ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವೇಕೆ ನೆಗೆಟಿವ್ ಆಲೋಚನೆ ಮಾಡುತ್ತೀರಿ: ರಮೇಶ್ ಅರವಿಂದ್ ಸ್ಫೂರ್ತಿಯ ಮಾತುಗಳು

Last Updated 6 ಜೂನ್ 2021, 12:26 IST
ಅಕ್ಷರ ಗಾತ್ರ

ಬೆಂಗಳೂರು: ನಟ ರಮೇಶ್ ಅರವಿಂದ್ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಸದಾ ಹೊಸತನ, ಸ್ಫೂರ್ತಿಯ ಮಾತುಗಳನ್ನು ಆಡುವ ಮೂಲಕ ಜನರಿಗೆ ಹುರುಪು ತುಂಬುತ್ತಾರೆ.

ಈ ಬಾರಿ ರಮೇಶ್ ಅರವಿಂದ್, ತಮ್ಮ ಅಧಿಕೃತ ಸಾಮಾಜಿಕ ತಾಣಗಳ ಖಾತೆಗಳಲ್ಲಿ ಹೊಸ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಕೋವಿಡ್ 19 ಎರಡನೇ ಅಲೆಯ ಸಂದರ್ಭದಲ್ಲಿ ಜನರು ಹೇಗಿದ್ದಾರೆ? ಜನರ ಜೀವನಶೈಲಿ ಮತ್ತು ಸಮಾಜದಲ್ಲಿನ ಬದುಕು ಎನ್ನುವ ಕುರಿತು ರಮೇಶ್ ಈ ವಿಡಿಯೊದಲ್ಲಿ ಮಾತನಾಡಿದ್ದಾರೆ.

ಈ ಸಂಕಷ್ಟದ ಸಮಯ ಕಳೆದು ಹೋಗಲಿದೆ, ಎಲ್ಲವೂ ಸರಿಯಾಗಲಿದೆ. ಆದರೆ ನಮ್ಮ ದೃಷ್ಟಿಕೋನ ಮತ್ತು ಆಲೋಚನೆಗಳು ಧನಾತ್ಮಕವಾಗಿದ್ದರೆ ಅದು ನಿಜಕ್ಕೂ ನಮಗೆ ಸಹಾಯ ಮಾಡುತ್ತದೆ ಎಂದು ರಮೇಶ್ ಹೇಳಿದ್ದಾರೆ.

ಕಥೆಯೊಂದರ ಉದಾಹರಣೆ ನೀಡುತ್ತಾ, ಅದರ ಮೂಲಕ ಜನರಿಗೆ ಸಂದೇಶ ನೀಡಿರುವ ರಮೇಶ್, ನೀವೇಕೆ ನೆಗೆಟಿವ್ ಯೋಚನೆ ಮಾಡುತ್ತೀರಿ? ಅದನ್ನು ಬಿಟ್ಟು ಹೊಸತನ ಯೋಚಿಸಿ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT