ಲಿಸಿದ್ದೀರಿ. ಅದರಲ್ಲಿ ನಟ ದರ್ಶನ್ ಅವರ ಆಸ್ತಿಯ ನಕಲಿ ದಾಖಲೆ ಒದಗಿಸಿದ್ದೀರಿ. ಅವರ ಸಹಿಯನ್ನೂ ನಕಲು ಮಾಡಿರುತ್ತೀರಿ’ ಎಂದು ಹೇಳುತ್ತಾರೆ. ಅಲ್ಲದೇ, ಈ ವಿಷಯವನ್ನು ಬಹಿರಂಗಪಡಿಸಬಾರದು ಎಂದರೆ ₹ 25 ಲಕ್ಷ ನೀಡಬೇಕು ಎಂದು ಬ್ಲ್ಯಾಕ್ಮೇಲ್ ಮಾಡುತ್ತಾರೆ. ಮಹಿಳೆಯು ನಕಲಿ ಅಧಿಕಾರಿ ಎಂಬುದು ಗೊತ್ತಾಗುತ್ತಿದ್ದಂತೆ, ಜುಲೈ 3ರಂದು ಹರ್ಷ ದೂರು ದಾಖಲಿಸುತ್ತಾರೆ.</p>.<p>ನಿರ್ಮಾಪಕ ಉಮಾಪತಿ ಅವರಿಗೂ ಕರೆ ಮಾಡಿದ ಇದೇ ಮಹಿಳೆ, ‘ಹರ್ಷ ಅವರು ಸಾಲಕ್ಕಾಗಿ ದರ್ಶನ್ ಅವರ ಜಾಮೀನು ಹಾಗೂ ದಾಖಲಾತಿ ನೀಡಿದ್ದಾರೆ. ಇದು ನಿಜವೇ’ ಎಂಬುದಾಗಿ ಪ್ರಶ್ನಿಸುತ್ತಾರೆ. ಅನುಮಾನಗೊಂಡ ಉಮಾಪತಿ, ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಗೆ ಜೂನ್ 17ರಂದು ದೂರು ನೀಡಿದ್ದರು.</p>.<p class="Subhead"><strong>ತಲೆ ತೆಗೆಯುತ್ತೇನೆ: ದರ್ಶನ್ ಗುಡುಗು</strong></p>.<p>ಭಾನುವಾರ ಇಲ್ಲಿನ ನರಸಿಂಹರಾಜ ಉಪವಿಭಾಗದ ಎಸಿಪಿ ಕಚೇರಿಗೆ ಬಂದ ದರ್ಶನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ಯಾರೇ ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡರೂ, ಅವರ ರೆಕ್ಕೆಯನ್ನಲ್ಲ; ತಲೆಯನ್ನೇ ತೆಗೆಯುತ್ತೇನೆ’ ಎಂದು ಗುಡುಗಿದರು.</p>.<p>‘ನನಗೆ ಯಾರೂ ಬ್ಲಾಕ್ಮೇಲ್ ಮಾಡಿಲ್ಲ. ಆದರೆ, ನನ್ನ ಮೇಲೆ ಗೂಬೆ ಕೂರಿಸುವ ಯತ್ನ ನಡೆದಿದೆ. ಪೊಲೀಸರು ತನಿಖೆ ಪೂರ್ಣಗೊಂಡ ಬಳಿಕ ವಿವರ ನೀಡುತ್ತೇನೆ’ ಎಂದರು.</p>.<p>‘ನಾವು ಯಾರನ್ನೂ ವಶಕ್ಕೆ ಪಡೆದಿಲ್ಲ ಹಾಗೂ ಯಾರನ್ನೂ ವಿಚಾರಣೆಗೆ ಕರೆದಿಲ್ಲ. ದೂರುದಾರರ ಜತೆ ಕೆಲವರು ಬಂದಿದ್ದರು’ ಎಂದು ಡಿಸಿಪಿ ಪ್ರದೀಪ್ ಗುಂಟಿ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>