‘ಚೆಲ್ಲಾಟ’, ‘ಜೋಗಿ’, ‘ಚೆಲ್ಲಾಟ’, ಕೆಜಿಎಫ್ ಚಾಪ್ಟರ್ 1 ಮತ್ತು 2 ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳು ಹಾಗೂ ಹಲವಾರು ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ‘ಕೆಜಿಎಫ್ ಚಾಪ್ಟರ್ 1’ನಲ್ಲಿ ಅವರು ರಾಕಿ ಭಾಯ್ ಬಗ್ಗೆ ವಿವರಣೆ ನೀಡುತ್ತಾ, ‘ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ ಸ್ಟರ್...ಅವನು ಒಬ್ಬನೇ ಬರೋನು..ಮಾನ್ಸ್ಟರ್’ ಎಂದು ಹೇಳುವ ಸಂಭಾಷಣೆ ಜನಪ್ರಿಯವಾಗಿತ್ತು. ಹಾಸ್ಯ, ಖಳ ಸೇರಿದಂತೆ ವಿವಿಧ ಪೋಷಕ ಪಾತ್ರಗಳಲ್ಲಿ ಯಾವುದೇ ಅಭಿನಯಕ್ಕೂ ಅವರು ಸೈ ಎನಿಸಿಕೊಂಡಿದ್ದರು. ಚಿತ್ರರಂಗದ ದಿಗ್ಗಜರ ಜೊತೆ ತೆರೆ ಹಂಚಿಕೊಂಡಿದ್ದರು. ಮೋಹನ್ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.