<p><strong>ದಾವಣಗೆರೆ:</strong> ನಗರದಲ್ಲಿ ಫೆಬ್ರುವರಿ ಕೊನೆ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಬೃಹತ್ ಸಮಾವೇಶ ಆಯೋಜಿಸುವ ಚಿಂತನೆ ನಡೆದಿದ್ದು, ಸಮುದಾಯದ ಎಲ್ಲರೂ ಅಗತ್ಯ ದೇಣಿಗೆ, ಸಹಕಾರ ನೀಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ ಎಂ.ಶಿವಕುಮಾರ್ ಮನವಿ ಮಾಡಿದರು.</p>.<p>ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ಲಿಂಗಾಯತ ಧರ್ಮ ಸಾಂವಿಧಾನಿಕ ಮಾನ್ಯತೆಗಾಗಿ ಜನಾಂದೋಲನ ಮುಂದುವರಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಶೋಷಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮಾನತೆ ಕಲ್ಪಿಸಿಕೊಡುವ ಉದ್ದೇಶದಿಂದ 12ನೇ ಶತಮಾನದಲ್ಲಿಯೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದರು. ಬಸವಣ್ಣನವರ ವಿಚಾರ ಧಾರೆಗಳನ್ನು ಪ್ರಚಾರ ಪಡಿಸುವ ಉದ್ದೇಶದಿಂದ ಮಹಾಸಭಾದ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ ವಿನಾ, ಯಾರ ವಿರುದ್ಧವೂ ಅಲ್ಲ ಎಂದು ಹೇಳಿದರು.</p>.<p>ಬೌದ್ಧ, ಸಿಖ್, ಕ್ರಿಶ್ಚಿಯನ್ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ದೊರೆಯುತ್ತಿವೆ. ಲಿಂಗಾಯತ ಧರ್ಮಕ್ಕೂ ಮಾನ್ಯತೆ ದೊರೆಯಬೇಕಿದೆ. ಈ ಹಿನ್ನೆಲೆಯಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.</p>.<p>ಸಮುದಾಯದವರು ಮೊದಲು ಒಗ್ಗೂಡಬೇಕಿದೆ. ಬಹಿರಂಗವಾಗಿ ಶುದ್ಧವಾದರೆ ಸಾಲದು, ಆಂತರಿಕವಾಗಿಯೂ ಶುದ್ಧಿಯಾಗಬೇಕಿದೆ. ಆಚಾರ, ವಿಚಾರ, ನಡೆ–ನುಡಿಗಳೂ ಶುದ್ಧವಾಗಿರಬೇಕು. ಬಸವಣ್ಣನವರು ಪ್ರಸ್ತಾಪಿಸಿದ ವಚನಗಳು ಪಚನವಾಗಬೇಕು ಆಗ ಮಾತ್ರ ಆರೋಗ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.</p>.<p>ಫೆ.5 ರಂದು ಅರಸಿಕೆರೆಯಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಜಾಗತಿಕ ಲಿಂಗಾಯತ ಸಮಾವೇಶ ನಡೆಯಲಿದ್ದು, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.</p>.<p>ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡ ಡಾ.ಶಶಿಕಾಂತ್ ಪಟ್ಟಣ್ ಮಾತನಾಡಿ, ‘ಲಿಂಗಾಯತ ಧರ್ಮವು ಜಗತ್ತಿನ ಪ್ರಥಮ ಸಂಸತ್ತನ್ನು (ಅನುಭವ ಮಂಟಪ) ಸ್ಥಾಪಿಸಿದ ಹಾಗೂ ಮಹಿಳೆಯರ ಅಸ್ಮಿತೆಯನ್ನು ಎತ್ತಿಹಿಡಿದ ಧರ್ಮವಾಗಿದೆ’ ಎಂದು ಪ್ರತಿಪಾದಿಸಿದರು.</p>.<p>ಬಸವಣ್ಣನವರು ಅಂದೇ ವರ್ಗರಹಿತ, ವರ್ಣರಹಿತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದರು. ಆದರೆ, ಇಂದು ಅವರ ವಿಚಾರಧಾರೆಗಳನ್ನು ಯಾರೂ ಅನುಸರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ದಾವಣಗೆರೆಯು ಲಿಂಗಾಯತ ಸಮುದಾಯದ ರಾಜಧಾನಿಯಾಗಿದೆ. ಇದರಿಂದಾಗಿಯೇ ನಗರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಬೃಹತ್ ಸಮಾವೇಶ ಆಯೋಜಿಸುವ ಚಿಂತನೆ ನಡೆದಿದೆ. ಲಿಂಗಾಯತ ಧರ್ಮದ ಪೋಷಣೆಗಾಗಿ ಪಕ್ಷಾತೀತವಾಗಿ ಹೋರಾಟ ನಡೆಸುವ ಅವಶ್ಯವಿದೆ ಎಂದರು.</p>.<p>ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್.ಜಯದೇವಪ್ಪ, ಮಾತನಾಡಿ, ‘ಜಾಗತಿಕ ಸಮಾವೇಶದ ಯಶಸ್ವಿಗೆ ಕಮಿಟಿ ರಚನೆಯಾಗಬೇಕು. ಹಣಕಾಸಿನ ವ್ಯವಸ್ಥೆಯಾಗಬೇಕು. ವಿವಿಧ ಸಮುದಾಯದ ಧರ್ಮಗುರುಗಳ ಹಾಗೂ ಮಠಾಧೀಶರ ಆಹ್ವಾನಿಸುವ ಸಂಬಂಧ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದ ಅವರು, ಸಮಾವೇಶಕ್ಕಾಗಿ ವೈಯಕ್ತಿಕವಾಗಿ ₹ 1 ಲಕ್ಷ ದೇಣಿಗೆ ನೀಡುತ್ತೇನೆ’ ಎಂದು ಘೋಷಿಸಿದರು.</p>.<p>ಎಚ್.ಕೆ.ರಾಮಚಂದ್ರಪ್ಪ, ಚಿಕ್ಕೋಳು ಈಶ್ವರಪ್ಪ, ಅನಂತನಾಯ್ಕ, ಕೆ.ಎಸ್.ಗೋವಿಂದರಾಜ್ ಮಾತನಾಡಿದರು. ಇದೇ ಸಮಯದಲ್ಲಿ ಸಮಾವೇಶದ ಯಶಸ್ವಿಗಾಗಿ ಕೆಲವರು ಆರ್ಥಿಕ ಸಹಾಯ ನೀಡುವುದಾಗಿಯೂ ಘೋಷಿಸಿದರು.</p>.<p>ಸಿದ್ದರಾಮ, ಪುಟ್ಟಸ್ವಾಮಿ, ಚಿಗಟೇರಿ ಜಯಪ್ರಕಾಶ್, ಆವರಗೆರೆ ಉಮೇಶ್, ಬಾಡದ ಆನಂದರಾಜ್, ಸಿದ್ದಲಿಂಗೇಶ್ವರ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರೂ ಇದ್ದರು. ಅಗಡಿ ಮಾಲತೇಶ್ ಸ್ವಾಗತಿಸಿದರು. ಬಸವಬಳಗ ಹಾಗೂ ಕದಳಿ ವೇದಿಕೆ ತಂಡದವರು ವಚನಗೀತೆಗಳನ್ನು ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ನಗರದಲ್ಲಿ ಫೆಬ್ರುವರಿ ಕೊನೆ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಬೃಹತ್ ಸಮಾವೇಶ ಆಯೋಜಿಸುವ ಚಿಂತನೆ ನಡೆದಿದ್ದು, ಸಮುದಾಯದ ಎಲ್ಲರೂ ಅಗತ್ಯ ದೇಣಿಗೆ, ಸಹಕಾರ ನೀಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ ಎಂ.ಶಿವಕುಮಾರ್ ಮನವಿ ಮಾಡಿದರು.</p>.<p>ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ಲಿಂಗಾಯತ ಧರ್ಮ ಸಾಂವಿಧಾನಿಕ ಮಾನ್ಯತೆಗಾಗಿ ಜನಾಂದೋಲನ ಮುಂದುವರಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಶೋಷಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮಾನತೆ ಕಲ್ಪಿಸಿಕೊಡುವ ಉದ್ದೇಶದಿಂದ 12ನೇ ಶತಮಾನದಲ್ಲಿಯೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದರು. ಬಸವಣ್ಣನವರ ವಿಚಾರ ಧಾರೆಗಳನ್ನು ಪ್ರಚಾರ ಪಡಿಸುವ ಉದ್ದೇಶದಿಂದ ಮಹಾಸಭಾದ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ ವಿನಾ, ಯಾರ ವಿರುದ್ಧವೂ ಅಲ್ಲ ಎಂದು ಹೇಳಿದರು.</p>.<p>ಬೌದ್ಧ, ಸಿಖ್, ಕ್ರಿಶ್ಚಿಯನ್ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ದೊರೆಯುತ್ತಿವೆ. ಲಿಂಗಾಯತ ಧರ್ಮಕ್ಕೂ ಮಾನ್ಯತೆ ದೊರೆಯಬೇಕಿದೆ. ಈ ಹಿನ್ನೆಲೆಯಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.</p>.<p>ಸಮುದಾಯದವರು ಮೊದಲು ಒಗ್ಗೂಡಬೇಕಿದೆ. ಬಹಿರಂಗವಾಗಿ ಶುದ್ಧವಾದರೆ ಸಾಲದು, ಆಂತರಿಕವಾಗಿಯೂ ಶುದ್ಧಿಯಾಗಬೇಕಿದೆ. ಆಚಾರ, ವಿಚಾರ, ನಡೆ–ನುಡಿಗಳೂ ಶುದ್ಧವಾಗಿರಬೇಕು. ಬಸವಣ್ಣನವರು ಪ್ರಸ್ತಾಪಿಸಿದ ವಚನಗಳು ಪಚನವಾಗಬೇಕು ಆಗ ಮಾತ್ರ ಆರೋಗ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.</p>.<p>ಫೆ.5 ರಂದು ಅರಸಿಕೆರೆಯಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಜಾಗತಿಕ ಲಿಂಗಾಯತ ಸಮಾವೇಶ ನಡೆಯಲಿದ್ದು, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.</p>.<p>ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡ ಡಾ.ಶಶಿಕಾಂತ್ ಪಟ್ಟಣ್ ಮಾತನಾಡಿ, ‘ಲಿಂಗಾಯತ ಧರ್ಮವು ಜಗತ್ತಿನ ಪ್ರಥಮ ಸಂಸತ್ತನ್ನು (ಅನುಭವ ಮಂಟಪ) ಸ್ಥಾಪಿಸಿದ ಹಾಗೂ ಮಹಿಳೆಯರ ಅಸ್ಮಿತೆಯನ್ನು ಎತ್ತಿಹಿಡಿದ ಧರ್ಮವಾಗಿದೆ’ ಎಂದು ಪ್ರತಿಪಾದಿಸಿದರು.</p>.<p>ಬಸವಣ್ಣನವರು ಅಂದೇ ವರ್ಗರಹಿತ, ವರ್ಣರಹಿತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದರು. ಆದರೆ, ಇಂದು ಅವರ ವಿಚಾರಧಾರೆಗಳನ್ನು ಯಾರೂ ಅನುಸರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ದಾವಣಗೆರೆಯು ಲಿಂಗಾಯತ ಸಮುದಾಯದ ರಾಜಧಾನಿಯಾಗಿದೆ. ಇದರಿಂದಾಗಿಯೇ ನಗರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಬೃಹತ್ ಸಮಾವೇಶ ಆಯೋಜಿಸುವ ಚಿಂತನೆ ನಡೆದಿದೆ. ಲಿಂಗಾಯತ ಧರ್ಮದ ಪೋಷಣೆಗಾಗಿ ಪಕ್ಷಾತೀತವಾಗಿ ಹೋರಾಟ ನಡೆಸುವ ಅವಶ್ಯವಿದೆ ಎಂದರು.</p>.<p>ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್.ಜಯದೇವಪ್ಪ, ಮಾತನಾಡಿ, ‘ಜಾಗತಿಕ ಸಮಾವೇಶದ ಯಶಸ್ವಿಗೆ ಕಮಿಟಿ ರಚನೆಯಾಗಬೇಕು. ಹಣಕಾಸಿನ ವ್ಯವಸ್ಥೆಯಾಗಬೇಕು. ವಿವಿಧ ಸಮುದಾಯದ ಧರ್ಮಗುರುಗಳ ಹಾಗೂ ಮಠಾಧೀಶರ ಆಹ್ವಾನಿಸುವ ಸಂಬಂಧ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದ ಅವರು, ಸಮಾವೇಶಕ್ಕಾಗಿ ವೈಯಕ್ತಿಕವಾಗಿ ₹ 1 ಲಕ್ಷ ದೇಣಿಗೆ ನೀಡುತ್ತೇನೆ’ ಎಂದು ಘೋಷಿಸಿದರು.</p>.<p>ಎಚ್.ಕೆ.ರಾಮಚಂದ್ರಪ್ಪ, ಚಿಕ್ಕೋಳು ಈಶ್ವರಪ್ಪ, ಅನಂತನಾಯ್ಕ, ಕೆ.ಎಸ್.ಗೋವಿಂದರಾಜ್ ಮಾತನಾಡಿದರು. ಇದೇ ಸಮಯದಲ್ಲಿ ಸಮಾವೇಶದ ಯಶಸ್ವಿಗಾಗಿ ಕೆಲವರು ಆರ್ಥಿಕ ಸಹಾಯ ನೀಡುವುದಾಗಿಯೂ ಘೋಷಿಸಿದರು.</p>.<p>ಸಿದ್ದರಾಮ, ಪುಟ್ಟಸ್ವಾಮಿ, ಚಿಗಟೇರಿ ಜಯಪ್ರಕಾಶ್, ಆವರಗೆರೆ ಉಮೇಶ್, ಬಾಡದ ಆನಂದರಾಜ್, ಸಿದ್ದಲಿಂಗೇಶ್ವರ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರೂ ಇದ್ದರು. ಅಗಡಿ ಮಾಲತೇಶ್ ಸ್ವಾಗತಿಸಿದರು. ಬಸವಬಳಗ ಹಾಗೂ ಕದಳಿ ವೇದಿಕೆ ತಂಡದವರು ವಚನಗೀತೆಗಳನ್ನು ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>