ಬೆಂಗಳೂರು: ನಟಿಯರು ತಮ್ಮ 'ಪಾತಿವ್ರತ್ಯ' ಸಾಬೀತುಮಾಡಲು ಮೀಟೂ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ನಟ ಹುಚ್ಚ ವೆಂಕಟ್ ಹರಿಹಾಯ್ದಿದ್ದಾರೆ.
ನಿರ್ದೆಶಕರ ಸಂಘ ಹಾಗೂ ಮೀಟೂ ಆರೋಪ ಕುರಿತು ವೆಂಕಟ್ ಮಾತನಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಟಿಯರ ಮೇಲೆ ನಿಷೇಧ ಏರಲು ನೀವು ಯಾರು? ಅವರಿಗೆ ಆಗಿರುವ ಕಷ್ಟಗಳನ್ನು ನೀವು ನೋಡಿದ್ದೀರಾ? ಸಂಘದಲ್ಲಿರುವವರಿಗೆ ತಾಯಿ, ಅಕ್ಕ–ತಂಗಿಯರು ಯಾರು ಇಲ್ವಾ? ಎಂದು ನಿರ್ದೇಶಕ ಸಂಘವನ್ನು ಪ್ರಶ್ನಿಸಿದ್ದಾರೆ.
ನಿರ್ದೇಶಕರು ನಟಿಯರಿಗೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.