ಬೆಂಗಳೂರು: ನಟ ಧನಂಜಯ್ ಅಭಿನಯದ ‘ಹೆಡ್ ಬುಷ್’ ಚಿತ್ರದಲ್ಲಿ ವೀರಗಾಸೆ ಕಲೆಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ವಿಚಾರ ಈಗ ವಿವಾದವಾಗಿದೆ. ಇದರ ಹೊರತಾಗಿಯೂ ಚಿತ್ರಕ್ಕೆ ಮತ್ತು ಧನಂಜಯ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.
ಈ ವಿವಾದವು ನಟ ಧನಂಜಯ್ ಅವರ ವಿರುದ್ಧ ರೂಪಿಸಲಾದ ಷಡ್ಯಂತ್ರ ಎಂಬ ಅಭಿಪ್ರಾಯವನ್ನು ಸಾಕಷ್ಟು ಮಂದಿ ವ್ಯಕ್ತಪಡಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಅವರ ಪರವಾಗಿ ನಿಲ್ಲುವುದಾಗಿ ಬರೆದುಕೊಂಡಿದ್ದಾರೆ. ‘ಬಡವರ ಮಕ್ಳು ಬೆಳಿಬೇಕು’ ಎಂಬ ಧನಂಜಯ್ ಅವರ ಹಿಂದಿನ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಹಲವರ ವಾಟ್ಸಾಪ್ ಸ್ಟೇಟಸ್ಗಳಲ್ಲಿ ಈ ವಿಡಿಯೊ ಕಾಣಿಸಿಕೊಂಡಿದೆ. ಕನ್ನಡ ಚಿತ್ರರಂಗವು ನಟನ ಪರವಾಗಿ ನಿಲ್ಲಬೇಕೆಂಬ ಆಗ್ರಹಗಳು ಕೇಳಿ ಬಂದಿವೆ.
‘ನಾವು ನಿಮ್ಮೊಂದಿಗಿರುತ್ತೇವೆ’,#westandwithyou,#Wearewithdhananjaya,#WeSupportDhananjaya ಎಂಬ ಹ್ಯಾಷ್ ಟ್ಯಾಗಗಳ ಅಡಿಯಲ್ಲಿ ಹಲವರು ಬೆಂಬಲ ಸೂಚಿಸಿದ್ದಾರೆ.
ಧನಂಜಯ ಟಾರ್ಗೆಟ್ ಆಗಲು ಮುಖ್ಯ ಕಾರಣ, ಆತ ಒಬ್ಬ ಕನ್ನಡಪರ ವ್ಯಕ್ತಿ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಕನ್ನಡದ ಪರ ನಿಲ್ಲುವುದಿಲ್ಲ.
— Varun ks (@Varungowdaks) October 26, 2022
ಕನ್ನಡಪರ ಬೆಂಬಲ ಕೊಟ್ಟಿದ್ದ @Dhananjayaka ನಿಗೆ ಬೆಂಬಲ ನೀಡುವುದು ಇಂದು ನಮ್ಮ ಕರ್ತವ್ಯ.
ಡಾಲಿ @Dhananjayaka ಜವಾಬ್ದಾರಿಯುತ ನಟ. #HeadBush ಸಿನಿಮಾದಲ್ಲಿ ಯಾವುದೇ ಸಂಸ್ಕೃತಿಗೆ ಅಪಮಾನ ಮಾಡಿರುವುದು ನನಗಂತೂ ಕಂಡುಬಂದಿಲ್ಲ. ಸಮಯ ಸಾಧಕರು ತಮ್ಮ ಹಳೆ ವೈಷಮ್ಯವನ್ನು ತೀರಿಸಿಕೊಳ್ಳಲು ಈ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಅವರ ಹೇಡಿತನ ಪರಮಾವಧಿ. #WeStandWithDhananjaya
— Suhas D G (@Suhas_D_G) October 26, 2022
ಕರ್ನಾಟಕ ಫಿಲಂ ಚೇಂಬರ್ ಮೊದಲು ಸಿನಿಮಾ ಮಾಡುವವರ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು. ಆ ದೇವರಿಗೆ, ಈ ಧರ್ಮಕ್ಕೆ, ಯಾವುದೋ ಜಾತಿಗೆ, ಮತ್ಯಾವುದೋ ಆಚರಣೆಗೆ ಅಪಮಾನ ಆಯ್ತು ಅಂತ ಹುಯಿಲೆದ್ದಾಗ ಅವರ ಜೊತೆ ಪಂಚಾಯ್ತಿ ಮಾಡೋದು ಬಿಡಬೇಕು. ಬೇಕಿದ್ದರೆ ಕೋರ್ಟ್ಗೆ ಹೋಗಿ ಎಂದು ಹೇಳಬೇಕು. ಎಲ್ಲಾ ತಣ್ಣಗಾಗುತ್ತೆ. ಸಿನಿಮಾ ಮಾಡೋದು ಹೇಗೆ?@Dhananjayaka
— DP SATISH (@dp_satish) October 26, 2022
ದ್ವೇಷ, ಹಿಂಸೆಯನ್ನು ಟೀಕಿಸಿದ ಕಾರಣಕ್ಕೆ, ಒಬ್ಬ ನಟನ ಸಿನಿಮಾ ಸೋಲಿಸಲು ಸರ್ಕಾರವೂ ಸೇರಿ ಇಡೀ ಪಟಾಲಂ ಎಲ್ಲಾ ಕೆಲಸ ಬಿಟ್ಟು ನಿಂತಿದೆ ಅಂದರೇ ಅರ್ಥ ಮಾಡಿಕೊಳ್ಳಬೇಕು.
— Prathap ಕಣಗಾಲ್ (@Kanagalogy) October 26, 2022
ಇವರಿಗೆ, ಇವರನ್ನ, ಇವರ ನೀತಿಗಳನ್ನ, ದ್ವೇಷವನ್ನ ಟೀಕೆ ಮಾಡೋದನ್ನ ಇಲ್ಲಾ ಪ್ರಶ್ನೆ ಮಾಡೋದನ್ನ ಈ ಸರ್ವಧಿಕಾರಿ ಬೆಂಬಲಿಗ ಆತಂಕಿಗಳಿಗೆ ಸಹಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದು. https://t.co/MNrUYCZ6WF
Every film carries a disclaimer stating the intent is not to hurt anyone’s feelings. Please enjoy cinema as an entertainment medium. We are with you @Dhananjayaka
— Karthik Gowda (@Karthik1423) October 26, 2022
ಒಂದು ಸಿನಿಮಾದಲ್ಲಿ ಯಾವುದೊ ದೃಶ್ಯ ಆಕ್ಷೇಪಣೀಯವಾಗಿ ಕಂಡುಬಂದ ಕೂಡಲೆ ಕೆಂಡಾಮಂಡಲರಾಗುವ ನಾವುಗಳು ಒಮ್ಮೆ ಯೋಚಿಸಬೇಕು, ನಮ್ಮನ್ನು ನಂಬಿಸಿ ಅಮೂಲ್ಯವಾದ ಮತವನ್ನು ಸ್ವೀಕರಿಸಿ ಹಿಂದಿರುಗಿ ಉತ್ತಮ ಗುಣಮಟ್ಟದ ಸೌಲಭ್ಯ ಕಲ್ಪಿಸದ ಸರ್ಕಾರದ, ಶಾಸಕರ ಅಥವ ಅಧಿಕಾರಿಗಳ ವಿರುದ್ಧ ಈ ರೀತಿ ಪ್ರತಿಭಟಿಸಿದರೆ ಬಹುಷಃ ನಿಜ ಅರ್ಥದಲ್ಲಿ ಜೀವನ ಸುಧಾರಣೆ ಸಾಧ್ಯ.
— Rohith Simha (@rohith_simha) October 26, 2022
Principles of democracy, free speech, right to have a political opinion, liberty are ideology agnostic. I may fully oppose Dhananjaya ideologically but will support him on universal principles. https://t.co/JCw3NiQNfM
— Ganesh Chetan (@ganeshchetan) October 26, 2022
ಏನಿದು ವಿವಾದ?
ಚಿತ್ರದ ಸನ್ನಿವೇಶವೊಂದರಲ್ಲಿ ನಟ ಡಾಲಿ ಧನಂಜಯ್ ಅವರು ವೀರಗಾಸೆ ವೇಷಧಾರಿಗೆ ಒದ್ದು,ಆತನ ಮೇಲೆ ದಾಳಿ ನಡೆಸುತ್ತಾರೆ. ಈ ನಿರ್ದಿಷ್ಟ ವಿಡಿಯೊವನ್ನು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕೆಲ ಮಂದಿ, ವೀರಗಾಸೆ ಕಲೆಗೆ ಧನಂಜಯ್ ಹಾಗೂ ಚಿತ್ರ ತಂಡ ಅಪಮಾನ ಮಾಡಿದೆ ಎಂದು ವಾದಿಸಿದ್ದಾರೆ. ಆದರೆ, ಸನ್ನಿವೇಶದ ಪೂರ್ವಾಪರಗಳ ಬಗ್ಗೆ ಮಾಹಿತಿ ನೀಡಿಲ್ಲ. ಚಿತ್ರ ತಂಡ ಹಿಂದೂ ಧರ್ಮಕ್ಕೇ ಅಪಮಾನ ಮಾಡಿದೆ ಎಂಬ ವಾದವೂ ಕೇಳಿ ಬಂದಿದೆ.
ಧನಂಜಯ್ ಸ್ಪಷ್ಟನೆ
ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಧನಂಜಯ್ 'ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸೆಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ, ಕೂಲಂಕಷವಾಗಿ ವಿಮರ್ಶಿಸಬೇಕು’ ಎಂದು ಹೇಳಿದ್ದಾರೆ.
ಮರು ಚಿಂತನೆ ಸೂಕ್ತ ಎಂದ ಸಚಿವ
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್,ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.