ಈ ಸಿನಿಮಾ ಆಗಸ್ಟ್ 9ರಂದು ವರಮಹಾಲಕ್ಷ್ಮಿ ಹಬ್ಬದ ದಿನ ರಾಜ್ಯದಾದ್ಯಂತ ತೆರೆ ಕಾಣಲಿದೆ. ಇದೇ ಶುಕ್ರವಾರ (ಜು.26ರಂದು) ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಲಿದೆ. ಸಿನಿಮಾದ ಮೂರು ಹಾಡುಗಳು ಬಿಡುಗಡೆಗೂ ಮೊದಲೇ ಹಿಟ್ ಆಗಿವೆ. ‘ಸ್ವಾಗತಂ ಕೃಷ್ಣ’ ಹಾಡು ಯೂಟೂಬ್ನ ‘ಕ್ರಿಸ್ಟಲ್ ಪಾರ್ಕ್ ಮ್ಯೂಸಿಕ್’ ಚಾನೆಲ್ನಲ್ಲಿಬಿಡುಗಡೆಯಾದ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದರು. ಈವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಈ ಹಾಡನ್ನು ಹಾಲಿಸಿದ್ದಾರೆ. ಜಯಂತ್ ಕಾಯ್ಕಿಣಿಯವರು ಬರೆದಿರುವ ‘ಏನನ್ನೋ ಹೇಳಲು ಹೋಗಿ ಇನ್ನೇನೋ ಹೇಳಿದೆಯಲ್ಲ...’ ಹಾಡಿಗೆ ಕೆನಾಡದಲ್ಲಿ ಪ್ಯೂಷನ್ ಮ್ಯೂಸಿಕ್ ಅಳವಡಿಸಲಾಗುತ್ತಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುಜ ಶಾಸ್ತ್ರಿ.