ಸಿನಿಮಾ ಬಿಡುಗಡೆ ಹೊಸ್ತಿಲಲ್ಲೇ ಚಿತ್ರರಂಗದಿಂದಲೇ ದೂರವಿರುವ ಮಾತುಗಳನ್ನು ಆಡಿದ್ದಾರೆ ಜೆಕೆ. ‘ಐರಾವನ್’ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವಕಾಶಗಳು ಸಿಕ್ಕಿದಾಗ ಅದಕ್ಕೆ ಕೆಲವರು ಅಡ್ಡಬಂದರು. ಅವಕಾಶ ಕೊಡದೇ ಇದ್ದರೂ ತೊಂದರೆ ಇಲ್ಲ ತುಳಿಯಬೇಡಿ. ದಿನದ ಕೊನೆಯಲ್ಲಿ ಮನಸ್ಸು ನಿಶ್ಚಿಂತೆಯಿಂದ ಇರಬೇಕು ಎಂಬುವುದಷ್ಟೇ ನನ್ನ ಬಯಕೆ. ಹಿಂದಿ ಧಾರಾವಾಹಿಗಳನ್ನು ಪೂರ್ಣಗೊಳಿಸಿ, ಕನ್ನಡ ಮಣ್ಣಿನಲ್ಲಿ ಕನ್ನಡ ಸಿನಿಮಾ ಮಾಡಬೇಕು ಎಂದು ಹಲವು ಹೊಸ ಹಿಂದಿ ಧಾರಾವಾಹಿಗಳ ಅವಕಾಶಗಳನ್ನು ತಿರಸ್ಕರಿಸಿ ಮರಳಿ ಬಂದೆ. ಆದರೆ ನನಗೆ ಸೂಕ್ತ ಬೆಂಬಲ ಸಿಗಲಿಲ್ಲ. ಹೀಗಾಗಿ ದೂರ ಉಳಿಯಲು ನಿರ್ಧರಿಸಿದ್ದೇನೆ. ಐರಾವನ್ ಹಾಗೂ ಮತ್ತೊಂದು ಸಿನಿಮಾ ಮಾಡಿದ್ದೇನೆ. ಅದುವೇ ಕೊನೆ. ಎರಡೂ ಸಿನಿಮಾಗಳಿಗೂ ಶೇ 100 ಪರಿಶ್ರಮ ಹಾಕಿದ್ದೇನೆ’ ಎಂದರು.