ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸರ್ಕಾರವು ಎಲ್ಲದಕ್ಕೂ ಜವಾಬ್ದಾರಿಯುತ. ಸಿನಿಮಾ ನಟರು ರೈತರ ಪರವಾಗಿ ಮಾತನಾಡಿದರೆ ಏನಾಗುತ್ತದೆ? ಸಿನಿಮಾ ಇಂಡಸ್ಟ್ರಿಯೊಳಗಿನ ಸಮಸ್ಯೆಯನ್ನೇ ನಮಗೆ ಬಗೆಹರಿಸಿಕೊಳ್ಳಲು ಆಗುತ್ತಿಲ್ಲ. ನಾವು ಎಲ್ಲರಿಗೂ ಬೆಂಬಲ ನೀಡುತ್ತವೆ. ಪ್ರತಿ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಬೆಂಬಲ ನೀಡಿಯೇ ನೀಡುತ್ತಾನೆ. ಪ್ರತ್ಯೇಕವಾಗಿ ನಾನು ಇಂತಹ ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದರೆ ಅದು ಕೇವಲ ತೋರಿಕೆಯಾಗಿ ಕಾಣುತ್ತದೆ. ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಬೆಂಬಲ ನೀಡುವುದು ಬೇರೆ. ನಮ್ಮ ಕೈಯಲ್ಲಿ ಇದ್ದಿದ್ದರೆ ಇಂದೇ ಬರೆದುಕೊಡುತ್ತಿದ್ದೆ. ಆದರೆ ನಮ್ಮ ಕೈಯಲ್ಲಿ ಏನೂ ಇಲ್ಲ. ಅದಕ್ಕಾಗಿ ಒಂದು ಸರ್ಕಾರವಿದೆ. ಭಾರತೀಯ ಚಿತ್ರರಂಗವೇ ಬೀದಿಗೆ ಬಂದು ಹೋರಾಟ ಮಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದರೆ, ಈ ರೀತಿ ಹೋರಾಟಕ್ಕೆ ಅಭ್ಯಂತರವಿಲ್ಲ. ಆದರೆ, ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.