‘ಲಕ್ಷ್ಮಣ’ ಚಿತ್ರದಿಂದ ಸ್ಯಾಂಡಲ್ವುಡ್ಗೆ ಕಾಲಿಟ್ಟ ಅನೂಪ್ಗಿದು ನಾಲ್ಕನೆ ಚಿತ್ರ. ಪುನೀತ್ ನಾಗರಾಜು ನಿರ್ದೇಶನದ ಈ ಚಿತ್ರದ ಮೂಲಕ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ‘ಸಸ್ಪೆನ್ಸ್ ಥ್ರಿಲ್ಲರ್ ಜಾನರ್ನ ಈ ಸಿನಿಮಾದಲ್ಲಿ ಚಿತ್ರಕಥೆ, ಮನರಂಜನೆಯೇ ಬಂಡವಾಳ. ಯಾವುದೇ ಸಂದೇಶ ನೀಡುವ ಚಿತ್ರವಲ್ಲ. ರಿವರ್ಸ್ ಸ್ಕ್ರೀನ್ಪ್ಲೆ ಮೂಲಕ ವಿಭಿನ್ನವಾಗಿರುವುದನ್ನು ಪ್ರಯತ್ನಿಸಿದ್ದೇವೆ. ಹೀಗಾಗಿ ಜನಕ್ಕೆ ಇಷ್ಟವಾಗಬಹುದೆಂಬ ನಿರೀಕ್ಷೆಯಿದೆ’ ಎಂದು ವಿಶ್ವಾಸದಿಂದಲೇ ಹೇಳಿದರು.