<p>ಅದ್ಧೂರಿ ಸಿನಿಮಾಗಳನ್ನು ನೀಡಿರುವ ‘ಹೊಂಬಾಳೆ ಫಿಲಂಸ್’ ಸಂಸ್ಥೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದ ನೀಡಲು ಸಜ್ಜಾಗಿದೆ. ಚಿತ್ರದ ಹೆಸರು ‘ಸಾಲಾರ್’. ಬುಧವಾರ ಈ ಚಿತ್ರ ನಿರ್ಮಿಸುತ್ತಿರುವ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಘೋಷಿಸಿದರು.</p>.<p>ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಟಾಲಿವುಡ್ನಲ್ಲಿ ‘ಬಾಹುಬಲಿ’ ಹಿಟ್ ಸಿನಿಮಾ ನೀಡಿರುವ ಪ್ರಭಾಸ್ ನಾಯಕನಾಗಿದ್ದಾರೆ. ಮುಂದಿನ ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ.</p>.<p>ಪ್ರಭಾಸ್ ಅವರ ‘ರಾಧೆ ಶ್ಯಾಂ’ ಬಿಡುಗಡೆಯ ನಂತರ ಈ ಚಿತ್ರದ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ನ ಮುಖ್ಯಸ್ಥ ವಿಜಯ್ ಕಿರಗಂದೂರು ಹೇಳಿದ್ದಾರೆ.</p>.<p>ಹೊಂಬಾಳೆ ಫಿಲ್ಮ್ಸ್ ನ ಕೆಜಿಎಫ್ ಚಾಪ್ಟರ್ 1 ಈಗಾಗಲೇ ಸೂಪರ್ ಹಿಟ್ ಆಗಿತ್ತು. ಚಾಪ್ಟರ್ -2 ಬಿಡುಗಡೆಯ ಹಂತದಲ್ಲಿದೆ. ಈ ಚಿತ್ರದ ಯಶಸ್ಸಿನ ಬಗೆಗೂ ನಿರೀಕ್ಷೆ ಹೊಂದಿರುವ ಚಿತ್ರತಂಡ ಅದೇ ಉತ್ಸಾಹದಲ್ಲಿ ಹೊಸ ಯೋಜನೆಗೆ ಸಿದ್ಧತೆ ನಡೆಸಿದೆ. ಅಂದಹಾಗೆ ಈ ಚಿತ್ರ ಎಲ್ಲ ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.</p>.<p>2014ರಲ್ಲಿ ‘ನಿನ್ನಿಂದಲೇ’ ಸಿನಿಮಾ ಮೂಲಕ ಆರಂಭವಾದ ಹೊಂಬಾಳೆ ಫಿಲ್ಮ್ಸ್ ಈ ಕ್ಷೇತ್ರಕ್ಕೆ ಕಾಲಿರಿಸಿತ್ತು. ‘ಮಾಸ್ಟರ್ ಪೀಸ್’, ‘ರಾಜಕುಮಾರ’, ‘ಕೆಜಿಎಫ್ ಚಾಪ್ಟರ್ -1’ ಹಾಗೂ ಬಿಡುಗಡೆಯ ಹೊಸ್ತಿಲಿನಲ್ಲಿರುವ ‘ಕೆಜಿಎಫ್– ಚಾಪ್ಟರ್ 2, ‘ಯುವರತ್ನ’ ವರೆಗೂ ಸಾಗಿ ಬಂದಿದೆ. ಈ ಸಂಸ್ಥೆ ಏಳು ವರ್ಷಗಳಲ್ಲಿ ಏಳು ಸಿನಿಮಾಗಳನ್ನು ನಿರ್ಮಿಸಿದೆ. ಇದರಲ್ಲಿ ಮೂರು ಪ್ಯಾನ್ ಇಂಡಿಯಾ ಚಿತ್ರಗಳು ಎನಿಸಿಕೊಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅದ್ಧೂರಿ ಸಿನಿಮಾಗಳನ್ನು ನೀಡಿರುವ ‘ಹೊಂಬಾಳೆ ಫಿಲಂಸ್’ ಸಂಸ್ಥೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದ ನೀಡಲು ಸಜ್ಜಾಗಿದೆ. ಚಿತ್ರದ ಹೆಸರು ‘ಸಾಲಾರ್’. ಬುಧವಾರ ಈ ಚಿತ್ರ ನಿರ್ಮಿಸುತ್ತಿರುವ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಘೋಷಿಸಿದರು.</p>.<p>ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಟಾಲಿವುಡ್ನಲ್ಲಿ ‘ಬಾಹುಬಲಿ’ ಹಿಟ್ ಸಿನಿಮಾ ನೀಡಿರುವ ಪ್ರಭಾಸ್ ನಾಯಕನಾಗಿದ್ದಾರೆ. ಮುಂದಿನ ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ.</p>.<p>ಪ್ರಭಾಸ್ ಅವರ ‘ರಾಧೆ ಶ್ಯಾಂ’ ಬಿಡುಗಡೆಯ ನಂತರ ಈ ಚಿತ್ರದ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ನ ಮುಖ್ಯಸ್ಥ ವಿಜಯ್ ಕಿರಗಂದೂರು ಹೇಳಿದ್ದಾರೆ.</p>.<p>ಹೊಂಬಾಳೆ ಫಿಲ್ಮ್ಸ್ ನ ಕೆಜಿಎಫ್ ಚಾಪ್ಟರ್ 1 ಈಗಾಗಲೇ ಸೂಪರ್ ಹಿಟ್ ಆಗಿತ್ತು. ಚಾಪ್ಟರ್ -2 ಬಿಡುಗಡೆಯ ಹಂತದಲ್ಲಿದೆ. ಈ ಚಿತ್ರದ ಯಶಸ್ಸಿನ ಬಗೆಗೂ ನಿರೀಕ್ಷೆ ಹೊಂದಿರುವ ಚಿತ್ರತಂಡ ಅದೇ ಉತ್ಸಾಹದಲ್ಲಿ ಹೊಸ ಯೋಜನೆಗೆ ಸಿದ್ಧತೆ ನಡೆಸಿದೆ. ಅಂದಹಾಗೆ ಈ ಚಿತ್ರ ಎಲ್ಲ ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.</p>.<p>2014ರಲ್ಲಿ ‘ನಿನ್ನಿಂದಲೇ’ ಸಿನಿಮಾ ಮೂಲಕ ಆರಂಭವಾದ ಹೊಂಬಾಳೆ ಫಿಲ್ಮ್ಸ್ ಈ ಕ್ಷೇತ್ರಕ್ಕೆ ಕಾಲಿರಿಸಿತ್ತು. ‘ಮಾಸ್ಟರ್ ಪೀಸ್’, ‘ರಾಜಕುಮಾರ’, ‘ಕೆಜಿಎಫ್ ಚಾಪ್ಟರ್ -1’ ಹಾಗೂ ಬಿಡುಗಡೆಯ ಹೊಸ್ತಿಲಿನಲ್ಲಿರುವ ‘ಕೆಜಿಎಫ್– ಚಾಪ್ಟರ್ 2, ‘ಯುವರತ್ನ’ ವರೆಗೂ ಸಾಗಿ ಬಂದಿದೆ. ಈ ಸಂಸ್ಥೆ ಏಳು ವರ್ಷಗಳಲ್ಲಿ ಏಳು ಸಿನಿಮಾಗಳನ್ನು ನಿರ್ಮಿಸಿದೆ. ಇದರಲ್ಲಿ ಮೂರು ಪ್ಯಾನ್ ಇಂಡಿಯಾ ಚಿತ್ರಗಳು ಎನಿಸಿಕೊಂಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>